ಧಾರವಾಡ –
ಪತಿಯ ಪರವಾಗಿ ಧಾರವಾಡ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಅಮೃತ ದೇಸಾಯಿ ಪರವಾಗಿ ಪತ್ನಿ ಪ್ರೀಯಾ ದೇಸಾಯಿ ಅಬ್ಬರದ ಪ್ರಚಾರ ಮಾಡಿದರು ಹೌದು ಕ್ಷೇತ್ರದಲ್ಲಿ ಈಗಾಗಲೇ ಚುನಾವಣೆಯ ಕಾವು ರಂಗೇರುತ್ತಿದ್ದು ಹೀಗಾಗಿ ಅಬ್ಬರದ ಪ್ರಚಾರ ವನ್ನು ಮಾಡುತ್ತಿ ದ್ದಾರೆ ಪ್ರೀಯಾ ಅಮೃತ ದೇಸಾಯಿ.
ಕರ್ನಾಟಕ ವಿಧಾನಸಭಾ ಚುನಾವಣೆ ನಿಮಿತ್ತ ಧಾರವಾಡ-71 ಗ್ರಾಮೀಣ ವಿಧಾನಸಭಾ ಕ್ಷೇತ್ರ ದಿಂದ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ಪತಿಯ ಪರವಾಗಿ ಪತ್ನಿ ಪ್ರಿಯಾ ಅಮೃತ ದೇಸಾಯಿ ಯವರು ಪ್ರಚಾರ ಮಾಡಿದರು
ಧಾರವಾಡ ತಾಲೂಕಿನ ಪುಡಕಳಕಟ್ಟಿ, ಹನುಮ ನಹಾಳ ಹಾಗೂ ತಿಮ್ಮಾಪುರ ಗ್ರಾಮಗಳಿಗೆ ಭೇಟಿನೀಡಿ, ಐದು ವರ್ಷಗಳಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರಾಭಿವೃದ್ಧಿಗಾಗಿ ನಾನು ನಡೆಸಿದ ಅಭಿವೃದ್ಧಿ ಕೆಲಸಗಳ ಬಗ್ಗೆ ಆ ಗ್ರಾಮಗಳ ಮಹಿಳಾ ನಾಗರಿಕರಿಗೆ ಮನದಟ್ಟು ಮಾಡಿ ಎಲ್ಲೆಡೆ ಬಿಜೆಪಿ ಕರಪತ್ರಗಳನ್ನು ಹಂಚಿ ಮತ್ತೆ ಗೆಲ್ಲಿಸಿ ದೇಶದ ಅಭಿವೃದ್ಧಿಗಾಗಿ ಹಾಗೂ ಶಾಂತಿಯುತ ಆಡಳಿತ ಕ್ಕಾಗಿ ಬಿಜೆಪಿ ಪಕ್ಷವನ್ನು ಬೆಂಬಲಿಸುವಂತೆ ಮತಯಾಚಿಸಿದರು.ಈ ಸಂಧರ್ಭದಲ್ಲಿ ಆ ಗ್ರಾಮಗಳ ಗುರು ಹಿರಿಯರು ಹಾಗೂ ಮಹಿಳಾ ನಾಗರಿಕರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..