This is the title of the web page
This is the title of the web page

Live Stream

[ytplayer id=’1198′]

April 2025
T F S S M T W
 12
3456789
10111213141516
17181920212223
24252627282930

| Latest Version 8.0.1 |

State News

ಎಸ್ಪಿ ಭೀಮಾಶಂಕರ ಗುಳೇದ ಕಾರು ಅಪಘಾತ – ಬದುಕುಳಿದ ಬೈಕ್ ಸವಾರರು

WhatsApp Group Join Now
Telegram Group Join Now

ಶಿವಮೊಗ್ಗ –

ಸಿಐಡಿ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಕಾರು ಅಪಘಾತವಾಗಿದೆ. ಇವರ ಸರಕಾರಿ ವಾಹನ ಮತ್ತು ಟಿವಿಎಸ್ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ. ಶಿವಮೊಗ್ಗದ ನಗರದ ಆಲ್ಕೋಳ ವೃತ್ತದಲ್ಲಿ ಈ ಒಂದು ಘಟನೆ ನಡೆದಿದೆ.

ಶಿವಮೊಗ್ಗದಲ್ಲಿ ಇತ್ತೀಚೆಗೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಹೆಚ್ಚುವರಿ ಬಂದೋಬಸ್ತಗಾಗಿ ಭೀಮಾಶಂಕರ ಗುಳೇದ ಶಿವಮೊಗ್ಗದಲ್ಲಿಯೇ ಬೀಡು ಬಿಟ್ಟಿದ್ದಾರೆ. ನಗರದಲ್ಲೇ ತಂಗಿರುವ ಇವರು ಇಂದು ಭಾರತ ಬಂದ್ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆಗಾಗಿ ನಗರದಲ್ಲಿ ರೌಂಡ ಹಾಕುತ್ತಿದ್ದರು.ಈ ಒಂದು ಸಮಯದಲ್ಲಿ ಇವರು ಚಲಿಸುತ್ತಿದ್ದ ಕಾರಿಗೆ ಮತ್ತು ಬೈಕ್ ಗೆ ಅಪಘಾತವಾಗಿದೆ.ಕೆಎ 04- ಜಿ 920 ಸರಕಾರಿ ವಾಹನವೂ ಪುಟ್ಟಪ್ಪ ಎಂಬುವವರಿಗೆ ಸೇರಿದ ಕೆಎ 16, ಜೆ 4783 ಟಿವಿಎಸ್ ಎಕ್ಸೆಲ್ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಎಕ್ಸೆಲ್ ವಾಹನದಲ್ಲಿದ್ದ ಇಬ್ಬರಿಗೆ ಗಾಯಗಳಾಗಿದ್ದು, ತಕ್ಷಣವೇ ಅವರಿಬ್ಬರನ್ನೂ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.ಇನ್ನೂ ಸರಕಾರಿ ವಾಹನದಲ್ಲಿ ಎಸ್ಪಿ ಭೀಮಾಶಂಕರ ಗುಳೇದ ಅವರು ತಮ್ಮ ಸರ್ಕಾರಿ ಕಾರನ್ನ ಅಲ್ಲಿಯೇ ಬಿಟ್ಟು ಕರ್ತವ್ಯಕ್ಕೇ ತೆರಳಿದ್ದಾರೆ.

ಅಪಘಾತದಲ್ಲಿ ಕಾರಿನ ಮುಂಭಾಗ ಜಖಂಗೊಂಡಿದ್ದು ಇತ್ತ ಗಾಯಗೊಂಡಿರು ಇಬ್ಬರು ಬೈಕ್ ಸವಾರರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಸ್ಥಳಕ್ಕೇ ಭೇಟಿ ನೀಡಿದ ಪೊಲೀಸರು ಪರಿಶೀಲನೆ ಮಾಡಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk