ಧಾರವಾಡದಲ್ಲಿ ಮರಕ್ಕೆ ಬೇಂದ್ರೆ ಬಸ್ ಡಿಕ್ಕಿ – ಬಸ್ ನಲ್ಲಿದ್ದವರು ಪವಾಡ ರೀತಿಯಲ್ಲಿ ಎಸ್ಕೇಪ್…..

Suddi Sante Desk

ಧಾರವಾಡ –

ಧಾರವಾಡದಲ್ಲಿ ಬೇಂದ್ರೆ ನಗರ ಸಾರಿಗೆ ಬಸ್ ಮರಕ್ಕೆ ಡಿಕ್ಕಿಯಾಗಿದೆ. ಹುಬ್ಬಳ್ಳಿಯಿಂದ ಬಂದ ಬಸ್ ನಗರದ ಅಂಜುಮನ್ ವೃತ್ತದಲ್ಲಿ ತಿರುವು ತಗೆದು ಕೊಳ್ಳುವಾಗ ಬ್ರೇಕ್ ವೈಫಲ್ಯದಿಂದಾಗಿ ಪುಟ್ ಪಾತ್ ಗ್ರಿಲ್ಲ್ಸ್ ಗೆ ಡಿಕ್ಕಿಯಾಗಿ ನಂತರ ಮರಕ್ಕೆ ಅಪ್ಪಳಿಸಿದೆ‌.

ನಗರದ ಅಂಜುಮನ್ ವೃತ್ತದಲ್ಲಿ ಈ ಒಂದು ಘಟನೆ ಬೆಳ್ಳಂ ಬೆಳಿಗ್ಗೆ ನಡೆದಿದೆ. ಬಸ್ ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪ್ರಯಾಣಿಕರು ಇದ್ದರು. ಹುಬ್ಬಳ್ಳಿ ಯಿಂದ ಬಂದ ಈ ಒಂದು ಬಸ್ ತಿರುವು ತಗೆದು ಕೊಂಡು ನಿಲ್ಲುವಷ್ಟರಲ್ಲಿ ಬಸ್ ನ ಬ್ರೇಕ್ ವೈಫಲ್ಯ ವಾಗಿದ್ದು ಹೀಗಾಗಿ ನಿಯಂತ್ರಣ ಮಾಡಿದ ಚಾಲಕ ಕೊನೆಗೆ ಮರಕ್ಕೆ ಹೊಡೆದಿದೆ.

ಅದೃಷ್ಟವಶಾತ್ ಯಾವುದೇ ರೀತಿಯ ಅವಘಡ ಗಳು ಆಗಿಲ್ಲ ಇನ್ನೂ ಬಸ್ ನಲ್ಲಿದ್ದ ಪ್ರಯಾಣಿಕರು ಸೇಫ್ ಆಗಿ ಪಾರಾಗಿದ್ದಾರೆ. ಬಸ್ ನ ಮುಂದಿನ ಭಾಗ ಸಂಪೂರ್ಣವಾಗಿ ನುಜ್ಜು ಗುಜ್ಜಾಗಿದೆ.

ಇನ್ನೂ ಅಪಘಾತಕ್ಕೆ ಬಸ್ ನ ಬ್ರೇಕ್ ವೈಫಲ್ಯ ಕಾರಣವಾಗಿದ್ದು ವಿಷಯ ತಿಳಿದ ಧಾರವಾಡ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಇನ್ನೂ ಜನದಟ್ಟಣೆಯ ಪ್ರದೇಶಗಳಲ್ಲಿ ಬೆಳ್ಳಂ ಬೆಳಿಗ್ಗೆ ದೊಡ್ಡ ಪ್ರಮಾಣದ ಅವಘಡವೊಂದು ನಗರದಲ್ಲಿ ತಪ್ಪಿದಂತಾಗಿದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.