ತಲ್ವಾರ್ ನಿಂದ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಣೆ ಧಾರವಾಡ ದಲ್ಲೊಂದು ಬೆಳಕಿನ ಬಂತು ಪ್ರಕರಣ…..

Suddi Sante Desk

ಧಾರವಾಡ –

ತಲ್ವಾರ್ ನಿಂದ ಕೇಕ್ ಕಟ್ ಮಾಡಿಕೊಂಡ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಂಡು ಘಟನೆ ಧಾರವಾಡದಲ್ಲಿ ನಡೆದಿದೆ.ಹೌದು ಪ್ರವೀಣ ಸಂಧಿಮನಿ ಎಂಬುವನೇ ಹೀಗೆ ತಲ್ವಾರ್ ನಿಂದ ಕೇಕ್ ಕತ್ತರಿಸಿ ತನ್ನ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಂಡು ಈಗ ಸುದ್ದಿಯಾಗಿದ್ದಾನೆ.

ನಗರದ ಹಳಿಯಾಳ ರಸ್ತೆಯಲ್ಲಿರುವ ಸಲಕಿನ ಕೊಪ್ಪದಲ್ಲಿ ಈ ಒಂದು ಘಟನೆ ನಡೆದಿದೆ.ಸಾಯಿ ದಾಬಾ ಮಾಲೀಕ ಅವರ ಮಗ ಪ್ರವೀಣ ಸಂಧೀಮನಿ ನಿನ್ನೆ ಹುಟ್ಟು ಹಬ್ಬವಿತ್ತು ಹೀಗಾಗಿ ತನ್ನ ಬರ್ತಡೆಯನ್ನು ದಾಬಾ ದಲ್ಲಿ ಹೀಗೆ ವಿಭಿನ್ನವಾಗಿ ಆಚರಣೆ ಮಾಡಿಕೊಂಡಿದ್ದಾರೆ.

ಹೀಗೆ ವಿಶೇಷವಾಗಿ ಈ ಒಂದು ಯುವಕ ತಲ್ವಾರ್ ನಿಂದ ಧಾರವಾಡದಲ್ಲಿ ಹೀಗೆ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡು ಪ್ರವೀಣ ಸಂಧಿಮನಿ ಸಖತ್ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದಾನೆ.

ಸಾಯಿ ದಾಬಾ ಹೊಟೇಲ್ ವೊಂದರಲ್ಲಿ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡಿರುವ ಈ ಒಂದು ವಿಡಿಯೋ ಸಧ್ಯ ಸಾಮಾಜಿಕ ಜಾಲ ತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.

ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.