ಹುಬ್ಬಳ್ಳಿ –
ಕರ್ನಾಟಕದ ಮೂರೂ ವಿಧಾನಸಭಾ ಉಪ ಚುನಾವಣೆ ಯಲ್ಲಿ ಬಿಜೆಪಿ ಜೆಡಿಎಸ್ ಪಕ್ಷಗಳ ಯಾವುದೇ ಆಟ ನಡೆಯೋದಿಲ್ಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸುವರು ಚುನಾವಣೆ ನಂತರ ರಾಜ್ಯ ಬಿಜೆಪಿಯ ನಾಯಕತ್ವ ಚಿತ್ರಣ ಬದಲಾ ಗುವುದು ಎಂದು ಕೆಪಿಸಿಸಿ ವಕ್ತಾರ ಗಂಗಾಧರ ದೊಡ್ಡವಾಡ ಹೇಳಿದ್ದಾರೆ
ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ ಅವರು ಮನೆ ಒಂದು ಬಾಗಿಲು ಮೂರು ಎಂಬಂತೆ ಭಾರತೀಯ ಜನತಾ ಪಕ್ಷದಲ್ಲಿ ಜೆಡಿಎಸ್ ನಲ್ಲಿ ನಾಯಕತ್ವದ ಕೊರತೆ ಯಿಂದಾಗಿ ಕಿತ್ತಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಇದನ್ನು ರಾಜ್ಯದ ಮತದಾರರು ಅವಲೋಚಿಸುತ್ತಿದ್ದಾರೆ ಎಂತಹುದೇ ಕಷ್ಟ ಅನುಭವಿಸಿದರೂ ಪಂಚ ಗ್ಯಾರಂಟಿ ಗಳನ್ನು ಅನುಷ್ಠಾನಗೊಳಿಸಿದ ಕಾಂಗ್ರೆಸ್ ಪಕ್ಷವನ್ನು ಮತದಾರರು ಪ್ರಭುಗಳು ಅಪ್ಪಿಕೊಂಡು ವಿಜಯದ ಆಶೀರ್ವಾದ ಮಾಡುವರೆಂದು ಗಂಗಾಧರ ದೊಡವಾಡ ಆಶಯ ವ್ಯಕ್ತಪಡಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..