This is the title of the web page
This is the title of the web page

Live Stream

[ytplayer id=’1198′]

July 2025
T F S S M T W
 12
3456789
10111213141516
17181920212223
24252627282930
31  

| Latest Version 8.0.1 |

State News

ನಿವೃತ್ತಿ ದಿನ ನೆನಪುಳಿಯುವ ಕೆಲಸ ಮಾಡಿ ಶಾಲೆಯ ಋಣ ತೀರಿಸಿದ ಮುಖ್ಯಶಿಕ್ಷಕ – ನಿವೃತ್ತಿ ದಿನ ಮುಖ್ಯಶಿಕ್ಷಕ ಮಾಡಿದ ಕೆಲಸ ರಾಜ್ಯಕ್ಕೆ ಮಾದರಿಯಾಯಿತು…..

WhatsApp Group Join Now
Telegram Group Join Now

ಮಹಾಲಿಂಗಪುರ

ನಿವೃತ್ತಿ ದಿನದಂದು ಮುಖ್ಯಶಿಕ್ಷಕ ರೊಬ್ಬರು ನೆನಪು ಉಳಿಯುವ ಕೆಲಸವನ್ನು ಮಾಡಿ ರಾಜ್ಯವೇ ಮೆಚ್ಚುವ ಕೆಲಸವನ್ನು ಮಾಡಿದ್ದಾರೆ ಹೌದು ಮದಭಾಂವಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕರಾಗಿ 9 ವರ್ಷ 9 ತಿಂಗಳ ಸೇವೆ ಸಲ್ಲಿಸಿ ವೃತ್ತಿಯಾದ ಕೆ.ಎಂ.ಬಿಜಾಪುರ ಅವರು ನಿವೃತ್ತಿ ದಿನ ಕೈಗೊಂಡ ನಿರ್ಧಾರ ಬಡ ಮಕ್ಕಳ ಕುರಿತಾದ ಕಾಳಜಿ ತಾವು ಕಲಿಸಿದ ಸರ್ಕಾರಿ ಶಾಲೆಯ ಮೇಲಿನ ಪ್ರೀತಿ, ಅಭಿಮಾನಕ್ಕೆ ಸಾಕ್ಷಿಯಾಗಿದೆ.

ಬಿಜಾಪುರ ಅವರು ಮದಭಾಂವಿ ಸರ್ಕಾರಿ ಪ್ರೌಢ ಶಾಲೆಯ 10ನೇ ವರ್ಗದ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 2ಲಕ್ಷ ರೂ ಗಳನ್ನು ಠೇವಣಿ ಮಾಡಿ ಪ್ರತಿವರ್ಷ ಆ ಠೇವಣಿ ಯಿಂದ ಬರುವ ಬಡ್ಡಿ ಹಣದಲ್ಲಿ ಕಡು ಬಡವಿದ್ಯಾರ್ಥಿಗಳ ಶೈಕ್ಷಣಿಕ ಸಹಾಯ ನೀಡುವುದಾಗಿ ಘೋಷಿಸಿದ್ದಾರೆ. ಸೇವಾವಧಿ ಮುಗಿದ ನಂತರ ಇಷ್ಟೊಂದು ಬೃಹತ್‌ ಮೊತ್ತ ಶಾಲೆಗೆ ನೀಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಮದಭಾಂವಿ ಗ್ರಾಮಸ್ಥರು,ಎಸ್‌ ಡಿಎಂಸಿ ಪದಾಧಿಕಾರಿ ಗಳು ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿದ್ದರಿಂದ ಶಾಲೆಯ ಎಸ್‌ ಡಿಎಂಸಿ ಪದಾಧಿಕಾರಿಗಳಾದ ರವಿ ಕಲ್ಲೋಳ್ಳಿ (ಅಧ್ಯಕ್ಷ) ಪರಪ್ಪ ಉರಭಿನವರ(ಉಪಾಧ್ಯಕ್ಷ)ಮಹ್ಮದ ಹೂಲಿಕಟ್ಟಿ,ಮಲ್ಲಪ್ಪ ಅರಭಾಂವಿ,ಮಹಾಲಿಂಗ ಇಟ್ನಾಳ, ಸುರೇಶ ಸುತಾರ,ಶಂಕರ ವಗ್ಗರ,ಮುತ್ತವ್ವ ಮಾಂಗ, ಮಹಾದೇವಿ ಮಾಂಗ,ಗ್ರಾಮದ ಹಿರಿಯರಾದ ಬಸಪ್ಪ ವಗ್ಗರ,ವಿನೋದ ಉಳ್ಳಾಗಡ್ಡಿ,ಎಂ.ಬಿ.ನಾಯಕ,ಸದಾಶಿವ ಕೋಳೆಕಾರ,ಸತ್ಯಪ್ಪ ಮುಧೋಳ ಸೇರಿದಂತೆ ಗ್ರಾಮಸ್ಥರು ಊರಲ್ಲಿ ಬ್ಯಾನರ್‌ ಕಟ್ಟಿ,ಕೆ.ಎಂ.ಬಿಜಾಪೂರ ದಂಪತಿ ಯನ್ನು ಚಕ್ಕಡಿ ಬಂಡಿಯಲ್ಲಿ ಕುಳ್ಳಿರಿಸಿ ಗ್ರಾಮದ ತುಂಬಾ ಮೆರವಣಿಗೆ ಮಾಡಿದ್ದಾರೆ. ಪ್ರೀತಿ, ಅಭಿಮಾನದಿಂದ ಸನ್ಮಾನಿಸಿ-ಬೀಳ್ಕೊಟ್ಟಿದ್ದಾರೆ.

ಇನ್ನೂ ಈ ಒಂದು ವಿಚಾರ ಕುರಿತು ಶಾಲೆಯ ಸಹ ಶಿಕ್ಷಕ ರೊಬ್ಬರು ಮಾತನಾಡಿ ನಮ್ಮ ಶಾಲೆಯ ಮುಖ್ಯ ಶಿಕ್ಷಕ ರಾಗಿದ್ದ ಕೆ.ಎಂ.ಬಿಜಾಪುರ ಅವರು ತಮ್ಮ ಸೇವಾ ನಿವೃತ್ತಿ ದಿನವೇ ಶಾಲೆಯ ಬಡಮಕ್ಕಳ ಶೈಕ್ಷಣಿಕ ನೆರವಿಗಾಗಿ 2 ಲಕ್ಷ ರೂ.ಠೇವಣಿ ಇಡುವುದಾಗಿ ಘೋಷಿಸಿರುವುದು ಅವರ ಲ್ಲಿನ ಶೈಕ್ಷಣಿಕ ಕಾಳಜಿ,ಬಡಮಕ್ಕಳ ಮೇಲಿನ ಪ್ರೀತಿಗೆ ಸಾಕ್ಷಿಯಾಗಿದೆ.ಅವರು ಮಾದರಿಯಾಗಿದ್ದಾರೆ ಎಂದು ಆಯ್ ಎಸ್ ಪಾಟೀಲ್ ಹೇಳಿದರು.


Google News

 

 

WhatsApp Group Join Now
Telegram Group Join Now
Suddi Sante Desk