This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

ಮಿನಿಷ್ಟ್ರು ಶಾಲೆಗೆ ಬಂದ್ರು ಮೇಷ್ಟ್ರು ಬರಲಿಲ್ಲ ಸಿಡಿದೆದ್ದ ಶಿಕ್ಷಣ ಸಚಿವರಿಂದ ಖಡಕ್ ಸೂಚನೆ…..

WhatsApp Group Join Now
Telegram Group Join Now

ಬೆಂಗಳೂರು –

ಕರೊನಾದಿಂದ ಆರ್ಥಿಕ ಸಂಕಷ್ಟ ಎದುರಾಗಿರುವ ಕಾರಣಕ್ಕೆ ಪಾಲಕರು ತಮ್ಮ ಮಕ್ಕಳನ್ನು ದಾಖಲು ಮಾಡಿಸಲು ಸರ್ಕಾರಿ ಶಾಲೆಯತ್ತ ಮುಖ ಮಾಡಿದ್ದಾರೆ.ಆದರೆ ಕೆಲ ಶಿಕ್ಷಕರು ಮಾಡುವ ಅಧ್ವಾನಕ್ಕೆ ಸರ್ಕಾರಿ ಶಾಲೆ ಎಂದರೆ ಮತ್ತೆ ಮೂಗು ಮುರಿಯುವಂತೆ ಮಾಡುತ್ತಿದೆ.ಇದಕ್ಕೆ ಇತ್ತೀಚಿಗೆ ನಾಗಮಂಗಲ ತಾಲೂಕು ನೆಲ್ಲಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆ ಸಾಕ್ಷಿ

ಜಿಲ್ಲೆಯಲ್ಲಿ ಅಷ್ಟೇ ಅಲ್ಲ ರಾಜ್ಯದ ಕೆಲ ಶಾಲೆಗಳಲ್ಲಿ ಶಿಕ್ಷಕರು ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಎನ್ನುವುದು ಬಹಿ ರಂಗ ಸತ್ಯವಾಗಿದ್ದು ತಡವಾಗಿ ಬಂದರೂ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿ ಏನು ಆಗಿಲ್ಲವೆನ್ನುವಂತೆ ಸುಮ್ಮನಾ ಗುತ್ತಾರೆ.ಇಂತಹುದೇ ಪ್ರಕರಣ ನೆಲ್ಲಿಗೆರೆ ಶಾಲೆಯಲ್ಲಿ ನಡೆದಿದೆ.ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರೇ ಶಾಲೆಗೆ ಭೇಟಿ ನೀಡಿದಾಗಲೂ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೂವರು ಶಿಕ್ಷಕರು ಸಮಯಕ್ಕೆ ಸರಿಯಾಗಿ ಬಂದಿಲ್ಲ.ವಿದ್ಯಾರ್ಥಿಗಳೆಲ್ಲರೂ ಶಾಲೆ ಆವರಣದಲ್ಲಿ ಶಿಕ್ಷಕರಿಗಾಗಿ ಕಾಯುತ್ತಿದ್ದರು.ಇದು ಸಚಿವರ ಸಿಟ್ಟಿಗೆ ಕಾರಣವಾಗಿದೆ.

ಸಚಿವರ ಎದುರೇ ಅವ್ಯವಸ್ಥೆ ಹೌದು ಸಚಿವ ಬಿ.ಸಿನಾಗೇಶ್ ಅವರು ಅನಿರೀಕ್ಷಿವಾಗಿ ನೆಲ್ಲಿಗೆರೆ ಶಾಲೆಗೆ ಭೇಟಿ ನೀಡಿದ್ದಾರೆ ಆ ವೇಳೆ ವಿದ್ಯಾರ್ಥಿಗಳೆಲ್ಲರೂ ಶಾಲೆಯ ಆವರಣದಲ್ಲಿ ಶಿಕ್ಷಕರಿಗಾಗಿ ಕಾಯುತ್ತಿದ್ದರು.ಬೆಳಗ್ಗೆ 10.30 ಆಗಿದ್ದರೂ ಶಿಕ್ಷಕರು ಹಾಜರಾಗಿರಲಿಲ್ಲ ಸುಮಾರು 20 ನಿಮಿಷ ವಿದ್ಯಾರ್ಥಿಗಳು ಹಾಗೂ ಸ್ಥಳೀಯರನ್ನು ಮಾತನಾಡಿ ಕೆಲ ಮಾಹಿತಿ ಪಡೆದುಕೊಂಡಿದ್ದಾರೆ.ನಂತರ ಅಲ್ಲಿಂದ ಹೊರಟಿ ದ್ದಾರೆ.

ಇದಾದ ನಂತರ ಶಾಲೆಗೆ ಆಗಮಿಸಿರುವ ಮೂವರು ಶಿಕ್ಷಕರು ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಿದ್ದಾರೆ.ಸಚಿವರ ಭೇಟಿ ಮಾಹಿತಿ ಪಡೆದು ಶಾಲೆಗೆ ಆಗಮಿಸಿದ ಬಿಇಒ ಸಹಿ ಮಾಡಿರುವ ಹಾಜರಾತಿಗೆ ಹಸಿರು ಪೆನ್‌ನಿಂದ ರೌಂಡಪ್ ಮಾಡಿದ್ದಾರೆ.ದಾಖಲೆಯೊಂದಿಗೆ ಮಾಹಿತಿಯನ್ನು ಡಿಡಿಪಿಐಗೆ ರವಾನಿಸಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk