This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಯಶಸ್ವಿಯಾಗಿ ನಡೆಯಿತು ಕಾವ್ಯ ಸಿಂಚನ ಕಾರ್ಯಕ್ರಮ – ಶಿಕ್ಷಕ ಮಾಲತೇಶ್ ಬಬ್ಬಜ್ಜಿ ಅವರ ತಂದೆಯವರ ನೆನಪಿಗಾಗಿ ಹಮ್ಮಿ ಕೊಂಡಿದ್ದ ವಿಶೇಷ ಕಾರ್ಯಕ್ರಮ ದಲ್ಲಿ ಶಿಕ್ಷಕರು ಸಾಹಿತಿಗಳಿಂದ ಕವಿತೆಗಳ ವಾಚನ…..

WhatsApp Group Join Now
Telegram Group Join Now

ಚಿತ್ತಾಪೂರ –

ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮತ್ತು ದಿವಂಗತ ಕರಿಬಸಪ್ಪ ಮಹದೇವಪ್ಪ ಬಬ್ಬಜ್ಜಿ ಅವರ ಸ್ಮರಣಾರ್ಥ ಶಿಕ್ಷಕರಿಗಾಗಿ ಚಿತ್ತಾಪೂರದಲ್ಲಿ ವಿಶೇಷವಾದ ಕಾರ್ಯಕ್ರಮವನ್ನುವನ್ನು ಹಮ್ಮಿಕೊಳ್ಳಲಾಗಿತ್ತು.ಶಿಕ್ಷಕ ಮಾಲತೇಶ್ ಬಬ್ಬಜ್ಜಿ ಅವರು ತಮ್ಮ ತಂದೆಯ ಸವಿನೆನ ಪಿಗಾಗಿ ಈ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು

ಹೌದು ಶಿಕ್ಷಕರಲ್ಲಿನ ಪ್ರತಿಭೆಯನ್ನು ಗುರುತಿಸುವ ಉದ್ದೇಶ ದಿಂದ ಜೊತೆಗೆ ಅವರಿಗೊಂದು ವೇದಿಕೆಯನ್ನು ಕಲ್ಪಿಸುವ ದೃಷ್ಟಿಯಿಂದಾಗಿ ಶಿಕ್ಷಕ ಮಾಲತೇಶ್ ಅವರು ಈ ಒಂದು ವಿಶೇಷವಾದ ಕಾರ್ಯಕ್ರಮವನ್ನು ಆಯೋಜಿಸಿದ್ದರು ದಿಗ್ಗಾವಂಕರ್ ಚಾರಿಟೇಬಲ್ ಟ್ರಸ್ಟ್ ಚಿತ್ತಾಪೂರ ಮತ್ತು ನಾಗಾವಿ ಸಾಂಸ್ಕ್ರತಿಕ ಪ್ರತಿಷ್ಠಾನ ಚಿತ್ತಾಪೂರ ಇವರ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್ 15 ರಂದು ಚಿತ್ರಾಪೂರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಈ ಒಂದು ಕಾರ್ಯಕ್ರಮವನ್ನು ಕಲಬುರಗಿ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿರುವ ಮಲ್ಲಯ್ಯಾ ಗುತ್ತೇದಾರ ಉದ್ಘಾಟನೆಯನ್ನು ಮಾಡಿದರು.

ನಾಗಾವಿ ಸಾಂಸ್ಕ್ರತಿಕ ಟ್ರಸ್ಟ್ ನ ನಾಗಯ್ಯಾಸಾವಾಮಿ ಅಲ್ಲೂರ್ ಅಧ್ಯಕ್ಷತೆಯನ್ನು ವಹಿಸಲಿದ್ದರು.ಮುಖ್ಯ ಅತಿಥಿಗಳಾಗಿ ಮಲ್ಲಿಕಾರ್ಜುನ ಸೇಡಂ,ಮಾಲತೇಶ್ ಬಬ್ಬಜ್ಜಿ,ವಿರೇಂದ್ರ ಕೋವಲ್ಲೂರ್,ಮಹಾಂತೇಶ ಪಂಚಾಳ ಶಿವಪುತ್ರ ಕರ್ಣಿಕ ಸೇರಿದಂತೆ ಹಲವರು ಪಾಲ್ಗೊಂಡಿದ್ದರು

ಇನ್ನೂ ಈ ಒಂದು ವೇದಿಕೆಯ ಸಭಾ ಕಾರ್ಯಕ್ರಮದ ನಂತರ ಕವಿಗಳಿಂದ ಕವನ ವಾಚನ ನಡಿಯಿತು.20 ಕ್ಕೂ ಹೆಚ್ಚು ಯುವ ಸಾಹಿತಿಗಳ ಮನಸ್ಸುಗಳಿಂದ ಕವಿತೆ ವಾಚನ ನಡೆಯಿತು. ಶಿಕ್ಷಕ ಮಾಲತೇಶ್ ಬಬ್ಬಜ್ಜಿ ಸೇರಿದಂತೆ ಹಲವರು ತಮ್ಮದೇಯಾದ ರಚನೆಯ ಕವಿತೆಗಳನ್ನು ವಾಚನ ಮಾಡಿದರು.

ಕವಿಗಳು ಸಾಹಿತ್ಯಾಭಿಮಾನಿಗಳು ಬಿಡುವು ಮಾಡಿಕೊಂಡು ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಗಮಿಸಿ ಯಶಸ್ವಿಗೊಳಿಸಿದರು.ಇನ್ನೂ ಎರಡು ವೇದಿಕೆಯ ಪರವಾಗಿ ಶಿಕ್ಷಕರು ಮತ್ತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆಯ ಕಾರ್ಯದರ್ಶಿಯಾಗಿರುವ ಮಾಲತೇಶ್ ಬಬ್ಬಜ್ಜಿ ಯವರು ಸರ್ವರಿಗೂ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk