This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

ಧಾರವಾಡ

ಕ್ಷೇತ್ರದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಅಮೃತ ದೇಸಾಯಿ – ಕೋಟಿ ಕೋಟಿ ರೂಪಾಯಿ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡಿ ಶಾಸಕರು

WhatsApp Group Join Now
Telegram Group Join Now

ಧಾರವಾಡ

ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದಲ್ಲಿ ಅಭಿವೃದ್ದಿ ಕಾಮಗಾರಿಗಳ ಭೂಮಿ ಪೂಜಾ ಕಾರ್ಯಕ್ರಮಗಳು ಮುಂದುವರೆದಿದ್ದು  ಶಾಸಕ ಅಮೃತ ದೇಸಾಯಿ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ 8.3 ಕೋಟಿ ಅನುದಾನ ದಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಭೂಮಿ ಪೂಜೆಯನ್ನು ನೆರವೇರಿಸಿದರು.

2021-22 ನೇ ಸಾಲಿನ ನರೇಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರೇಂದ್ರ ಡಿ.ಎಮ್. ನರೇಂದ್ರ ಕೆ.ಎಮ್. ನರೇಂದ್ರ ಕುಂಭಾಪೂರ ಮತ್ತು ದಾಸನಕೊಪ್ಪ ಗ್ರಾಮಗಳಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗಳಿಗೆ ಕ್ರಿಯಾತ್ಮಕ ನಳ ಸಂಪರ್ಕ ನೀಡುವ ಕಾಮಗಾರಿ ಗಾರಿಗಳಿಗೆ ಚಾಲನೆಯನ್ನ ನೀಡಿದರು.

ಇನ್ನೂ 580.50 ಲಕ್ಷ ರೂಪಾಯಿ ಮೊತ್ತದಲ್ಲಿನ ಧಾರವಾಡ ತಾಲೂಕಿನ ಎನ್.ಎಚ್-4 ರಿಂದ ಲೋಕೂರು ಜಿಲ್ಲಾ ಮುಖ್ಯ ರಸ್ತೆಯ ಕಿ.ಮೀ 3.00 ವರೆಗಿನ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ಮಾಡಲಾಯಿತು.ಇನ್ನೂ 100.00 ಲಕ್ಷ ರೂಪಾ ಯಿಯ ಧಾರವಾಡ ತಾಲೂಕಿನ ನರೇಂದ್ರ ಗುಡ್ಡದ ಬಸವಣ್ಣನ ರಸ್ತೆಯಿಂದ ಯಾದವಾಡ ಸೀಮೆ ರಸ್ತೆ ಸುಧಾರಣೆಗೆ ಭೂಮಿ ಪೂಜೆಯನ್ನು ಮಾಡ ಲಾಯಿತು.

ಇನ್ನೂ ಇದರೊಂದಿಗೆ (ವ್ಹಿ. ಆರ್. 126/0086).60.00 ಲಕ್ಷ ರೂಪಾಯಿ ಮೊತ್ತದಲ್ಲಿನ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಿಂದ ದಾಸನಕೊಪ್ಪಕ್ಕೆ ಹೋಗುವ ಹೊಲದ ದಾರಿ ಸುಧಾರಣೆ (ವ್ಹಿ. ಆರ್. 261).ಗೆ ಪೂಜೆಯನ್ನು ಮಾಡಲಾಯಿತು.

ಇದರೊಂದಿಗೆ ಇನ್ನೂ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ 9 ಅಂಗನವಾಡಿ ಕಟ್ಟಡ ನಿರ್ಮಾಣ. ಹೊಸಕೇರಿ ಓಣಿಯಲ್ಲಿ ಗರಡಿ ಮನೆ ನಿರ್ಮಾಣಕ್ಕೆ ಇದೇ ಗ್ರಾಮದಲ್ಲಿನ ದೇವಗಿರಿ ಓಣಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿ ರುವ ಸಿದ್ಧಾರೂಢ ಯುವಕ ಮಂಡಳದ ಕಟ್ಟಡ ಉದ್ಘಾಟನೆಯನ್ನು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರ ಅನುದಾನ ಅಡಿಯಲ್ಲಿ ನಿರ್ಮಾಣಗೊಂಡಿದ್ದ ಈ ಒಂದು ಭವನವನ್ನು ಲೋಕಾರ್ಪಣೆ ಮಾಡಲಾಯಿತು.ಹಾಗೇ ನರೇಂದ್ರ ಗ್ರಾಮದ ಹನುಮಂತ ದೇವಸ್ಥಾನ ಅಭಿವೃದ್ಧಿ ಕಾಮಗಾರಿಗೆ ಚೆಕ್ ವಿತರಣೆಯನ್ನು ಶಾಸಕ ಅಮೃತ ದೇಸಾಯಿ ಮಾಡಿದರು.

ಹಾಗೇ ನರೇಂದ್ರ ಗ್ರಾಮದ ಉಡಚಮ್ಮ ದೇವಿ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗೆ ಚೆಕ್ ವಿತರಣೆ ಹಾಗೂ ನರೇಂದ್ರ ಗ್ರಾಮದೇವಿ ದೇವ ಸ್ಥಾನದ ಅಭಿವೃದ್ಧಿ ಕಾಮಗಾರಿಗೆ ಚೆಕ್ ವಿತರಣೆ ಸೇರಿದಂತೆ ನರೇಂದ್ರ ಗ್ರಾಮದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಸಲ್ಲಿಸುವ ಮೂಲಕ ಚಾಲನೆಯನ್ನು ನೀಡಲಾ ಯಿತು.ಶಾಸಕ ಅಮೃತ ದೇಸಾಯಿ ಅವರಿಗೆ ಈ ಸಂದರ್ಭದಲ್ಲಿ ಗಂಗವ್ವ ನಿರಂಜನ್, ತಿರಕಯ್ಯ ಹಿರೇಮಠ, ನಾಗರಾಜ್ ಹೋಟೆಹೋಳಿ, ಸುದತ್ತ ದೇಸಾಯಿ, ಮಂಜುನಾಥ್ ಈಳಗೆರ, ವಿಜಯ್ ದೇಶಮುಖ, ಲಕ್ಷ್ಮಿ ಸಿಂಧೆ, ಸುಶೀಲಾ ಪಾಟೀಲ್, ಮಾದೇವಿ ಪೂಜಾರ್,ಶಾಂತು ಗಾಡ್ದನವರು, ರಾಯನಗೌಡ ಪಾಟೀಲ್,ಆತ್ಮಾನಂದ್ ಹುಂಬೇರಿ,ಈರಪ್ಪ ಘಂಟಿ, ಶಂಕರ ಕೊಮಾರ ದೇಸಾಯಿ ಹಾಗೂ ಸ್ಥಳೀಯ ನಾಗರಿಕರು ಪಕ್ಷದ ಕಾರ್ಯಕರ್ತರು ಆಪ್ತರು ಉಪಸ್ಥಿತರಿದ್ದರು.

ಚಕ್ರವರ್ತಿ ಸುದ್ದಿ ಸಂತೆ ನ್ಯೂಸ್ ಧಾರವಾಡ…..


Google News

 

 

WhatsApp Group Join Now
Telegram Group Join Now
Suddi Sante Desk