This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಗೋವಾ ಗೆ ಹೋಗಿದ್ದ ಶಿಕ್ಷಕಿ,ಶಿಕ್ಷಕ ಪರಿವಾರ – ಪ್ರವಾಸ ಮುಗಿಸಿ ಕೊಂಡು ಮರಳಿ ಬರುವಾಗ ದುರಂತ…..

WhatsApp Group Join Now
Telegram Group Join Now

ವಿಜಯಪುರ –

ಕೆಟ್ಟು ನಿಂತಿದ್ದ ಲಾರಿಗೆ ಕಾರವೊಂದು ಡಿಕ್ಕಿಯಾಗಿ ಶಿಕ್ಷಕಿ ಅವರ ಪತಿ ಶಿಕ್ಷಕ ಹಾಗೇ ಪುತ್ರ ಹೀಗೆ ಮೂವರು ಸಾವಿಗೀ ಡಾದ ಘಟನೆ ವಿಜಯಪುರ ದಲ್ಲಿ ಇಂದು ಬೆಳಿಗ್ಗೆ ನಡೆದಿದೆ ರಾಷ್ಟ್ರೀಯ ಹೆದ್ದಾರಿ 50 ರ ಹೊನಗನಹಳ್ಳಿ ಬಳಿ ಈ ಒಂದು ಭೀಕರ ಅಪಘಾತವಾಗಿದೆ.ಇನ್ನೂ ರಸ್ತೆ ಪಕ್ಕದಲ್ಲಿ ಕೆಟ್ಟು ನಿಂತುಕೊಂಡಿದ್ದ ಲಾರಿಗೆ ಕಾರು ವೇಗವಾಗಿ ಬಂದು ಡಿಕ್ಕಿಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಅಪಘಾತ ದಲ್ಲಿ ಕಾರಿನಲ್ಲಿದ್ದ ಒಂದೇ ಕುಟುಂಬದ ಮೂವರು ಹಾಗೂ ಲಾರಿ ಚಾಲಕ ಸ್ಥಳದಲ್ಲಿ ಸಾವಿಗೀಡಾದ್ದಾರೆ.

ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಹೊನಗನ ಹಳ್ಳಿ ಗ್ರಾಮದ ಬಳಿ ಎನ್ ಎಚ್ 50 ರಲ್ಲಿ ಘಟನೆ ನಡೆದಿದ್ದು ಕೆಟ್ಟು ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಲಾರಿ ದುರಸ್ಥಿಯಲ್ಲಿ ನಿರತನಾಗಿದ್ದ ಚಾಲಕ ಕೂಡಾ ಸಾವಿಗೀಡಾಗಿ ದ್ದಾನೆ.ಇನ್ನೂ ಇತ್ತ ಕಾರಿನಲ್ಲಿದ್ದ ವಿಜಯಪುರ ನಗರದ ಮೂಲದ ಶಿಕ್ಷಕಿ ಶ್ರೀಮತಿ ಸಾವಿತ್ರಿ ಕಟ್ಟಿಮನಿ ಇವರ ಪತಿ ಹಾಗೂ ಮಗ ಮೃತರಾದವರಾಗಿದ್ದಾರೆ. ಶಿಕ್ಷಕಿ ಎಚ್ ಪಿ ಎಸ್ ಹೊನ್ನಳ್ಳಿ ಶಾಲೆಯಲ್ಲಿ ಜಿಪಿಟಿ ಶಿಕ್ಷಕಿಯಾಗಿದ್ದರು.

ಇನ್ನೂ ಅವರ ಪತಿ ಮುಂಡೇವಾಡಿ ಪ್ರೌಢಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿದ್ದರು.ಇವರೊಂದಿಗೆ ಇವರ ಮಗು ಕೂಡಾ ಅಪಘಾತದಲ್ಲಿ ನಿಧನವಾಗಿದೆ.ಇಂದು ಬೆಳಗ್ಗೆ 9 ಗಂಟೆಗೆ ವಿಜಾಪುರಕ್ಕೆ ಆಗಮಿಸುತ್ತಿದ್ದಾಗ ಹೊನಗನಹಳ್ಳಿ ಸಮೀಪ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.ಕಾರಿನಲ್ಲಿದ್ದ ಇತರೆ ಮೂವರಿಗೆ ಸಣ್ಣ ಪುಟ್ಟ ಪ್ರಮಾಣದಲ್ಲಿ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಶಾಲೆಗೆ ದಸರಾ ರಜೆ ಹಿನ್ನಲೆಯಲ್ಲಿ ಪರಿವಾರದ ಜೊತೆ ಗೋವಾ ಗೆ ಪ್ರವಾಸಕ್ಕೆ ಹೋಗಿದ್ದರು.ಪ್ರವಾಸ ಮುಗಿಸಿ ಕೊಂಡು ಊರಿಗೆ ಬರುವಾಗ ಈ ಒಂದು ದೊಡ್ಡ ಭೀಕರ ಅಪಘಾತ ಸಂಭವಿಸಿದೆ ಪಾಪು ಸೇರಿ ನಾಲ್ಕು ಜನ ಲಾರಿ ಚಾಕಲನು ಕೂಡಾ ಮೃತರಾಗಿದ್ದಾರೆ ಇನ್ನೇನು ಸ್ವಲ್ಪ ದೂರು ಮನೆ ಸೇರುತ್ತಿದ್ದರು ಆದರೆ ಮನೆ ಸೇರುವ ಬದಲಿಗೆ ಆ ವಿಧಿ ಮಸನಕ್ಕೆ ಕರೆದುಕೊಂಡಿದ್ದಾರೆ

ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ತನಿಖೆ ಮಾಡತಾ ಇದ್ದಾರೆ


Google News

 

 

WhatsApp Group Join Now
Telegram Group Join Now
Suddi Sante Desk