This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

ಮೀಸಲಾತಿ ಹೋರಾಟದಲ್ಲಿ ಪಾಲ್ಗೊಂಡ ಮಾಜಿ ಸಚಿವ ವಿನಯ ಕುಲಕರ್ಣಿ – ಬಿಜೆಪಿ ನಾಯಕರು ಮಠಾಧೀಶರೊಂದಿಗೆ ಚಳುವಳಿಯಲ್ಲಿ ಪಾಲ್ಗೊಂಡು ಮೀಸಲಾತಿಗಾಗಿ ಧ್ವನಿ ಎತ್ತಿದ ಜನನಾಯಕ

WhatsApp Group Join Now
Telegram Group Join Now

ಹುಕ್ಕೇರಿ

ಮಕ್ಕಳ ಶಿಕ್ಷಣಕ್ಕಾಗಿ ಹಾಗೂ ಯುವ ಜನರ ಉದ್ಯೋಗಕ್ಕಾಗಿ ಹಮ್ಮಿಕೊಂಡಿದ್ದ 2A ಮೀಸ ಲಾತಿಗಾಗಿ ಹೋರಾಟದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಪಾಲ್ಗೊಂಡು ಧ್ವನಿ ಎತ್ತಿದರು ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ನಡೆದ ಒಂದು ದಿನದ ಚಳುವಳಿಯಲ್ಲಿ ಪಾಲ್ಗೊಂಡು ಮೀಸಲಾತಿ ಗಾಗಿ ಪಾದಯಾತ್ರೆ ಮಾಡುತ್ತಾ ಆಗ್ರಹವನ್ನು ಮಾಡಿದರು.

ಪ್ರಥಮ ಜಗದ್ಗುರು ಬಸವ ಮೃತ್ಯುಂಜಯ ಸ್ವಾಮೀಜಿ, ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ ಧರ್ಮಕ್ಷೇತ್ರ ಕೂಡಲ ಸಂಗಮ ಸಾನಿಧ್ಯದಲ್ಲಿ ಮಹತ್ವದ ಚಳುವಳಿಗೆ ಸಮಾಜ ಬಾಂಧವರು ಹಾಲಿ ಮಾಜಿ ಜನಪ್ರತಿ ನಿಧಿಗಳು ವಿವಿಧ ಸಂಘಟನೆಗಳ ವಿವಿಧ ಘಟಕ ಗಳು ರಾಷ್ಟ್ರೀಯ, ರಾಜ್ಯ  ಜಿಲ್ಲಾ  ತಾಲ್ಲೂಕು  ನಗರ ಗ್ರಾಮ ಘಟಕಗಳ ಪದಾಧಿಕಾರಿಗಳು ನೆರೆದ ಜನಸ್ತೋಮ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ವಿನಯ ಕುಲಕರ್ಣಿ ಮೀಸಲಾತಿ ಕುರಿತಂತೆ ಮಾಹಿತಿಯನ್ನು ನೀಡಿ ಈ ಕೂಡಲೇ ಸಮಾಜಕ್ಕೆ ಮೀಸಲಾತಿಯನ್ನು ನೀಡುವಂತೆ ಒತ್ತಾಯವನ್ನು ಮಾಡಿದರು.

ಈ ಸಮಯದಲ್ಲಿ ಪಂಚಮಸಾಲಿ ಸಮಾಜದ ರಾಷ್ಟ್ರಾಧ್ಯಕ್ಷರಾದ ವಿಜಯಾನಂದ ಕಾಶಪ್ಪನವರ ಮಾಜಿ ಸಚಿವರುಗಳಾದ ಎ ಬಿ ಪಾಟೀಲ, ಶಶಿಕಾಂತ ನಾಯಕ ,ವಿಧಾನ ಪರಿಷತ ಸದಸ್ಯ ರಾದ ಚನ್ನರಾಜ ಹಟ್ಟಿಹೊಳಿ,ಶಾಸಕರುಗಳಾದ ಬಸನಗೌಡ ಪಾಟೀಲ ಯತ್ನಾಳ,ಲಕ್ಷ್ಮಿ ಹೆಬ್ಬಾಳ ಕರ್,ಅರವಿಂದ ಬೆಲ್ಲದ ಸೇರಿದಂತೆ ಬೆಳಗಾವಿ ಜಿಲ್ಲಾ ಪಂಚಮಸಾಲಿ ಮುಖಂಡರು ಉಪಸ್ಥಿತರಿದ್ದರು.


Google News

 

 

WhatsApp Group Join Now
Telegram Group Join Now
Suddi Sante Desk