ರಾಯಚೂರು –
ಬೆಳೆ ಹಾನಿಯಿಂದ ಕಂಗಾಲಾಗಿದ್ದ ಮತ್ತೊಬ್ಬ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಚೂರಿನಲ್ಲಿ ನಡೆದಿದೆ.10 ದಿನಗಳ ಕಾಲ ಅಕಾಲಿಕ ಮಳೆ ಹಿನ್ನೆಲೆಯಲ್ಲಿ ಕಟಾವಿಗೆ ಬಂದ ಐದು ಎಕರೆ ಭತ್ತ ನೆಲಸಮವಾಗಿದೆ ಇದರಿಂದಾಗಿ ಕಂಗಾಲಾಗಿದ್ದ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ
3-4 ಲಕ್ಷ ಸಾಲ ಮಾಡಿ ಬೆಳೆದಿದ್ದ ಭತ್ತ ಮಳೆಯಿಂದಾಗಿ ಹಾಳಾಗಿದೆ.ಭತ್ತ ನೆಲಕಚ್ಚಿದನ್ನ ನೋಡಿದ ರೈತ ರಂಗಣ್ಣ (30) ಮನನೊಂದು ಆತ್ಮಹತ್ಯೆಗೆ ಶರಣಾದರು.ರಾಯ ಚೂರು ಜಿಲ್ಲೆ ಸಿಂಧನೂರು ತಾ. ರೌಂಡಗುಂದಾ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.ಮನೆಯಲ್ಲಿಯೇ ವಿಷಸೇವಿಸಿ ಪ್ರಾಣಬಿಟ್ಟಿದ್ದಾನೆ ರೈತ ರಂಗಣ್ಣ.ಮನೆಗೆ ಆಧಾರವಾಗಿದ್ದ ರೈತ ರಂಗಣ್ಣನ ಸಾವಿನಿಂದ ಮುಗಿಲು ಮುಟ್ಟಿದ ಆಕ್ರಂ ದನ.ಕಳೆದ ವಾರ ಲಿಂಗಸುಗೂರು ತಾಲೂಕಿನ ಇಬ್ಬರು ರೈತರು ಸಾವಿಗೆ ಶರಣಾಗಿದ್ದರು.ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.