ಬಾಗಲಕೋಟೆ –
ಮಹಿಳೆಯೊಬ್ಬಳು ತನ್ನ ಮೂವರು ಹೆಣ್ಣು ಮಕ್ಕಳಿಗೆ ಹಣ್ಣಿನ ಜ್ಯೂಸ್ ನಲ್ಲಿ ವಿಷವನ್ನು ಸೇರಿಸಿ ಕುಡಿಸಿ ತಾನು ಕೂಡಾ ಕುಡಿದು ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ಬಾಗಲಕೋಟೆ ಯಲ್ಲಿ ನಡೆದಿದೆ.ಹೌದು ಮಾವಿನ ಹಣ್ಣಿನ ಜ್ಯೂಸ್ ನಲ್ಲಿ ಕ್ರಿಮಿನಾಶಕ ಬೆರೆಸಿ ತನ್ನ ಮೂರು ಹೆಣ್ಣು ಮಕ್ಕಳಿಗೆ ಕುಡಿಸಿ ನಂತರ ತಾನೂ ವಿಷ ಸೇವಿಸಿ ಮೃತಪಟ್ಟಿದ್ದಾರೆ.
ಜಿಲ್ಲೆಯ ತಿಮ್ಮಾಪುರ ಗ್ರಾಮದಲ್ಲಿ ನಡೆದಿದ್ದು ತಾಯಿ ರೇಖಾ ಬಗಲಿ(28) ಹಾಗೂ ಮಕ್ಕಳಾದ ಸನ್ನಿಧಿ(7)ಸಮೃದ್ದಿ(4) ಶ್ರೀನಿಧಿ(2) ಮೃತ ದುದೈವಿ ಗಳಾಗಿದ್ದಾರೆ.ಮೃತ ರೇಖಾ ಮಾಜಿ ಸಚಿವ ಎಚ್ವೈ ಮೇಟಿ ಅವರ ಸಹೋದರಿಯ ಕಡೆಯ ಸಂಬಂಧಿ ಕರಾಗಿದ್ದು ಇತ್ತೀಚೆಗೆ ರೇಖಾ ತನಗೆ ಮೂರು ಜನ ಹೆಣ್ಣು ಮಕ್ಕಳಿದ್ದ ಕಾರಣ ಮಾನಸಿಕವಾಗಿ ಸ್ಥಿಮಿತಿ ಕಳೆದುಕೊಂಡಿದ್ದಳು ಮಕ್ಕಳನ್ನು ಓದಿಸಿ ಬೆಳೆಸು ವುದು ನಂತರ ಮದುವೆ ಮಾಡಬೇಕು ಎಂದೆಲ್ಲಾ ಚಿಂತಿಸಿ ಮಾನಸಿಕವಾಗಿ ಬಳಲುತ್ತಿದ್ದರು.ಇನ್ನೂ ಈ ಒಂದು ಸುದ್ದಿಯನ್ನು ತಿಳಿದು ಪೊಲೀಸರು ಪರಿಶೀಲನೆ ಮಾಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದು ಬಾಗಲಕೋಟೆ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸುದ್ದಿ ಸಂತೆ ನ್ಯೂಸ್ ಬಾಗಲಕೋಟೆ…..