This is the title of the web page
This is the title of the web page

Live Stream

[ytplayer id=’1198′]

October 2025
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

ಧಾರವಾಡ

ಕಲಘಟಗಿ ವಿಧಾನ ಸಭಾ ಕ್ಷೇತ್ರದಲ್ಲಿ ಜೋರಾಗಿದೆ ಛಬ್ಬಿ ಅಬ್ಬರ – ಕ್ಷೇತ್ರದಲ್ಲಿ ಬಿಡುವಿಲ್ಲದೇ ಬೆಂಬಲಿಗರು ಆಪ್ತರೊಂದಿಗೆ ಸುತ್ತಾಡುತ್ತಿದ್ದಾರೆ ಛಬ್ಬಿ ದಂಪತಿಗಳು ಊರರು ಸುತ್ತಾಡುತ್ತಾ ವಿತರಣೆ ಮಾಡುತ್ತಿದ್ದಾರೆ ಕುಕ್ಕರ್

ಕಲಘಟಗಿ ವಿಧಾನ ಸಭಾ ಕ್ಷೇತ್ರದಲ್ಲಿ ಜೋರಾಗಿದೆ ಛಬ್ಬಿ ಅಬ್ಬರ – ಕ್ಷೇತ್ರದಲ್ಲಿ ಬಿಡುವಿಲ್ಲದೇ ಬೆಂಬಲಿಗರು ಆಪ್ತರೊಂದಿಗೆ ಸುತ್ತಾಡುತ್ತಿದ್ದಾರೆ ಛಬ್ಬಿ ದಂಪತಿಗಳು ಊರರು ಸುತ್ತಾಡುತ್ತಾ ವಿತರಣೆ ಮಾಡುತ್ತಿದ್ದಾರೆ ಕುಕ್ಕರ್
WhatsApp Group Join Now
Telegram Group Join Now

ಧಾರವಾಡ-

ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ನಾಗರಾಜ ಛಬ್ಬಿ ಪತ್ನಿ ಜ್ಯೋತಿ ನಾಗರಾಜ್ ಛಬ್ಬಿ ಮತ್ತು ಬೆಂಬಲಿಗರ ಸುತ್ತಾಟ ಬಲು ಜೋರಾಗಿದೆ. ಹೌದು ಹೋದಲ್ಲೇಲ್ಲ ಕಲಘಟಗಿ ಕ್ಷೇತ್ರದಲ್ಲಿ ಛಬ್ಬಿ ಪರ ಅಲೆ ಜನರ ಅಪಾರ ಬೆಂಬಲ  ಪತಿ ಪರವಾಗಿ ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ಮಿಂಚಿನ ಸಂಚಾರದ ಚಿತ್ರಣವೇ ಕ್ಷೇತ್ರದ ಎಲ್ಲೇಡೆ ಕಂಡು ಬರುತ್ತಿದೆ.

ಹೌದು ಚುನಾವಣೆಯ ಮುನ್ನವೇ ಧಾರವಾಡ ಜಿಲ್ಲೆಯಲ್ಲಿ ಚುನಾವಣೆಯ ಅಬ್ಬರ ಜೋರಾಗಿದ್ದು ನಾ ಮುಂದು ನೀ ಮುಂದು ಎನ್ನುತ್ತಾ ಈಗಲೇ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದಿಂದ ನಾಗರಾಜ ಛಬ್ಬಿ ಮತ್ತು ಟೀಮ್ ನವರು ಪ್ರಚಾರದೊಂದಿಗೆ ಈಗಲೇ ಮತದಾರರ ಸಮಸ್ಯೆ ಆಲಿಸುತ್ತಿದ್ದಾರೆ.

ಮಾಜಿ ವಿಧಾನ ಪರಿಷತ್ ಸದಸ್ಯ ಕಾಂಗ್ರೇಸ್ ಪಕ್ಷದ ಮುಖಂಡ ಯುವ ನಾಯಕ ನಾಗರಾಜ್ ಛಬ್ಬಿ ಅವರು ಈಗಾಗಲೇ ಬಿಡುವಿಲ್ಲದೇ ಕಲಘಟಗಿ ವಿಧಾನ ಸಭಾ ಕ್ಷೇತ್ರದಲ್ಲಿ ತಮ್ಮ ಬೆಂಬಲಿಗರೊಂದಿಗೆ ಬಿಡುವಿಲ್ಲದೇ ಸುತ್ತಾಡುತ್ತಾ ಪ್ರವಾಸವನ್ನು ಮಾಡುತ್ತಿದ್ದಾರೆ.ಸಾಲದಂತೆ ಎಲ್ಲೇಂದರಲ್ಲಿ ಸಭೆ ಸಮಾರಂಭ ಮಾಡುತ್ತಾ ಜನರ ಸಂಕಷ್ಟಗಳನ್ನು ಆಲಿಸುತ್ತಿರುವುದು ಕಂಡು ಬರುತ್ತಿದ್ದು ಸಮಸ್ಯೆ ಆಲಿಸುವುದರೊಂದಿಗೆ ಅಲ್ಲೇ ಪರಿಹಾರವನ್ನು ಕೂಡಾ ನೀಡುತ್ತಾ ಸಾರ್ವಜನಿ ಕರ ಕಣ್ಣೀರು ಒರೆಸುತ್ತಾ ನೆರವಾಗುತ್ತಿದ್ದಾರೆ

ಇದರೊಂದಿಗೆ ಚುನಾವಣೆಯ ಮುನ್ನವೇ ಕ್ಷೇತ್ರದಲ್ಲಿ ಬಿಡು ಬಿಟ್ಟಿದ್ದು ಬೆಂಬಲಿಗರೊಂದಿಗೆ ಸುತ್ತಾಡುತ್ತಿದ್ದಾರೆ.ಇನ್ನೂ ಪತಿಯ ಪರವಾಗಿ ಇವರ ಪತ್ನಿ ಜ್ಯೋತಿ ನಾಗರಾಜ ಛಬ್ಬಿ ಅಖಾಡಕ್ಕಿ ಳಿದಿದ್ದಾರೆ.ಕ್ಷೇತ್ರದ ಹಲವು ಗ್ರಾಮಗಳಲ್ಲಿ ಈಗಲೇ ಅವರು ಕೂಡಾ ತಮ್ಮ ಬೆಂಬಲಿಗರೊಂದಿಗೆ ಪಕ್ಷಕ ಕಾರ್ಯಕರ್ತರು ಮಹಿಳಾ ಮುಖಂಡರೊಂದಿಗೆ ಅಲ್ಲಲ್ಲಿ ಸಭೆ ಸಮಾರಂಭಗಳನ್ನು ಮಾಡುತ್ತಾ ಇವರು ಕೂಡಾ ಮಹಿಳೆಯರ ಸಾರ್ವಜನಕರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ.

ಪ್ರತಿ ಮನೆಗೂ ತೆರಳಿ ಸಮಸ್ಯೆ ಸಂಕಷ್ಟ ಗಳನ್ನು ಆಲಿಸಿ ಪ್ರತಿಯೊಂದು ಕುಟುಂಬಕ್ಕೂ ಒಂದೊಂದು ಕುಕ್ಕರ್ ಗಳನ್ನು ಪ್ರೀತಿಯಿಂದ ನೀಡುತ್ತಿದ್ದಾರೆ. ಪ್ರತಿ ಮನೆ ಮನೆಗೂ ತೆರಳಿ ನಿಮ್ಮ ಯಾವುದೇ ಸಮಸ್ಯೆ ಸಂಕಷ್ಟ ಗೆ ಸದಾ ಕಾಲವೂ ನಿಂತುಕೊಳ್ಳಲಿದ್ದಾರೆ ಎಂಬ ಭರವಸೆಯ ಮಾತು ಗಳನ್ನು ಇದರೊಂದಿಗೆ ಹೇಳುತ್ತಾ ಜ್ಯೋತಿ ನಾಗರಾಜ ಛಬ್ಬಿ ಅವರು ತಮ್ಮ ಬೆಂಬಲಿಗರೊಂ ದಿಗೆ ಈ ಒಂದು ಕಾರ್ಯದಲ್ಲಿ ತೊಡಗಿಕೊಂಡಿ ದ್ದಾರೆ

ಕ್ಷೇತ್ರದ ಬೆಳ್ಳಿಗಟ್ಟಿ ಗ್ರಾಮದಲ್ಲಿ ಮಾರುತಿ ದೇವಸ್ಥಾನದಲ್ಲಿ ಪೂಜೆಯನ್ನು ಮಾಡಿ ಸಾರ್ಜ ಜನಿಕರು ಮತ್ತು ಮಹಿಳೆಯೊಂದಿಗೆ ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ಅವರು ಸಭೆಯನ್ನು ಮಾಡಿದರು.ಕೆಲವೊತ್ತು ಸಮಸ್ಯೆಗಳನ್ನು ಆಲಿಸಿ ನಂತರ ಪರಿಹಾರದ ಭರವಸೆಯನ್ನು ನೀಡಿದರು. ಇನ್ನೂ ಇವರು ಕ್ಷೇತ್ರದಲ್ಲಿ ಹೋದಲ್ಲೇಲ್ಲ ಅಭೂತ ಪೂರ್ಣವಾದ ಜನಬೆಂಬಲ ಪ್ರೀತಿಯ ಅಕ್ಕರೆಯ ಬೆಂಬಲ ಕಂಡು ಬರುತ್ತಿದ್ದು ಇವರೊಂದಿಗೆ ಸಾಕಷ್ಟು ಒಲವು ಕಂಡು ಬರುತ್ತಿರುವುದು ಕಂಡು ಬರುತ್ತಿದೆ

ಜ್ಯೋತಿ ನಾಗರಾಜ ಛಬ್ಬಿ ಅವರೊಂದಿಗೆ ಗಿರಿಮಲ್ಲೇಶ,ರುದ್ದಯ್ಯ ಕಾಮನಿಕೊಪ್ಪ. ಉಳವಪ್ಪ ಕಂಚಿಹೋಳಿ,ಪುಷ್ಪಾ ಮೇಲಗಾನ್, ಸಿದ್ದಪ್ಪ,ಶಂಕರ ಮುಗಳಿ,ಬುಡ್ಡಿಕಾಯಿ,ಶಿವು ಚಿನ್ನಗುಡಿ,ಸುನಂದಾ ಬಡಿಗೇರ,ಯಸೂಫ್ ಮೈತ್ರಿಗಾರ್,ಮಂಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್…..

 


Google News

 

 

WhatsApp Group Join Now
Telegram Group Join Now
Suddi Sante Desk