This is the title of the web page
This is the title of the web page

Live Stream

[ytplayer id=’1198′]

September 2025
T F S S M T W
 123
45678910
11121314151617
18192021222324
252627282930  

| Latest Version 8.0.1 |

ಧಾರವಾಡ

ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ನೀಡಿದ ರಾಜ್ಯ ಸರ್ಕಾರಕ್ಕೆ ಧನ್ಯವಾದ ಹೇಳಿದ ಕಲಘಟಗಿ ತಾಲ್ಲೂಕು ನೌಕರರ ಬಳಗ – ಕೊಟ್ಟ ಭರವಸೆಯಂತೆ OPS,ಆರೋಗ್ಯ ಸಂಜೀವಿನಿ ಯೋಜನೆ ಶೀಘ್ರವಾಗಿ ಅನುಷ್ಠಾನಕ್ಕೆ ಬರಲಿ…..RM ಹೊಲ್ತಿಕೊಟಿ ನೇತ್ರತ್ವದ ನಿಯೋಗ ಒತ್ತಾಯ…..

ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ನೀಡಿದ ರಾಜ್ಯ ಸರ್ಕಾರಕ್ಕೆ ಧನ್ಯವಾದ ಹೇಳಿದ ಕಲಘಟಗಿ ತಾಲ್ಲೂಕು ನೌಕರರ ಬಳಗ – ಕೊಟ್ಟ ಭರವಸೆಯಂತೆ OPS,ಆರೋಗ್ಯ ಸಂಜೀವಿನಿ ಯೋಜನೆ ಶೀಘ್ರವಾಗಿ ಅನುಷ್ಠಾನಕ್ಕೆ ಬರಲಿ…..RM ಹೊಲ್ತಿಕೊಟಿ ನೇತ್ರತ್ವದ ನಿಯೋಗ ಒತ್ತಾಯ…..
WhatsApp Group Join Now
Telegram Group Join Now

ಕಲಘಟಗಿ

ಕಳೆದ ಹಲವು ದಿನಗಳಿಂದ ನಿರೀಕ್ಷೆ ಮಾಡುತ್ತಿದ್ದ 7ನೇ ವೇತನ ಆಯೋಗ ವನ್ನು ರಾಜ್ಯ ಸರ್ಕಾರ ಅನುಷ್ಠಾನ ಮಾಡಿ ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ ನೀಡಿದ್ದು ಈ ಒಂದು ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘಟನೆ ಯ ಕಲಘಟಗಿ ತಾಲ್ಲೂಕಿನ ವತಿಯಿಂದ ಧನ್ಯವಾದಗಳನ್ನು ಸಲ್ಲಿಸಲಾಯಿತು ಹೌದು

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ನಿರಂತರ ಮನವಿ ಹಾಗೂ ಸರಕಾರದೊಂದಿಗೆ ಸಂವಹನದಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜ್ಯ ಸರಕಾರಿ ನೌಕರರಿಗೆ 7 ನೆಯ ವೇತನ ಆಯೋಗದ ಸೌಲಭ್ಯ ಗಳನ್ನು 01.07.2022 ರಿಂದ ಕಾಲ್ಪನಿಕ ವೇತನ ಪರಿಗಣಿಸುವುದು ಹಾಗೂ ದಿನಾಂಕ 01.08.2024 ರಿಂದ ಆರ್ಥಿಕ ಸೌಲಭ್ಯ ನೀಡುವುದಾಗಿ ದಿನಾಂಕ 15.07.2024 ರಂದು ನಡೆದ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿ ಸದನದಲ್ಲಿಯೂ ಕೂಡ ಸ್ಪಷ್ಟಪಡಿಸಿದೆ

ಕರ್ನಾಟಕ ರಾಜ್ಯ ಸರಕಾರಿ ನೌಕರರಿಗೆ ಸಂತೋಷವ ನ್ನುಂಟು ಮಾಡಿದೆ ಹಾಗೆ 7 ನೆಯ ವೇತನ ಜಾರಿ ಮಾಡಿದ ಮುಖ್ಯಮಂತ್ರಿಗಳಾದ  ಸಿದ್ಧರಾಮಯ್ಯ ರವರಿಗೆ ಹಾಗೂ ಉಪಮುಖ್ಯಮಂತ್ರಿಗಳಾದ  ಡಿ ಕೆ ಶಿವಕುಮಾರ ರವರಿಗೆ ಹಾಗೂ ನಮ್ಮ ತಾಲೂಕು ಶಾಖೆಯಿಂದ ಮನವಿ ಸ್ವೀಕರಿಸಿ ಸಂಪುಟ ಸಭೆಯಲ್ಲಿ 7 ನೆಯ ವೇತನ ಆಯೋಗದ ವರದಿಯನ್ನು ಜಾರಿ ಮಾಡಲು ಸಹಮತಿ ವ್ಯಕ್ತಪಡಿಸಿದ್ದಾರೆ

ಮುಖ್ಯಮಂತ್ರಿಗಳ ಮನ ಒಲಿಸಿದ ನಮ್ಮ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಮಾನ್ಯ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಎಸ್ ಲಾಡ್ ಹಾಗೂ ಸಂಪುಟ ಸಚಿವರುಗಳಿಗೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಪರವಾಗಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಕಲಘಟಗಿ ತಾಲೂಕು ಅಧ್ಯಕ್ಷರಾದ ಆರ್ ಎಂ ಹೊಲ್ತಿಕೋಟಿ ರವರು ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು

ಸರಕಾರದ ನಿರ್ಧಾರವನ್ನು ಸ್ವಾಗತಿಸಿ 7ನೆಯ ವೇತನ ಜಾರಿ ಮಾಡಲು ನಿರಂತರ ಸರಕಾರದೊಂದಿಗೆ ಸಂವಹನ ಸಾಧಿಸಿ ನಿರಂತರ ಪ್ರಯತ್ನ ಮಾಡಿದ ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಕ್ಷರಿ ಹಾಗೂ ಕೇಂದ್ರ ಸಂಘದ ಪದಾಧಿಕಾರಿಗಳಿಗೆ ಧನ್ಯವಾದಗಳನ್ನು ಸಲ್ಲಿಸಿದರು.7ನೆಯ ವೇತನ ಜಾರಿ ಮಾಡಿದಂತೆ ನೌಕರರ ಬೇಡಿಕೆಗಳಾದ nps ರದ್ದು ಪಡಿಸಿ ops ಮರು ಜಾರಿ ಮಾಡುವುದು ಹಾಗೂ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಶೀಘ್ರದಲ್ಲಿ ಅನುಷ್ಠಾನ ಮಾಡುವಂತೆ ಒತ್ತಾಯ ವನ್ನು ಮಾಡಿದ್ದಾರೆ

ಸಮಸ್ತ ನೌಕರರ ಹಿತ ಕಾಪಾಡುವಂತೆ ಸರಕಾರಕ್ಕೆ ಮನವಿ ಮಾಡಿದರು ಈ ಸಂದರ್ಭದಲ್ಲಿ ಕಾರ್ಯದರ್ಶಿ ಆರ್ ಎಸ್ ಜಂಬಗಿ ಖಜಾಂಚಿಗಳಾದ ರಾಜು ಲಮಾಣಿ ರಾಜ್ಯ ಪರಿಷತ್ ಸದಸ್ಯರಾದ ನವೀನ ಗುಳೇರ ಹಾಗೂ ಪದಾಧಿಕಾರಿಗಳು ಒತ್ತಾಯ ಮಾಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಕಲಘಟಗಿ…..


Google News

 

 

WhatsApp Group Join Now
Telegram Group Join Now
Suddi Sante Desk