This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

State News

BEO ಗೆ ಮನವಿ ಸಲ್ಲಿಸಿದ ಶಿಕ್ಷಕರು ಹೆಚ್ಚುವರಿ ಕರ್ತವ್ಯ ದಿಂದ ಮುಕ್ತ ಮಾಡಿ ಬೋಧನಾ ಕಾರ್ಯಕ್ಕೆ ಸೂಕ್ತವಾಗಿ ಅವಕಾಶ ನೀಡಿ…..

WhatsApp Group Join Now
Telegram Group Join Now

ಸಾಗರ –

ಕೆಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಾಗರ ದಲ್ಲಿ ಶಿಕ್ಷಕರು ಬಿಇಓ ಅವರಿಗೆ ಮನವಿ ಸಲ್ಲಿಸಿದರು ಹೌದು ಶೈಕ್ಷಣಿಕ ಚಟುವಟಿಕೆಗಳ ಮಾಹಿತಿಗಳನ್ನು ವಿವಿಧ ಆಪ್‌ ಗಳ ತಂತ್ರಾಂಶಗಳ ಮೂಲಕ ತುಂಬಿಸಲು ಸಮಸ್ಯೆಯಾಗು ತ್ತಿದ್ದು ಶಿಕ್ಷಕರನ್ನು ಹೆಚ್ಚುವರಿ ಕರ್ತವ್ಯಗಳಿಂದ ಮುಕ್ತಗೊ ಳಿಸಿ ಬೋಧನಾ ಕಾರ‍್ಯಕ್ಕೆ ಸೂಕ್ತ ಸಮಯಾವಕಾಶ ಕಲ್ಪಿಸ ಬೇಕೆಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಪದಾಧಿಕಾರಿಗಳು ಕ್ಷೇತ್ರಶಿಕ್ಷಣಾಧಿಕಾರಿ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದರು.2021- 22 ನೇ ಶೈಕ್ಷಣಿಕ ಸಾಲಿನಲ್ಲಿ ಓದು ಕರ್ನಾಟಕ,ನೂರು ದಿನಗಳ ಓದುವ ಆಂದೋಲನ,ಎಸ್‌ಡಿಎಂಸಿ ಸಭೆಗಳು,ಡಿಬಿಟಿ ಮುಂತಾದ ಶೈಕ್ಷಣಿಕ ಚಟುವಟಿಕೆಗಳ ಮಾಹಿತಿಗಳನ್ನು ಹೊಸ ಹೊಸ ಆಪ್ ಮುಖಾಂತರ ಇಲಾಖೆಗೆ ಮುಖ್ಯ ಶಿಕ್ಷಕರು ರವಾನಿಸಬೇಕಾಗಿದೆ.ಈ ಕಾರ‍್ಯದ ನಿರ್ವಹಣೆಗೆ ಮುಖ್ಯಶಿಕ್ಷಕರಿಗೆ ಹಲವು ತಾಂತ್ರಿಕ ಮತ್ತು ಭೌತಿಕ ತೊಂದರೆ ಗಳಾಗುತ್ತಿವೆ.ಇಂತಹ ಹೆಚ್ಚುವರಿ ಕಾರ‍್ಯ ನಿರ್ವಹಣೆಯಿಂ ದಾಗಿ ತರಗತಿಯ ಬೋಧನಾ ಮತ್ತು ಕಲಿಕಾ ಸಮಯದ ಮೇಲೆ ಅತೀವ ಪರಿಣಾಮ ಉಂಟಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ

.

ತಾಂತ್ರಿಕ ಕಾರ‍್ಯಭಾರಗಳನ್ನು ಮುಖ್ಯಶಿಕ್ಷಕರಿಂದ ಮುಕ್ತಗೊ ಳಿಸಿ,ಶಿಕ್ಷಕರು ನೀಡುವ ಹಾರ್ಡ್ ಕಾಪಿ,ಸಾಫ್ಟ್ ಕಾಪಿಗಳ ಆಧಾರದ ಮೇಲೆ ಕ್ಷೇತ್ರ ಸಂಪನ್ಮೂಲ ಕೇಂದ್ರಗಳಿಗೆ ಅಥವಾ ಸಮೂಹ ಸಂಪನ್ಮೂಲ ಕೇಂದ್ರಗಳಿಗೆ ಇಂತಹ ಶೈಕ್ಷಣಿಕ ಚಟುವಟಿಕೆಗಳ ನಿರ್ವಹಣೆಯನ್ನು ಕೊಡಬೇಕು. ಈ ಸಂಬಂಧ ಕೇಂದ್ರಗಳಿಗೆ ಅಗತ್ಯ ತಾಂತ್ರಿಕ,ಆರ್ಥಿಕ ಸೌಲಭ್ಯ ಒದಗಿಸಬೇಕು.ಸಿಆರ್‌ಪಿ,ಬಿಆರ್‌ಸಿ ವ್ಯಾಪ್ತಿಗೆ ತಂದು ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಬೋಧನೆ ಮತ್ತು ಕಲಿಕಾ ಸಮಯದ ಸದುಪಯೋಗ ಆಗುವಂತೆ ಅವಕಾಶ ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಗಣಪತಪ್ಪ,ಎಂ.ವೈ.ಮೂರ್ತಿ ಶಾರದ,ಕೆ.ಜಗನ್ನಾಥ್,ತಿಮ್ಮಪ್ಪ,ಮಂಜುಳ,ಮಾಲತೇಶಪ್ಪ, ಸತೀಶ್ ನಾಯ್ಕ್ ಮತ್ತಿತರ ಶಿಕ್ಷಕರು ಹಾಜರಿದ್ದರು.


Google News

 

 

WhatsApp Group Join Now
Telegram Group Join Now
Suddi Sante Desk