ಬೆಂಗಳೂರು –
ವರ್ಗಾವಣೆಯ ನಿರೀಕ್ಷೆಯಲ್ಲಿದ್ದ ರಾಜ್ಯದ ಶಿಕ್ಷಕರಿಗೆ ಗುಡ್ ನ್ಯೂಸ್ ನೀಡಿದ ಷಡಾಕ್ಷರಿ ಯವರು – ವರ್ಗಾವಣೆಯ ಎಲ್ಲಾ ಗೊಂದಲ ಸಮಸ್ಯೆಗಳಿಗೆ ಮುಕ್ತಿ ನೀಡಲು ಮುಂದಾದ ರಾಜ್ಯದ ಸರ್ಕಾರಿ ನೌಕರರ ಸಂಘದವರ
ವರ್ಗಾವಣೆಯ ನಿರೀಕ್ಷೆಯಲ್ಲಿದ್ದ ರಾಜ್ಯದ ಸಮಸ್ತ ಶಿಕ್ಷಕರಿಗೆ ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿಯವರು ಗುಡ್ ನ್ಯೂಸ್ ನೀಡಿದ್ದಾರೆ.ಹೌದು ಯಾರಿಗೂ ಯಾವ ಇಲಾಖೆ ಗೂ ಇಲ್ಲದ ಅವೈಜ್ಞಾನಿಕವಾದ ವರ್ಗಾವಣೆಯ ನೀತಿಯಿಂದಾಗಿ ಅದೇಷ್ಟೋ ರಾಜ್ಯದ ಶಿಕ್ಷಕರು ಪರದಾಡುತ್ತಿದ್ದಾರೆ.
ಇನ್ನೇನು ವರ್ಗಾವಣೆ ನಡೆಯುತ್ತದೆ ಆರಂಭವಾ ಗುತ್ತದೆ ಎನ್ನುವಷ್ಟರಲ್ಲಿಯೇ ಮತ್ತೆ ವರ್ಗಾವಣೆ ಪೈಲ್ ಗೆ ವಿಘ್ನ ಎದುರಾಗಿದ್ದು ಹೀಗಾಗಿ ಮೇಲಿಂದ ಮೇಲೆ ಈ ಒಂದು ವರ್ಗಾವಣೆಯ ನೀತಿ ನಿಯಮಗಳಿಂದಾಗಿ ನರಕಯಾತನೆಯನ್ನು ಅನುಭವಿಸುತ್ತಿರುವ ರಾಜ್ಯದ ಶಿಕ್ಷಕರಿಗೆ ಕೊನೆಗೂ ಶಾಶ್ವತ ಮುಕ್ತಿ ನೀಡಲು ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿಯವರು ಮುಂದಾಗಿದ್ದಾರೆ.
ಈ ಕುರಿತಂತೆ ಮುಖ್ಯಮಂತ್ರಿಯವರೊಂದಿಗೆ ಮಾತನಾಡಿ ವರ್ಗಾವಣೆ ವಿಚಾರ ಕುರಿತಂತೆ ಚರ್ಚೆಯನ್ನು ಮಾಡಿದ್ದು ನಾಳೆಯೇ ಕಡತವನ್ನು ತಗೆದುಕೊಂಡು ಬರಲು ಹೇಳಿದ್ದಾರಂತೆ ಹೀಗಾಗಿ ನಾಳೆಯೇ ಈ ಒಂದು ಪೈಲ್ ಮುಖ್ಯಮಂತ್ರಿಯ ವರೊಂದಿಗೆ ಅನುಮೋದನೆ ಸಿಕ್ಕು ನಂತರ ಮುಂದಿನ ಪ್ರಕ್ರಿಯೆಗೆ ಒಳಪಡಲಿದ್ದು ನಂತರ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿ ಎಂದು ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿಯವರು ಮಾಹಿತಿಯನ್ನು ನೀಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..