This is the title of the web page
This is the title of the web page

Live Stream

[ytplayer id=’1198′]

October 2025
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ರಾಜ್ಯ ಸರ್ಕಾರಿ ನೌಕರರಿಗೆ ಎಚ್ಚರಿಕೆ ಸಂದೇಶ ನೀಡಿದ ರಾಜ್ಯಾಧ್ಯಕ್ಷರು – ಸಂಘಟನೆಯ ಮುಖಂಡರಿಗೆ ನೌಕಕರಿಗೆ ಷಡಾಕ್ಷರಿಯವರು ಹೇಳಿದ್ದೇನು ಗೊತ್ತಾ…..

ರಾಜ್ಯ ಸರ್ಕಾರಿ ನೌಕರರಿಗೆ ಎಚ್ಚರಿಕೆ ಸಂದೇಶ ನೀಡಿದ ರಾಜ್ಯಾಧ್ಯಕ್ಷರು – ಸಂಘಟನೆಯ ಮುಖಂಡರಿಗೆ ನೌಕಕರಿಗೆ ಷಡಾಕ್ಷರಿಯವರು ಹೇಳಿದ್ದೇನು ಗೊತ್ತಾ…..
WhatsApp Group Join Now
Telegram Group Join Now

ಬೆಂಗಳೂರು

ರಾಜ್ಯ ಸರ್ಕಾರಿ ನೌಕರರ ಸಂಘ’ದಿಂದ ವರ್ಗಾವಣೆ ಕುರಿತ ‘ಪತ್ರ ವ್ಯವಹಾರ’ದ ಬಗ್ಗೆ ಈ ಎಚ್ಚರಿಕೆ ನೀಡಲಾಗಿದೆ ಹೌದು ಶಾಖಾ ಸಂಘಗಳ ಅಧ್ಯಕ್ಷರು ತಮ್ಮ ಶಾಖೆಯ ಪದಾಧಿಕಾರಿಗಳ ವರ್ಗಾವಣೆಗೆ ವಿನಾಯಿತಿ ಕೋರಿ ನೇರವಾಗಿ ಇಲಾಖಾ ಮುಖ್ಯಸ್ಥರಿಗೆ ಪತ್ರ ವ್ಯವಹರಿಸದಿರುವ ಬಗ್ಗೆ ಮಹತ್ವದ ಮಾಹಿತಿ ಯನ್ನು ರಾಜ್ಯ ಸರ್ಕಾರಿ ನೌಕರರ ಸಂಘ ಹಂಚಿ ಕೊಂಡಿದೆ.

ಈ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಗಿರಿಗೌಡ ಸುತ್ತೋಲೆ ಹೊರಡಿಸಿದ್ದು,ರಾಜ್ಯದ ಕೆಲವು ಜಿಲ್ಲೆ, ತಾಲ್ಲೂಕು ಮತ್ತು ಯೋಜನಾ ಶಾಖೆಗಳ ಅಧ್ಯಕ್ಷರುಗಳು ತಮ್ಮ ಶಾಖೆಯ ಪದಾಧಿಕಾರಿಗಳಿಗೆ ವರ್ಗಾವಣೆಯಿಂದ ವಿನಾಯಿತಿ ಕೋರಿ ಸಂಬಂಧಿಸಿದ ಇಲಾಖಾ ಮುಖ್ಯ ಸ್ಥರಿಗೆ ಹಾಗೂ ಸರ್ಕಾರಕ್ಕೆ ನೇರವಾಗಿ ಶಾಖಾ ಸಂಘಗಳ ಲೆಟರ್‌ಹೆಡ್ ಮುಖಾಂತರ ಪತ್ರ ವ್ಯವಹರಿಸಿರುವುದು ಕಂಡುಬಂದಿರುತ್ತದೆ ಎಂದಿದ್ದಾರೆ.

ಸಾರ್ವತ್ರಿಕ ವರ್ಗಾವಣೆ ವರ್ಗಾವಣೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಿಗೆ ಸರ್ಕಾರದ ಸುತ್ತೋಲೆಯನ್ವಯ ವಿನಾಯಿತಿ ಕಲ್ಪಿಸಲಾಗಿದ್ದು, ಈ ಅವಕಾಶವನ್ನು ಬಳಸಿಕೊಳ್ಳಲು ಶಾಖಾ ಸಂಘಗಳು ರಾಜ್ಯ ಸಂಘದ ಗಮನಕ್ಕೆ ತರದೇ ನೇರವಾಗಿ ಚುನಾಯಿತರಲ್ಲದ ನಿರ್ದೆಶಕರೂ ಸೇರಿದಂತೆ ಪದಾಧಿಕಾರಿಗಳಿಗೆ ವರ್ಗಾವಣೆಯಿಂದ ವಿನಾಯಿತಿ ನೀಡುವಂತೆ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರು ಹಾಗೂ ಸರ್ಕಾರಕ್ಕೆ ಪತ್ರ ವ್ಯವಹಾರ ನಡೆಸಿರುವ ಬಗ್ಗೆ ಕೆಲವು ಇಲಾಖೆಗಳ ಮುಖ್ಯಸ್ಥರು ರಾಜ್ಯಾಧ್ಯಕ್ಷರಿಂದ ಸ್ಪಷ್ಟನೆ ಕೋರಿರುತ್ತಾರೆ.

ಶಾಖಾ ಸಂಘಗಳು ರಾಜ್ಯ ಹಂತದ ಇಲಾಖಾ ಮುಖ್ಯಸ್ಥರಿಗೆ ಮತ್ತು ಸರ್ಕಾರಕ್ಕೆ ನೇರ ಪತ್ರ ವ್ಯವಹರಿ ಸದಂತೆ ಈಗಾಗಲೇ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯು ನಿರ್ಣಯ ದಾಖಲಿಸಿ ಅನುಮೋದನೆ ಆಗಿರುತ್ತದೆ.ಆದ್ದರಿಂದ ಎಲ್ಲಾ ಜಿಲ್ಲೆ/ತಾಲ್ಲೂಕು ಮತ್ತು ಯೋಜನಾ ಶಾಖಾ ಸಂಘಗಳ ಅಧ್ಯಕ್ಷರುಗಳು ಸಾಮಾನ್ಯ ವರ್ಗಾವಣೆ/ವರ್ಗಾವಣೆ ಹಾಗೂ ಇನ್ನಿತರೆ ವಿಷಯಗಳಿಗೆ ಸಂಬಂಧಿಸಿದಂತೆ ರಾಜ್ಯ ಹಂತದ ಇಲಾಖಾ ಮುಖ್ಯಸ್ಥರಿಗೆ ಹಾಗೂ ಸರ್ಕಾರಕ್ಕೆ ನೇರವಾಗಿ ಪತ್ರ ವ್ಯವಹರಿಸದಂತೆ ಸೂಚಿಸಿದೆ.

ಮುಂದುವರೆದು, ರಾಜ್ಯ ಮಟ್ಟದ ಕಛೇರಿಗಳಿಗೆ ಸಂಬಂಧಿಸಿದ ವಿಷಯಗಳಿಗೆ ರಾಜ್ಯಾಧ್ಯಕ್ಷರಿಗೆ ಪತ್ರ ವ್ಯವಹರಿಸಲು ತಿಳಿಸಿದೆ, ತಪ್ಪಿದಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯ ನಿರ್ಣಯ ಹಾಗೂ ಸಂಘದ ಬೈಲಾ ನಿಯಮದಂತೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು……


Google News

 

 

WhatsApp Group Join Now
Telegram Group Join Now
Suddi Sante Desk