ನಾಳೆ ವಿಕೇಂಡ್ ಕರ್ಪ್ಯೂ ನಾಳೆ ಶಾಲೆಗೆ ಶಿಕ್ಷಕರಿಗೆ ಹೋಗುವಂತೆ ಡಿಡಿಪಿಐ ಸೂಚನೆ – ಸಾರಿಗೆ ಇಲಾಖೆಯವರೊಂದಿಗೆ ಮಾತನಾಡಿದ್ದು ಬಸ್ ವ್ಯವಸ್ಥೆ ಇದೆ ಎಂದರು ಡಿಡಿಪಿಐ…..

Suddi Sante Desk

ಧಾರವಾಡ –

ನಾಳೆ ಮತ್ತು ನಾಡಿದ್ದು ಎರಡು ದಿನಗಳ ಕಾಲ ಧಾರವಾಡ ಜಿಲ್ಲೆಯಲ್ಲೂ ಕೂಡಾ ವಿಕೇಂಡ್ ಕರ್ಪ್ಯೂ ವನ್ನು ಜಿಲ್ಲಾಧಿಕಾರಿಗಳು ಜಾರಿ ಮಾಡಿದ್ದಾರೆ.ಒಂದು ಕಡೆಗೆ ವಾರದ ಕರ್ಪ್ಯೂ ಮತ್ತೊಂದೆಡೆ ಸಾರ್ಜಜನಿ ಕರು ಇದ್ದರೆ ಬಸ್ ಗಳನ್ನು ಬಿಡುತ್ತೇವೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಹೀಗಾಗಿ ಬೆಳಗಾದರೆ ಶನಿವಾರ ಮತ್ತೊಂದು ಕಡೆಗೆ ವಾರದ ಕರ್ಫ್ಯೂ ಹೀಗಾಗಿ ಏನು ಮಾಡಬೇಕು ಎಂಬ ಗೊಂದಲದಲ್ಲಿ ಶಿಕ್ಷಕರಿದ್ದಾರೆ. ಹೀಗಾಗಿ ಈ ಕುರಿತಂತೆ ಧಾರವಾಡ ಡಿಡಿಪಿಐ ಅವರನ್ನು ಸಂಪರ್ಕ ಮಾಡಿ ಮಾತನಾಡಿಸಿದಾಗ ಸಾರಿಗೆ ಇಲಾಖೆಯವ ರೊಂದಿಗೆ ನಾವು ಕೂಡಾ ಮಾತನಾಡಿದ್ದು ಬಸ್ ಸೌಲಭ್ಯಗಳನ್ನು ಒದಗಿಸುವ ಮಾತನ್ನು ಹೇಳಿದ್ದಾರೆ ಹೀಗಾಗಿ ಯಾವುದೇ ಸಮಸ್ಯೆಯಾಗೊದಿಲ್ಲ ಯಾವು ದೇ ಆತಂಕವಿಲ್ಲದೇ ಜಿಲ್ಲೆಯಲ್ಲಿನ ಶಿಕ್ಷಕರು ಬೆಳಿಗ್ಗೆ ಶಾಲೆಗೆ ಹೋಗಬಹುದು ಎಂದಿದ್ದಾರೆ.ಒಂದು ವೇಳೆ ಬಸ್ ಸಂಚಾರದಲ್ಲಿ ಸಮಸ್ಯೆ ಆಗಿದ್ದರೆ ನಾಳೆ ಒಂದು ದಿನ ಪರ್ಯಾಯ ವ್ಯವಸ್ಥೆಯ ಮೂಲಕ ಶಾಲೆಗೆ ಹೋಗಿ ಎಂದು ಡಿಡಿಪಿಐ ಮೋಹನಕುಮಾರ್ ಹಂಚಾಟೆ ಹೇಳಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.