This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Education NewsState News

ಶಿಕ್ಷಕ ಬಂಧನ CID ಪೊಲೀಸರ ಕಾರ್ಯಾಚರಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಬಂಧಿತರ ಸಂಖ್ಯೆ

WhatsApp Group Join Now
Telegram Group Join Now

ವಿಜಯಪುರ

ಅಕ್ರಮ ಶಿಕ್ಷಕರ ನೇಮಕಾತಿ ಹಗರಣದ ನಂಟು ಈಗ ಜಿಲ್ಲೆಗೂ ಬೆಸೆದಿದ್ದು ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಿದ ಆರೋಪದ ಮೇಲೆ ಜಿಲ್ಲೆಯ ಓರ್ವ ಸರ್ಕಾರಿ ಪ್ರೌಢಶಾಲಾ ಶಿಕ್ಷಕರನ್ನು ಬೆಂಗಳೂರಿನ ಸಿಓಡಿ ಪೊಲೀಸರು ವಿಜಯಪುರ ದಲ್ಲಿ ಬಂಧಿಸಿದ್ದಾರೆ ಹೌದು 2012- 14 ರಲ್ಲಿ ನಡೆದಿದ್ದ ನೇಮಕಾತಿ ಅಕ್ರಮ ಕುರಿತು ಕಾರ್ಯಾಚರಣೆ ಮುಂದುವರಿದಿದೆ.

2012-14ರ ನಡುವೆ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಕಳೆದ ತಿಂಗಳು ಜಿಲ್ಲೆಯ ಶಾಲೆಗಳಿಗೆ ಭೇಟಿ ನೀಡಿ ಕಳಂಕಿತ ಶಿಕ್ಷಕರು ಕೆಲಸ ಮಾಡುತ್ತಿದ್ದ ಶಾಲೆಗಳಿಗೆ ಭೇಟಿ ನೀಡಿ ಅವರಿಂದ ಮಾಹಿತಿ ಪಡೆದಿದ್ದರು. ಆ ನಿಟ್ಟಿನಲ್ಲಿ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಭೈರವಾಡಗಿಯಲ್ಲಿ ಶಿಕ್ಷಕನಾಗಿರುವ ಅಶೋಕ ಚೌಹಾನ್ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ.

ಈ ಹಿಂದೆ ಚಿತ್ರದುರ್ಗ ಜಿಲ್ಲೆಯ ಜಗಳೂರಿನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ಯಿದ್ದ ಅವರು, ವಿಜಯ ಪುರಕ್ಕೆ ವರ್ಗಾವಣೆಯಾಗಿ ಬಂದಿದ್ದರು. ಇವರನ್ನು ಬಂದಿಸುವಂತೆ ಸೂಚನೆ ಪಡೆದ ಕಲಬುರಗಿ ಸಿಓಡಿ ಅಧಿಕಾರಿಗಳು ಅಶೋಕ್ ಚವ್ಹಾಣ್ ಅವರನ್ನು ವಶಕ್ಕೆ ಪಡೆದು ಬೆಂಗಳೂರು ಸಿಓಡಿ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದರು.

ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾ ಯಿತು.ಬಳಿಕ ಸಿಓಡಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ.ಅಕ್ರಮ ನೇಮಕಾತಿಯಲ್ಲಿ ಚೌಹಾಣ್ ಪಾತ್ರ ಏನು ಎನ್ನುವ ಬಗ್ಗೆ ತನಿಖೆ ಚುರುಕುಗೊಂಡಿದೆ.

ಶಿಕ್ಷಕ ಅಶೋಕ ಚೌಹಾಣ್ ಬಂಧನದ ಬಳಿಕ ಮತ್ತಷ್ಟು ಕುಳಗಳು ಬಲೆಗೆ ಬೀಳುವ ಸಾಧ್ಯತೆ ಗಳಿವೆ.ಚೌಹಾಣ್ ಬಂಧನದ ಬಳಿಕ ಹಲವರಲ್ಲಿ ನಡುಕ ಶುರುವಾಗಿದೆ.ಸಿಓಡಿ ವಿಚಾರಣೆಯಲ್ಲಿ ಶಿಕ್ಷಕ ಅಶೋಕ್ ಚೌಹಾಣ್ ಏನೆಲ್ಲ ಮಾಹಿತಿ ಬಾಯ್ಬಿಡಲಿದ್ದಾನೆ ಎನ್ನುವ ಬಗ್ಗೆ ಕುತೂಹಲ ಕಾಡುತ್ತಿದೆ. ಆತ ನೀಡುವ ಮಾಹಿತಿ ಮತ್ಯಾರ ಬುಡಕ್ಕೆ ಬಿಸಿನೀರು ತರಲಿದೆಯೋ ಅನ್ನೋದನ್ನ ಕಾದುನೋಡಬೇಕಿದೆ.


Google News

 

 

WhatsApp Group Join Now
Telegram Group Join Now
Suddi Sante Desk