This is the title of the web page
This is the title of the web page

Live Stream

[ytplayer id=’1198′]

December 2025
T F S S M T W
 123
45678910
11121314151617
18192021222324
25262728293031

| Latest Version 8.0.1 |

State News

ನಿಯಮಬಾಹಿರ ಮುಖ್ಯ ಮತ್ತು ಹಿರಿಯ ಮುಖ್ಯ ಶಿಕ್ಷಕರ ಬಡ್ತಿ ವಿರುದ್ಧ ಸಿಡಿದೆದ್ದ ಶಿಕ್ಷಕರು ಸಭೆಯಲ್ಲಿ ಕೈಗೊಂಡರು ಮತ್ತೊಂದು ಹೋರಾಟಕ್ಕೆ ನಿರ್ಣಯ…..

WhatsApp Group Join Now
Telegram Group Join Now

ವಿಜಯಪುರ –

ನಿಯಮಬಾಹಿರ ಮುಖ್ಯ ಶಿಕ್ಷಕರ ಹಾಗೂ ಹಿರಿಯ ಮುಖ್ಯ ಶಿಕ್ಷಕರ ಬಡ್ತಿ ರದ್ದತಿಗಾಗಿ ಹೋರಾಟಕ್ಕೆ ಶಿಕ್ಷಕರು ಮುಂದಾಗಿ ದ್ದು ಸಭೆಯಲ್ಲಿ ಮಹತ್ವದ ನಿರ್ಣಯ ವನ್ನು ಕೈಗೊಂಡಿ ದ್ದಾರೆ ಹೌದು ತಿಕೋಟಾ,ವಿಜಯಪೂರ ಗ್ರಾಮೀಣ ಶಿಕ್ಷಕರ ಸಂಘದ ಸಭೆಯನ್ನು ಎ ಬಿ ದಡಕೆ ಅವರ ಮನೆಯಲ್ಲಿ ಜರುಗಿತು.ಸಭೆಯಲ್ಲಿ ಈ ಕೆಳಗಿನಂತೆ ಚರ್ಚಿಸಿ ಈ ನಿರ್ಣಯ ಕೈಗೊಳ್ಳಲಾಯಿತು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಜಾಂಚಿಗಳಾದ ಸುರೇಶ್ ಶಡಶ್ಯಾಳ ಬಡ್ತಿ ವಂಚಿತ ಹಾಗೂ ಜೇಷ್ಠತೆ ಹೊಂದಿರುವ ಅಮಾಯಕ ಶಿಕ್ಷಕರಿಗೆ ನ್ಯಾಯ ಒದಗಿಸುವ ಕೊಡುವ ಬದಲು ತಾವೆ ಬಡ್ತಿ ನಿಯಮ ಉಲ್ಲಂಘಿಸಿ ನಿವೃತ್ತ ಡಿ ಡಿ ಪಿ ಆಯ್ ರವರಿಂದ ನಿವೃತ್ತಿಯ 5-6 ದಿನಗಳ ನಂತರ ಖೊಟ್ಟಿ ಬಡ್ತಿ ಆದೇಶ ಪಡೆದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇಟ್ಟಂಗಿಹಾಳ Lt 4 ವಿಜಯಪುರ ಗ್ರಾಮೀಣ ದಿಂದ ವಿಜಯಪುರ ನಗರದ ಸರ್ಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ನಂ 3 (ಕವಲಿ ಗೇಟ್ A ವಲಯ)ಗೆ ಸಹ ಶಿಕ್ಷಕ ಹುದ್ದೆಯಿಂದ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ‌ಪಡೆದು 08.07 2022 ರಂದು ಹಾಜರಾಗಿರುತ್ತಾರೆ.ಆ ಮೂಲಕ ಕೌನ್ಸಲಿಂಗ್ ನಲ್ಲಿ ಸ್ಥಳ ಆಯ್ಕೆ ಮಾಡಿಕೊಳ್ಳದೆ ಅಮಾಯಕ ಶಿಕ್ಷಕರಿಗೆ ಅನ್ಯಾಯವೆಸಗಿದ್ದಾರೆ ಎಂದು ಸಭೆಯಲ್ಲಿ ಚರ್ಚೆ ಮಾಡಲಾಯಿತು.

ಇವರು ಮಾಡಿರುವ ಈ ಕಾರ್ಯ ಬೇಲಿಯೆ ಎದ್ದು ಹೋಲ‌ ಮೇದಂತೆ ಆಗಿದೆ ಅಮಾಯಕ ಶಿಕ್ಷಕರಿಗೆ ನ್ಯಾಯ ಒದಗಿಸಿಕೊಡುವ ಉನ್ನತ ಹುದ್ದೆಯಲ್ಲಿ ಇದ್ದು ಕೊಂಡು ತಾವೆ ಆ ಹುದ್ದೆಗೆ ಅಗೌರವ ಉಂಟುಮಾಡಿ ದ್ದಾರೆ ತಮ್ಮ ಸ್ವಾರ್ಥಕ್ಕಾಗಿ A B ವಲಯಕ್ಕೆ ಶಿಕ್ಷಕರಿಗೆ ಬಡ್ತಿ ನೀಡುವ ಕಾರ್ಯಕ್ಕೆ ತಡೆ ಮಾಡಲು ಇವರೆ ಮೂಲ ಕಾರಣಿಭೂತರಾಗಿರುತ್ತಾರೆ.ಎನ್ ವಿ ಹೊಸೂರ ಇವರು ನಿವೃತ ಉಪನಿರ್ದೇಶಕರು ಇವರು ನಿವೃತ್ತಿ ಪೂರ್ವದಲ್ಲಿ ಹಾಗೂ ನಿವೃತ್ತಿ ನಂತರದಲ್ಲಿ ಮುಖ್ಯ ಗುರುಗಳ ಹಾಗೂ ಹಿರಿಯ ಮುಖ್ಯ ಗುರುಗಳ ಬಡ್ತಿ ಗಳನ್ನು ಜೇಷ್ಠತಾ ಪಟ್ಟಿಯಲ್ಲಿ ಇರದ ಶಿಕ್ಷಕರಿಗೆ ಖೊಟ್ಟಿ ಬಡ್ತಿ ಆದೇಶ ನೀಡಿರುವ ಕುರಿತು ಹಾಗೂ ವಿವಿಧ ತಾಲೂಕಗಳಲ್ಲಿ ಶಿಕ್ಷಕರನ್ನು ವಿನಾಕಾರಣ ಅಮಾನತ್ತ ಮಾಡಿ ನಗರ ಹಾಗೂ ನಗರ ಸಮೀಪದ ಶಾಲೆಗಳಿಗೆ ಸ್ಥಳ ನಿಯುಕ್ತಿಗೊಳಿಸಿರುತ್ತಾರೆ.ಈ ಮೇಲಿನ ವಿಷಯ ಗಳ‌ ಬಗ್ಗೆ ಸುಧೀರ್ಘವಾಗಿ ಸಭೆಯಲ್ಲಿ ಚರ್ಚಿಲಾಯಿತು

ದಿನಾಂಕ 11-07-2022 ರಂದು ಸಾಯಂಕಾಲ 5-00 ಗಂಟೆಗೆ ಮಾನ್ಯ ಡಿಡಿಪಿಐ ವಿಜಯಪೂರ ಹಾಗೂ ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿರವರಿಗೆ ಈ ಕುರಿತು ಮನವಿಸಲ್ಲಿಸಲು ನಿರ್ಣಯ ಕೈಗೊಳ್ಳಲಾಯಿತು
ಮಾನ್ಯ ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ ರವರಿಗೆ ಖುದ್ದಾಗಿ ಹೋಗಿ ಮನವಿ ಸಲ್ಲಿಸಲು ನಿರ್ಣಯಿಸಲಾಯಿತು.ನಿಗದಿತ ಅವಧಿಯ ನಂತರ ನ್ಶಾಯ ದೊರೆಯದಿದ್ದರೆ.ಅನ್ಶಾಯಕ್ಕೊಳಗಾದ ಶಿಕ್ಷಕರಿಗೆ ನ್ಶಾಯ ದೊರೆಯುವವರೆಗೆ ಡಿ ಡಿ ಪಿ ಆಯ್ ವಿಜಯಪುರ ಕಛೇರಿ ಎದುರು ಆಮರಣ ಉಪವಾಸ ಕೈಗೊಳ್ಳಲು ತೀರ್ಮಾನಿಸಲಾಯಿತು ಸಭೆಯಲ್ಲಿ ಅರ್ಜುನ ‌ಲಮಾಣಿ ಹಣಮಂತ ಬಿ ಕೊಣದಿ,ಸಿ ಟಿ ಜಿತ್ತಿ,ಆರ್ ಎಮ್ ಮೇತ್ರಿ ಅಶೋಕ ಬಜಂತ್ರಿ,ಅಶೋಕ ಚನಬಸುಗೋಳ,ಅಶೋಕ ಬೂದಿಹಾಳ,ಸಾಬು ಗಗನಮಾಲಿ,ಎಮ್ ಎಸ್ ಟಕ್ಕಳಕಿ ಎಮ್ ಎನ್ ನಾಯಕ ಹಾಗೂ ಪಧಾಧಿಕಾರಿಗಳು ಹಾಗೂ ಪ್ರತಿನಿಧಿಗಳು ಉಪಸ್ಥಿತರಿದ್ದರು.
ವಂದನೆಗಳೊಂದಿಗೆ
ತಮ್ಮ
ಅಶೋಕ ಬಿ ದಡಕೆ
ಅಧ್ಶಕ್ಷರು ತಿಕೋಟಾ ಮತ್ತು ಆರ್ ಎಂ ಮೇತ್ರಿ ಅಧ್ಶಕ್ಷರು ವಿಜಯಪೂರ ಗ್ರಾಮೀಣ


Google News

 

 

WhatsApp Group Join Now
Telegram Group Join Now
Suddi Sante Desk