ಹುಬ್ಬಳ್ಳಿ –
ಹುಬ್ಬಳ್ಳಿ ಧಾರವಾಡ ಹಸಿರುಕರಣಗೊಳಿಸಲು ಸಿದ್ದವಾಗುತ್ತಿವೆ ಲಕ್ಷ ಲಕ್ಷ ಸಸಿಗಳು – ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿಯವರ ಕನಸಿನ ಯೋಜನೆ ಶೀಘ್ರದಲ್ಲೇ ಅನುಷ್ಠಾನ…..
ಹೌದು ಸರ್ಕಾರಿ ಅಧಿಕಾರಿಗಳು ಅಂದಾಕ್ಷಣ ಕಚೇರಿಯಲ್ಲಿ ಕುಳಿತುಕೊಂಡು ಆ ಕೆಲಸ ಈ ಕೆಲಸ ಎನ್ನುತ್ತಾ ಮಾಡಿದರೆ ಸಾಲದು ಇದರೊಂ ದಿಗೆ ಸಾಮಾಜಿಕ ಜವಾಬ್ದಾರಿ ಇರಬೇಕು ಎಂಬೊದಕ್ಕೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ ಯವರು ಸಾಕ್ಷಿಯಾಗಿದ್ದಾರೆ.
ಹೌದು ಅಧಿಕಾರಿಗಳು ಕೇವಲ ಕಚೇರಿಯಲ್ಲಿ ಕುಳಿತುಕೊಂಡು ಕೆಲಸದೊಂದಿಗೆ ಸಾಮಾಜಿಕ ಜವಾಬ್ದಾರಿ ಸರ್ಕಾರಿ ಅಧಿಕಾರಿಗಳಲ್ಲಿ ಹೇಗಿರ ಬೇಕು ಎಂಬೊದನ್ನು ತೋರಿಸಿಕೊಡಲು ಸಧ್ಯ ಹೊಸದೊಂದು ಕಾರ್ಯಕ್ರಮದ ಮೂಲಕ ಸಾಕ್ಷಿಯಾಲಗಿದ್ದಾರೆ.ಯಾವಾಗಲೂ ಸದಾ ಒಂದಲ್ಲ ಒಂದು ವಿಶೇಷವಾದ ಕಾರ್ಯಕ್ರಮಗಳ ಮೂಲಕ ರಾಜ್ಯದ ಎರಡನೇಯ ಮಹಾನಗರ ಪಾಲಿಕೆ ಎಂದೇ ಗುರುತಿಸಿಕೊಂಡಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕೆಲಸ ವನ್ನು ಮಾಡುತ್ತಿರುವ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿಯವರು ಸಧ್ಯ ಮತ್ತೊಂದು ಮಹಾನ್ ಕಾರ್ಯಕ್ಕೆ ಕೈ ಹಾಕಿದ್ದಾರೆ.
ಅದು ಹಸಿರುಕರಣದೊಂದಿಗೆ ಅವಳಿ ನಗರವನ್ನು ಮತ್ತೆ ಸುಂದರಿಕರಣಗೊಳಿಸಲು ಮುಂದಾಗಿ ದ್ದಾರೆ ಈಗಾಗಗೇ ಈ ಒಂದು ಕುರಿತಂತೆ ಸಮಗ್ರ ವಾದ ರೂಪರೇಷೆಯನ್ನು ಮಾಡಿರುವ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿಯವರು ಯೋಜನೆ ಯನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸಲು ಸಿದ್ದತೆಯನ್ನು ಮಾಡಿಕೊಂಡಿದ್ದಾರೆ.
ಇದಕ್ಕಾಗಿ ಈಗಾಗಲೇ ಔಷಧೀಯ ಸಸ್ಯಗಳು, ಹಣ್ಣು ಹಂಪಲದ ಮರಗಳು,ಸೇರಿದಂತೆ ಬೇರೆ ಬೇರೆ ಗಿಡ ಮರಗಳನ್ನು ಅರಣ್ಯ ಇಲಾಖೆಯಿಂದ ಬರೋಬ್ಬರಿ 1 ಲಕ್ಷ ಸಸಿಗಳನ್ನು ಬೆಳೆಸಿದ್ದಾರೆ. ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಹುಬ್ಬಳ್ಳಿ ಧಾರವಾಡದಲ್ಲಿ ಶೀಘ್ರದಲ್ಲೇ ಒಂದು ಲಕ್ಷ ಮರ ಗಿಡಗಳು ನೆಡಲಿದ್ದು ಇದರೊಂದಿಗೆ ಅವಳಿ ನಗರದ ಸಂಪೂರ್ಣವಾಗಿ ಹಸಿರುಕರಣವಾಗ. ಲಿದ್ದು
ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆ ಕಚೇರಿಯ ಕೆಲಸ ಅಷ್ಟೇ ಅಲ್ಲದೇ ಅಧಿಕಾರಿಗಳಿಗೆ ಸಾಮಾಜಿಕ ಜವಾಬ್ದಾರಿ ಹೇಗಿರಬೇಕು ಎಂಬೊ ದನ್ನು ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿಯವರು ತೋರಿಸಿಕೊಡುತ್ತಿದ್ದು ಇವರ ಈ ಒಂದು ಪ್ಲಾನ್ ನ್ನು ಅನುಷ್ಠಾನ ಗೊಳ್ಳುತ್ತಿದ್ದು ಪರಿಸರ ಪ್ರೇಮಿಗಳು ಇದರೊಂದಿಗೆ ಸಂತಸಗೊಳ್ಳುವಂತಾಗಿದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..