This is the title of the web page
This is the title of the web page

Live Stream

[ytplayer id=’1198′]

August 2025
T F S S M T W
 123456
78910111213
14151617181920
21222324252627
28293031  

| Latest Version 8.0.1 |

State News

7ನೇ ವೇತನ ಆಯೋಗದ ಈವರೆಗಿನ ಅಪ್ಡೇಟ್ ಮಾಹಿತಿ – ಸರ್ಕಾರದಿಂದ ಆದೇಶದ ನಂತರ ಕಚೇರಿ ಆರಂಭದ ಬಳಿಗೆ ಸಮಿತಿಯ ಈವರೆಗೆ ಮಾಡಿರುವ ಕಾರ್ಯ ಚಟುವಟಿಕೆಗಳ ಕಂಪ್ಲೀಟ್ ಮಾಹಿತಿ

7ನೇ ವೇತನ ಆಯೋಗದ ಈವರೆಗಿನ ಅಪ್ಡೇಟ್ ಮಾಹಿತಿ – ಸರ್ಕಾರದಿಂದ ಆದೇಶದ ನಂತರ ಕಚೇರಿ ಆರಂಭದ ಬಳಿಗೆ ಸಮಿತಿಯ ಈವರೆಗೆ ಮಾಡಿರುವ ಕಾರ್ಯ ಚಟುವಟಿಕೆಗಳ ಕಂಪ್ಲೀಟ್ ಮಾಹಿತಿ
WhatsApp Group Join Now
Telegram Group Join Now

ಬೆಂಗಳೂರು

ರಾಜ್ಯದ ಸರ್ಕಾರಿ ನೌಕರರಿಗೆ ಈಗಾಗಲೇ 6ನೇ ವೇತನ ಅವಧಿ ಮುಕ್ತಾಯವಾಗಿದ್ದು ಹೊಸ ವೇತನ ಪರಿಷ್ಕರಣೆಗಾಗಿ ಈಗಾಗಲೇ ರಾಜ್ಯ ಸರ್ಕಾರ 7ನೇ ವೇತನ ಆಯೋಗವನ್ನು ರಚನೆ ಮಾಡಿದ್ದು ಈ ಕುರಿತಂತೆ ಈಗಾಗಲೇ ಅಧಿಕೃತ ವಾದ ಆದೇಶವನ್ನು ಕೂಡಾ ಹೊರಡಿಸಿದ್ದು ಸಮಿತಿಯ ಅಧ್ಯಕ್ಷರಾಗಿರುವ ಡಾ ಸುಧಾಕರ್ ರಾವ್ ನೇತ್ರತ್ವದಲ್ಲಿನ ಈ ಒಂದು ಸಮಿತಿ ರಚನೆ ಕುರಿತಂತೆ ರಾಜ್ಯ ಸರ್ಕಾರದಿಂದ ಅಧಿಕೃತವಾದ ಆದೇಶ ಹೊರಬೀಳುತ್ತಿದ್ದಂತೆ ಇದರ ಬೆನ್ನಲ್ಲೇ ಕಚೇರಿಯನ್ನು ನೀಡುತ್ತಿದ್ದಂತೆ ಸಮಿತಿಯು ಕಾರ್ಯ ಚಟುವಟಿಕೆಗಳನ್ನು ಸಧ್ಯ ಅಧಿಕೃತವಾಗಿ ಆರಂಭವನ್ನು ಮಾಡಿದ್ದಾರೆ

ಈಗಾಗಲೇ ಒಂದು ಸುತ್ತು ಆರ್ಥಿಕ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಈ ಹಿಂದೆ ಇದ್ದ 6ನೇ ವೇತನ ಆಯೋಗದ ಸಮಗ್ರ ಡಾಟಾವನ್ನು ಪಡೆದುಕೊಂಡು ಇದರೊಂದಿಗೆ ರಾಜ್ಯದ 7ನೇ ವೇತನ ಆಯೋಗಕ್ಕೆ ಒಳಪಡುವ ಸರ್ಕಾರಿ ನೌಕರರ ಸಮಗ್ರವಾದ ಮಾಹಿತಿಯನ್ನು ಕೂಡಾ ತಗೆದುಕೊಂಡಿರುವ ಡಾ ಸುಧಾಕರ್ ನೇತ್ರತ್ವದ ಲ್ಲಿನ ಸಮಿತಿಯು ತಮ್ಮ ಕಾರ್ಯ ಚಟುವಟಿಕೆಗ ಳನ್ನು ತೀವ್ರಗೊಳಿಸಿದ್ದು ಸಧ್ಯ ಕಚೇರಿಯಲ್ಲಿ 7ನೇ ವೇತನ ಆಯೋಗ ರಚನೆ ಕುರಿತಂತೆ ಮೇಲಿಂದ ಮೇಲೆ ಬಿಡುವಿಲ್ಲದೇ ರಾಜ್ಯದ ಸರ್ಕಾರಿ ನೌಕರ ರಿಗೆ ವೇತನ ಪರಿಷ್ಕರಣೆ ಕುರಿತಂತೆ ಮಾಹಿತಿ ಗಳನ್ನು ಮುಂದಿಟ್ಟುಕೊಂಡು ಕೆಲಸ ಕಾರ್ಯ ಗಳನ್ನು ಮಾಡಲಾಗುತ್ತಿದೆ.

ಸಧ್ಯ ಇನ್ನೇನು ಕೆಲ ದಿನಗಳು ಕಳೆದರ ಸಾಕು ಮೇಲಿಂದ ಮೇಲೆ ಒಂದರ ಮೇಲೊಂದರಂತೆ ಚುನಾವಣೆಗಳು ಬರಲಿದ್ದು ಹೀಗಾಗಿ ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ತೀವ್ರಗತಿಯಲ್ಲಿ ವರದಿ ಸಿದ್ದತೆ ಕುರಿತಂತೆ ಕೆಲಸ ಕಾರ್ಯಗಳನ್ನು ಸಮಿತಿ ಮಾಡುತ್ತಿದೆ.ನಿವೃತ್ತ ಐಎಎಸ್ ಅಧಿಕಾರಿ ಡಾ ಸುಧಾಕರ್ ರಾವ್ ಅವರ ನೇತ್ರತ್ವದಲ್ಲಿನ ಈ ಒಂದು ಸಮಿತಿಗೆ  ಮೂವರು ಸದಸ್ಯರನ್ನು ನೇಮಕ ಮಾಡಲಾಗಿದೆ.

ನಿವೃತ್ತ ಐಎಎಸ್ ಅಧಿಕಾರಿ ಪಿ.ಬಿ. ರಾಮ ಮೂರ್ತಿ,ರಾಜ್ಯ ಲೆಕ್ಕಪರಿ ಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ನಿವೃತ್ತ ಪ್ರಧಾನ ನಿರ್ದೇ ಶಕರಾದ ಶ್ರೀಕಾಂತ್ ಬಿ. ವನಹಳ್ಳಿ ಅವರನ್ನು ಆಯೋಗದ ಸದಸ್ಯರನ್ನಾಗಿ ನೇಮಕ ಮಾಡ ಲಾಗಿದ್ದು ಮೂಲಸೌಕರ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರನ್ನು ಆಯೋಗದ ಸದಸ್ಯ ಕಾರ್ಯದರ್ಶಿ ಯಾಗಿ ನೇಮಕ ಮಾಡಲಾಗಿದ್ದು

7ನೇ ವೇತನ ಆಯೋಗವು ಸರ್ಕಾರಿ ನೌಕರರು, ಅನುದಾನಿತ ಶಿಕ್ಷಣ ಸಂಸ್ಥೆಗಳು,ಸ್ಥಳೀಯ ಸಂಸ್ಥೆ ಗಳು ಮತ್ತು ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿ ಯುಜಿಸಿ,ಎಐಸಿಟಿಇ. ಐಸಿಎಆರ್ ವೇತನ ಶ್ರೇಣಿಯ ವೇತನ ಪಡೆಯುತ್ತಿರುವ ವರನ್ನು ಹೊರತು ಪಡಿಸಿ ವೇತನ ಹಾಗೂ ವಿವಿಧ ಭತ್ಯೆಗಳು ಹಾಗೂ ನಿವೃತ್ತಿ ಸೌಲಭ್ಯಗಳನ್ನು ಪರಿ ಶೀಲಿಸಿ, ಕಾರ್ಯಸಾಧುವಾದ ನೂತನ ವೇತನ ಶ್ರೇಣಿಯನ್ನು ಶಿಫಾರಸು ಮಾಡುವ ಹಾಗೇ ಕೇಂದ್ರದ ವೇತನ ಶ್ರೇಣಿಯನ್ನು ರಾಜ್ಯದಲ್ಲಿ ಅಳವಡಿಸುವ ಕುರಿತು ಪರಿಶೀಲಿಸುತ್ತಿದ್ದಾರೆ.

ಇನ್ನೂ ರಾಜ್ಯ ಸರ್ಕಾರವು ತುಟ್ಟಿ ಭತ್ಯೆ ನೀಡಲು ಅನುಸರಿಸಬೇಕಾದ ಸೂತ್ರವನ್ನು ರೂಪಿಸುವುದು ಹೇಗೆ ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ, ಪ್ರವಾಸ ರಜೆ ಸೌಲಭ್ಯ,ವೈದ್ಯಕೀಯ ಸೌಲಭ್ಯ ಗಳನ್ನು ನಿಗದಿ ಪಡಿಸಲು ಹಾಗೂ ಸುಧಾರಣೆ ತರಲು ಸಲಹೆ ನೀಡುವುದು, ನಿವೃತ್ತಿ ವೇತನ ಮತ್ತು ಸಂಬಂಧಿತ ಸೌಲಭ್ಯಗಳ ಪರಿಷ್ಕರಣೆ ಮೊದಲಾದ ಅಂಶಗಳ ಕುರಿತು ವೇತನ ಆಯೋಗವು ಪರಿಶೀಲನೆ ನಡೆಸುತ್ತಿದ್ದು ಇದೇಲ್ಲಾ ಅಂಶಗಳನ್ನು ಮುಂದೆ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ವರದಿಯನ್ನು ನೀಡಲಿದೆ.

ಒಟ್ಟಾರೆ 7ನೇ ವೇತನ ಆಯೋಗದ ಸಮಿತಿಯ ಕಾರ್ಯ ಚಟುವಟಿಕೆಗಳು ಚುರುಕುಗೊಂಡಿದ್ದು ಬೇಗ ಬೇಗ ಕಾರ್ಯ ಮುಕ್ತಾಯವಾಗಿ ಸರ್ಕಾರಕ್ಕೆ ಸಲ್ಲಿಕೆಯಾಗಿ ಜಾರಿಗೆ ಬಂದು ಸಮಸ್ತ ರಾಜ್ಯ ಸರ್ಕಾರಿ ನೌಕರರಿಗೆ ಅನುಕೂಲವಾಗಲಿ ಎಂಬೊದು ನಮ್ಮ ಆಶಯವಾಗಿದೆ.

ಸುದ್ದಿ ಸಂತೆ ನ್ಯೂಸ್…..


Google News

 

 

WhatsApp Group Join Now
Telegram Group Join Now
Suddi Sante Desk