This is the title of the web page
This is the title of the web page

Live Stream

[ytplayer id=’1198′]

November 2025
T F S S M T W
 12345
6789101112
13141516171819
20212223242526
27282930  

| Latest Version 8.0.1 |

ಧಾರವಾಡ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹುಟ್ಟು ಹಬ್ಬದ ದಿನದಂದು ಹಲವರಿಗೆ ಬೆಳಕಾದ ಕುಂದಗೋಳ ಬಿಜೆಪಿ ಯುವ ಮೋರ್ಚಾ ಟೀಮ್ – ಸರಳ ಸಾಕಾರ ಮೂರ್ತಿಯ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿ ಮಾದರಿಯಾದರು ಬಸವರಾಜ ಚಿಕ್ಕಹರಕುಣಿ ಮತ್ತು ಟೀಮ್

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹುಟ್ಟು ಹಬ್ಬದ ದಿನದಂದು ಹಲವರಿಗೆ ಬೆಳಕಾದ ಕುಂದಗೋಳ ಬಿಜೆಪಿ ಯುವ ಮೋರ್ಚಾ ಟೀಮ್ – ಸರಳ ಸಾಕಾರ ಮೂರ್ತಿಯ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿ ಮಾದರಿಯಾದರು ಬಸವರಾಜ ಚಿಕ್ಕಹರಕುಣಿ ಮತ್ತು ಟೀಮ್
WhatsApp Group Join Now
Telegram Group Join Now

ಕುಂದಗೋಳ

ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಬಿಜೆಪಿ ಯುವ ಮೋರ್ಚಾ ದವರು ಅರ್ಥಪೂರ್ಣವಾದ ಕಾರ್ಯಕ್ರಮವನ್ನು ಮಾಡುವ ಮೂಲಕ ತಮ್ಮ ನಾಯಕರ ಹುಟ್ಟು ಹಬ್ಬವನ್ನು ನಾಲ್ಕಾರು ಜನ ಮೆಚ್ಚುವಂತೆ ಆಚರಣೆ ಮಾಡಿ ಮಾದರಿಯಾಗಿದ್ದಾರೆ.

ಹೌದು ಕೇಂದ್ರ ಸಚಿವ ಪ್ರಹ್ಲಾಜ್ ಜೋಶಿ ಯವರ ಹುಟ್ಟು ಹಬ್ಬದ ಅಂಗವಾಗಿ ಕುಂದಗೋಳ ಮತ ಕ್ಷೇತ್ರದ ಕುಬಿಹಾಳ ಗ್ರಾಮದಲ್ಲಿ ಉಚಿತ ನೇತ್ರ ತಪಾಸಣೆ ಶಸ್ತ್ರಚಿಕಿತ್ಸೆ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿತ್ತು.ಕುಂದಗೋಳ ತಾಲ್ಲೂಕು ಬಿಜೆಪಿ ಯುವ ಮೋರ್ಚಾ ಟೀಮ್ ನವರು ಹಮ್ಮಿಕೊಂ ಡಿದ್ದ ಈ ಒಂದು ಕಾರ್ಯಕ್ರಮವನ್ನು ಪಕ್ಷದ ನಾಯಕರಾದ ಎಮ್ ಆರ್ ಪಾಟೀಲ್ ರು ಚಾಲನೆ ನೀಡಿದರು.

ಇದೇ ವೇಳೆ ಈ ಒಂದು ಶಿಬಿರದಲ್ಲಿ ಪಾಲ್ಗೊಂಡ ನೂರಾರು ಜನರಿಗೆ ನೇತ್ರ ತಪಾಸಣೆಯನ್ನು ಮಾಡಿ ಅಂತಿಮವಾಗಿ 105 ಜನ ನೋಂದಣಿ ತೆಗೆದುಕೊಂಡು ತಪಾಸಣೆ ಮಾಡಿಸಿ ಶಸ್ತ್ರ ಚಿಕಿತ್ಸೆ ಯನ್ನು ಮಾಡಿಸಿ ಮನೆಗೆ ಕಳಿಸಿಕೊಡಲಾಯಿತು.

ಈ ಸಂದರ್ಭದಲ್ಲಿ ಜನಪ್ರಿಯ ನಾಯಕರಾದ  ಎಮ್ ಆರ್ ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ತಾಲೂಕಾ ಬಿಜೆಪಿ ಯುವಮೋಚಾ ಅಧ್ಯಕ್ಷರಾದ ಬಸವರಾಜ ಚಿಕ್ಕಹರಕುಣಿ , ಮಂಡಲ ಅಧ್ಯಕ್ಷರಾದ ರವಿಗೌಡ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಾಲತೇಶ ಶ್ಯಾಗೋಟಿ ,ಕುಬಿಹಾಳ ಗ್ರಾಮ ಪಂಚಾಯತಿ ಉಪ್ಯಾಧ್ಯಕ್ಷರಾದ ನಾಗನಗೌಡ ಸ್ಮಾತರ, ತಾಲೂಕಾ ಪ್ರಾಧಾನ ಕಾರ್ಯದರ್ಶಿ ಭರಮಗೌಡ ದ್ಯಾಮನಗೌಡ್ರ ಮತ್ತು  ಗ್ರಾಮದ ಹಿರಿಯರು ಹಾಗೂ ಭಾಜಪ ಪದಾಧಿಕಾರಿಗಳು ಉಪಸ್ಥಿತರಿ ದ್ದರು.ಇನ್ನೂ ಈ ಒಂದು ಮಹಾನ್ ಕಾರ್ಯದ ಮೂಲಕ ಸಮಾಜಕ್ಕೆ ಇತರರಿಗೆ ಇವರು ಮಾದರಿಯಾಗಿದ್ದಾರೆ.

ಸುದ್ದಿ ಸಂತೆ ನ್ಯೂಸ್

 

 


Google News

 

 

WhatsApp Group Join Now
Telegram Group Join Now
Suddi Sante Desk