ಪ್ರೀತಿಯಿಂದ ಸಾಕಿದ ಬೆಕ್ಕಿನ ಕೊಲೆ ಕೊಲೆ ಮಾಡಿದವರನ್ನು ದ್ವೇಷ ದಿಂದ ಜೈಲಿಗೆ ಅಟ್ಟಿದ ದಂಪತಿಗಳು ಹೋರಾಟ ಮಾಡಿ ನ್ಯಾಯ ಗೆದ್ದ ದಂಪತಿಗಳು…..

Suddi Sante Desk

ಕೇರಳ –

ಬೆಕ್ಕನ್ನು ಸಾಯಿಸಿದ ಆರೋಪದ ಅಡಿಯಲ್ಲಿ ದಂಪತಿ ಪಕ್ಕದ ಮನೆಯವನ ವಿರುದ್ಧ ದೂರು ದಾಖಲಿಸಿ ಆತನನ್ನು ಜೈಲಿಗಟ್ಟಿದ ಘಟನೆಯು ಕೇರಳದ ವೈಯಕ್ಕೊಂನ ಥಲಾ ಯಝಾಂನಲ್ಲಿ ನಡೆದಿದೆ.ರಾಜು ಹಾಗೂ ಸುಜಾತಾ ಎಂಬ ದಂಪತಿ ಪ್ರೀತಿಯಿಂದ ಸಾಕಿದ ಬೆಕ್ಕನ್ನು ಸಾಯಿಸಿದ ಆರೋ ಪದಡಿಯಲ್ಲಿ ನೆರೆಮನೆಯಾತನನ್ನು ಜೈಲಿಗಟ್ಟಿದ್ದಾರೆ.8 ತಿಂಗಳ ಪ್ರಾಯದ ಬೆಕ್ಕು ನೆರೆಮನೆಯ ರಮೇಶ್ ಮನೆಗೆ ತೆರಳಿ ಆತ ಸಾಕಿದ್ದ ಗುಬ್ಬಚ್ಚಿಯನ್ನು ಕಚ್ಚಿತ್ತು ಎನ್ನಲಾಗಿದೆ.

ಈ ಬೆಕ್ಕು ತನ್ನ ಪಕ್ಷಿಗೆ ಹಾನಿ ಮಾಡುತ್ತದೆ ಎಂದು ಕೋಪ ಗೊಂಡ ರಾಜೇಶ್ ಬೆಕ್ಕಿನ ಮೇಲೆ ಫೈರಿಂಗ್ ನಡೆಸಿದ್ದ. ಸಂಬಂಧಿಕರ ಮನೆಗೆ ತೆರಳಿದ್ದ ರಾಜು ಹಾಗೂ ಸುಜಾತಾ ದಂಪತಿ ವಾಪಸ್ ಮನೆಗೆ ಮರಳುವ ವೇಳೆಯಲ್ಲಿ ಪ್ರೀತಿ ಯಿಂದ ಸಾಕಿದ ಬೆಕ್ಕು ರಕ್ತದ ಮಡುವಿನಲ್ಲಿ ಬಿದ್ದಿತ್ತು. ಕೂಡಲೇ ಅವರು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಕೊಟ್ಟಾ ಯಂ ಪಶು ಆಸ್ಪತ್ರೆಯಲ್ಲಿ ಬೆಕ್ಕಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೂ ಅದು ಮೃತಪಟ್ಟಿತ್ತು.ಬೆಕ್ಕಿನ ಸಾವಿಗೆ ಕಾರಣನಾದ ರಾಜೇಶ್ ವಿರುದ್ಧ ರಾಜು ಹಾಗೂ ಸುಜಾತಾ ದಂಪತಿ ವಯಕ್ಕೋಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಪೊಲೀ ಸರು ಆತನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.