ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರಿಗೆ ಮರಣ ಶಾಸನವಾಗಿರುವ ಹೊಸ ಪಿಂಚಣಿ ವ್ಯವಸ್ಥೆ ವಿರುದ್ದ ಸಧ್ಯ ಎನ್ ಪಿಎಸ್ ನೌಕರರು ಸಿಡಿದೆದ್ದಿ ದ್ದಾರೆ.ಈಗಾಗಲೇ ದೇಶದ ಕೆಲವು ರಾಜ್ಯಗಳಲ್ಲಿ ಈ ಒಂದು ವ್ಯವಸ್ಥೆಯನ್ನು ರದ್ದು ಮಾಡಿದ್ದು ಹೀಗಾಗಿ ಈ ಒಂದು ಹೊಸ ಪಿಂಚಣಿ ವಿರುದ್ದ ನೌಕರರು ಹೋರಾಟವನ್ನು ಕೈಗೊಂಡಿದ್ದಾರೆ.
ಇದರೊಂದಿಗೆ ಎನ್ ಪಿಎಸ್ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿರುವ ಶಾಂತರಾಮ್ ನೇತ್ರತ್ವ ದಲ್ಲಿ ಇಂದಿನಿಂದ ಬೆಂಗಳೂರಿನಲ್ಲಿ ಅನಿರ್ಧಿಷ್ಟಾ ವಧಿ ಹೋರಾಟ ನಡೆಯಲಿದೆ.ಮಾಡು ಇಲ್ಲವೇ ಮಡಿ ಈ ಒಂದು ಹೋರಾಟದಲ್ಲಿ ಪಾಲ್ಗೊಳ್ಳಲು ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಸಂಖ್ಯೆ ಯಲ್ಲಿ ಎನ್ ಪಿಎಸ್ ನೌಕರರು ಬೆಂಗಳೂರಿಗೆ ಆಗಮಿಸಿದ್ದಾರೆ.
ಬರೊಬ್ಬರಿ 1 ಲಕ್ಷಕ್ಕೂ ಹೆಚ್ಚು ನೌಕರರು ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ.ಹೀಗಾಗಿ ಇಂದಿನಿಂದ ಪ್ರೀಡಂ ಫಾರ್ಕ್ ನಲ್ಲಿ ಈ ಒಂದು ಹೋರಾಟವು ನಡೆಯಲಿದ್ದು ಇದಕ್ಕಾಗಿ ಮತ್ತು ಭವಿಷ್ಯದ ಪಿಂಚಣಿಗಾಗಿ ಶಕ್ತಿ ಪ್ರದರ್ಶನವನ್ನು ಮಾಡಲಿದ್ದು ಇತ್ತ ಬೆಳಗಾವಿಯಲ್ಲಿ ಅಧಿವೇಶನ ನಡೆಯಲಿದ್ದರೆ ಅತ್ತ ಬೆಂಗಳೂರಿನಲ್ಲಿ ಇಂದಿನಿಂದ ಎನ್ ಪಿಎಸ್ ನೌಕರರ ಮಾಡು ಇಲ್ಲವೇ ಮಡಿ ಹೋರಾಟ ನಡೆಯಲಿದ
ಪ್ರಮುಖವಾಗಿ ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ರದ್ದು ಮಾಡಿರುವ ಈ ಒಂದು ಹೊಸ ಪಿಂಚಣಿ ವ್ಯವಸ್ಥೆಯನ್ನು ರಾಜ್ಯದಲ್ಲೂ ರದ್ದು ಮಾಡಬೇಕೆಂದು ಪಟ್ಟು ಹಿಡಿದುಕೊಂಡಿರುವ ನೌಕರರು ಪ್ರೀಡಂ ಪಾರ್ಕ್ ನಲ್ಲಿ ತಮ್ಮ ಶಕ್ತಿ ಪ್ರದರ್ಶನವನ್ನು ಮಾಡಲಿದ್ದಾರೆ.
ಈಗಾಗಲೇ ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಸಂಖ್ಯೆಯಲ್ಲಿ ಮಹಿಳಾ ಮತ್ತು ಪುರುಷ ಎನ್ ಪಿಎಸ್ ನೌಕರರು ಆಗಮಿಸಿದ್ದಾರೆ.ಇತ್ತ ಹೋರಾಟಕ್ಕಾಗಿ ಎಲ್ಲಾ ವ್ಯವಸ್ಥೆಯನ್ನು ಈಗಾಗಲೇ ರಾಜ್ಯ ಎನ್ ಪಿಎಸ್ ನೌಕರರ ಸಂಘಟನೆಯೂ ಅನಿರ್ಧಿಷ್ಟಾವಧಿ ಹೋರಾಟ ಕ್ಕಾಗಿ ಪಾರ್ಕ್ ನಲ್ಲಿ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಂಡಿದ್ದು ಹನ್ನೊಂದು ಗಂಟೆಗೆ ಲಕ್ಷಾಂ ತರ ನೌಕರರ ನೇತ್ರತ್ವದಲ್ಲಿ ಈ ಒಂದು ಪ್ರತಿಭಟನೆ ಆರಂಭವಾಗಲಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು……