This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಶಿಕ್ಷಕಿ ಉಜ್ವಲಾ ಗುರ್ಲಹೊಸೂರಗೆ ಸಾವಿತ್ರಿ ಬಾ ಪುಲೆ ರಾಷ್ಟ್ರೀಯ ಶಿಕ್ಷಕ ರತ್ನ ಪ್ರಶಸ್ತಿ ಪ್ರಧಾನ – ಅರ್ಥಪೂರ್ಣವಾಗಿ ನಡೆಯಿತು ಕಾರ್ಯಕ್ರಮ ಹಲವು ಗಣ್ಯರು ಉಪಸ್ಥಿತಿ…..

WhatsApp Group Join Now
Telegram Group Join Now

ಬೆಂಗಳೂರು

ಶಿಕ್ಷಕಿ ಉಜ್ವಲಾ ಗುರ್ಲಹೊಸೂರಗೆ ಸಾವಿತ್ರಿ ಬಾ ಪುಲೆ ರಾಷ್ಟ್ರೀಯ ಶಿಕ್ಷಕ ರತ್ನ ಪ್ರಶಸ್ತಿ ಪ್ರಧಾನ ವನ್ನು ಮಾಡಲಾಯಿತು ಹೌದು ಧಾರವಾಡ ಸಮೀಪದ ಗೋವನಕೊಪ್ಪದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕನ್ನಡ ಭಾಷಾ ಶಿಕ್ಷಕಿ ಉಜ್ವಲಾ ಗುರ್ಲಹೊಸೂರ ಇವರಿಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ಚೇತನ ಪೌಂಡೇಷನ್ ಕರ್ನಾಟಕ ಮತ್ತು ಸಾಧನಾ ಕೋಚಿಂಗ್ ಸೆಂಟರ್ ಬೆಂಗಳೂರು ಇವರ ಸಹಯೋಗದಲ್ಲಿ ಜರುಗಿದ ಅಖಿಲ ಭಾರತ ಶಿಕ್ಷಕರ ಸಮ್ಮೇಳನದಲ್ಲಿ ಶೈಕ್ಷಣಿಕ ಸೇವೆಯನ್ನು ಗುರುತಿಸಿ ಡಾ.ಎಸ್.ರಾಧಾಕೃಷ್ಣನ್ ರಾಷ್ಟ್ರೀಯ ಶಿಕ್ಷಕ ರತ್ನ ರಾಜ್ಯ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಮೈಸೂರಿನ ಸಾಹಿತಿಗಳಾದ ಟಿ.ಸತೀಶ ಜವರೇಗೌಡ.ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ ರಾಜ್ಯ ಘಟಕದ ರಾಜ್ಯಾ ಧ್ಯಕ್ಷರಾದ ಡಾ.ಆರ್ ನಾರಾಯಣಸ್ವಾಮಿ
.ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರಸ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರೇಖಾ ಶ್ರೀನಿವಾ ಸನ್.ಸಾಹಿತಿಗಳಾದ ಸುರೇಶ ಕೋರಕೊಪ್ಪ. ರೂಪಾ ಹೊಸದುರ್ಗ.ಡಾ.ಶಾಂತಕುಮಾರ ಭಜಂತ್ರಿ.ಸಂಗಮೇಶ ಖನ್ನಿನಾಯ್ಕರ.ಪ್ರೇಮಾ ಭಜಂತ್ರಿ.

ಎ.ಎಂ.ಸೌಭಾಗ್ಯ.ಅರಸೀಕೆರೆ ಉಮೇಶ.ಲೂಸಿ ಸಾಲ್ಢಾನಾ ಸಂಸ್ಥೆಯ ರೂವಾರಿಗಳಾದ ಎಲ್.ಐ.ಲಕ್ಕಮ್ಮನ್ನವರ ಐ ಐ ಮುಲ್ಲಾ ನವರ .ವೈ.ಬಿ.ಕಡಕೋಳ. ಚೇತನ ಪೌಂಡೇಷನ್ ಅಧ್ಯಕ್ಷರಾದ ಚಂದ್ರಶೇಖರ ಮಾಡಲಗೇರಿ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾದ್ಯಕ್ಷರಾದ ಅಶೋಕ ಸಜ್ಜನ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ

ಕಾರ್ಯಾದ್ಯಕ್ಷರಾದ ಶರಣಪ್ಪಗೌಡ ಆರ್ ಕೆ ಎಂ ವಿ ಕುಸುಮ ಸಿದ್ದಣ್ಣ ಉಕ್ಕಲಿ ಹನುಮಂತಪ್ಪ ಮೇಟಿ, ಗೋವಿಂದ ಜುಜಾರೆ ಅಕ್ಬರಲಿ ಸೋಲಾ ಪುರ ಮಹೇಶ ಭೂಮನಗೌಡರ ಎಸ್ ಎಸ್ ಧನಿಗೊಂಡ, ಅಕ್ಷರತಾಯಿ‌ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ಪ್ರತಿಷ್ಠಿತ ರಾಜ್ಯ ಪ್ರಶಸ್ತಿ ಪುರಸ್ಕೃತ ಬೆಂಗಳೂರಿನ ಟಿ ವೀಣಾ ಮುಂತಾ ದವರು ಇವರ ಆಯ್ಕೆಯನ್ನು ಮುಕ್ತಕಂಠದಿಂದ ಕೊಂಡಾಡಿದ್ದಾರೆ,

ಉಜ್ವಲಾ ಗುರ್ಲಹೊಸೂರ ಮ‌ೂಲತಃ ಧಾರವಾಡದವರಾಗಿದ್ದು ಸತತ 30 ವರ್ಷಗಳ ಕಾಲ ಹಳ್ಳಿಗಾಡಿನಲ್ಲಿ ಸೇವೆ ಸಲ್ಲಿಸಿದ್ದಾರೆ, ಯಾವುದೇ ಪ್ರಶಸ್ತಿಯ ಬೆನ್ನು ಹತ್ತದ ಇವರನ್ನು ಗುರುತಿಸಿ ಸತ್ಕರಿಸಿರುವುದು ಸಂತಸ ತಂದಿದೆ ಎಂದು ಧಾರವಾಡದ ಶಿಕ್ಷಕರ ಪತ್ರಿನ ಸಹಕಾರಿ ಸಂಘದ ಮಾಜಿ ನಿರ್ದೇಶಕಿ ಗಂಗವ್ವ ಕೋಟಿಗೌ ಡರ.

ಶಿಕ್ಷಕ ಸಾಹಿತಿಗಳಾದ ಎಸ್ ವಿ ಜೋಶಿ ಎಸ್ ಬಿ ಸಾಲಿ, ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ಗೌರವಾದ್ಯಕ್ಷರಾದ ಭೀಮಪ್ಪ ಕಸಾಯಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ತಿಗಡಿ, ಕೋಶಾದ್ಯಕ್ಷರಾದ ಅಜೀತಸಿಂಗ ರಜಪೂತ, ಮುಂತಾದವರು ಅಭಿನಂದಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

 


Google News

 

 

WhatsApp Group Join Now
Telegram Group Join Now
Suddi Sante Desk