ಹುಬ್ಬಳ್ಳಿ ಧಾರವಾಡ –
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (HDMC) ವತಿಯಿಂದ ಜಿಐಝಡ್ (GIZ) ಇಂಡಿಯಾ ಸಂಸ್ಥೆಯ ಸಹಯೋಗದೊಂದಿಗೆ ಪಾಲಿಕೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳಿಗಾಗಿ “ಮುನ್ಸಿಪಲ್ ಬಾಂಡ್ಗಳು ಹಾಗೂ ನವೀನ ನಗರ ಹಣಕಾಸು ವ್ಯವಸ್ಥೆಗಳ” ಕುರಿತು ಒಂದು ದಿನದ ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ನಗರದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಆರ್ಥಿಕ ಸಂಪನ್ಮೂಲ ಗಳನ್ನು ಕ್ರೋಢೀಕರಿಸುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿ ನಲ್ಲಿ, ಆದಾಯ ಸಂಗ್ರಹಣೆ ಮತ್ತು ಸುಸ್ಥಿರ (ಸ್ಥಿರ) ಮೂಲ ಸೌಕರ್ಯಗಳಿಗೆ ಹಣಕಾಸು ಒದಗಿಸುವ ನವೀನ ವ್ಯವಸ್ಥೆಗಳ ಬಗ್ಗೆ ಚುನಾಯಿತ ಪ್ರತಿನಿಧಿಗಳಲ್ಲಿ ಅರಿವು ಮೂಡಿಸುವುದು ಈ ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿದೆ. ಮುನ್ಸಿಪಲ್ ಬಾಂಡ್ಗಳ ಮೂಲಕ ಬಂಡವಾಳ ಆಕರ್ಷಿಸುವ ಮತ್ತು ನಗರದ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವ ಕುರಿತು ತಜ್ಞರು ಮಾಹಿತಿ ಹಂಚಿಕೊಳ್ಳಲಿದ್ದಾರೆ.
ಈ ಮಹತ್ವದ ಕಾರ್ಯಾಗಾರದಲ್ಲಿ ವಿವಿಧ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ನುರಿತ ತಜ್ಞರು ಭಾಗವಹಿಸಿ ಮಾರ್ಗದರ್ಶನ ನೀಡಲಿದ್ದಾರೆ. ಪ್ರಮುಖವಾಗಿ ಪವರ್ಟೆಕ್ ಎಂಜಿನಿಯರಿಂಗ್ನ ಅಧ್ಯಕ್ಷರಾದ ಸುಜಾತಾ ಶ್ರೀಕುಮಾರ್, ಎ.ಕೆ ಕ್ಯಾಪಿಟಲ್ಸ್ನ ನಿರ್ದೇಶಕರಾದ ವರುಣ್ ಕೌಶಿಕ್, ಎನ್ಎಸ್ಇ (NSE) ವಿಭಾಗದ ಮುಖ್ಯಸ್ಥರಾದ ಹರೀಶ್ ಅಹುಜಾ, ಜಿಐಝಡ್ (GIZ) ತಾಂತ್ರಿಕ ಸಲಹೆಗಾರರಾದ ಕೃಷ್ಣ ದೇಸಾಯಿ, ಕ್ಲೈಮೇಟ್ ಬಾಂಡ್ಸ್ ಇನಿಶಿಯೇಟಿವ್ನ ದಕ್ಷಿಣ ಏಷ್ಯಾ ಮುಖ್ಯಸ್ಥರಾದ ನೇಹಾ ಕುಮಾರ್, ಕೇರ್ ಅನಾಲಿಟಿಕ್ಸ್ ಆಂಡ್ ಅಡ್ವೈಸರಿಯ ನಿರ್ದೇಶಕ ರಾದ ಕೇದಾರ್ ದೇಶಪಾಂಡೆ ಹಾಗೂ ಇಂಡಿಯಾ ರೇಟಿಂಗ್ಸ್ ಅಂಡ್ ರಿಸರ್ಚ್ನ ಮುಖ್ಯ ಅರ್ಥಶಾಸ್ತ್ರಜ್ಞರಾದ ದೇವೇಂದ್ರ ಪಂತ್, ತೇಜಸ್ ಪಾಲ್ ಕೆಪಿಎಂಜಿ ನಿರ್ದೇಶಕರು, ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಮುನ್ಸಿಪಲ್ ಬಾಂಡ್ಗಳ ಮೂಲಕ ಬಂಡವಾಳ ಆಕರ್ಷಿಸುವ ಮತ್ತು ನಗರದ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವ ಕುರಿತು ಸಮಗ್ರ ಮಾಹಿತಿ ಹಂಚಿಕೊಳ್ಳಲಿದ್ದಾರೆ.
ಈ ಕಾರ್ಯಾಗಾರದಲ್ಲಿ ಮಹಾಪೌರರು, ಉಪಮಹಾಪೌರರು, ಪಾಲಿಕೆಯ ಆಯುಕ್ತರಯ ಹಾಗೂ ಪಾಲಿಕೆಯ ಎಲ್ಲಾ ಸದಸ್ಯರು ಗಳು ಮತ್ತು ಪಾಲಿಕೆಯ ಹಿರಿಯ ಅಧಿಕಾರಿಗಳು ಭಾಗಿಯಾಗ ಲಿದ್ದಾರೆ.
ದಿನಾಂಕ: 23 ಮಾರ್ಚ್ 2026 (ಸೋಮವಾರ)
ಸಮಯ: ಬೆಳಿಗ್ಗೆ 10:00 ಗಂಟೆಗೆ
ಸ್ಥಳ: ಹೋಟೆಲ್ ಡೆನಿಸನ್ಸ್ ಹುಬ್ಬಳ್ಳಿ
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……



