ಹಸಿ ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಕಬ್ಬು ನಾಶ – ಕಲಘಟಗಿಯಲ್ಲಿ ಘಟನೆ…..

Suddi Sante Desk

ಕಲಘಟಗಿ –

ಕಬ್ಬಿನ ಗದ್ದೆಯೊಂದಕ್ಕೆ ಬೆಂಕಿ ಬಿದ್ದ ಘಟನೆ ಧಾರವಾ ಡ ಜಿಲ್ಲೆಯ ಕಲಘಟಗಿ ತಾಲೂಕಿನ ತಬಕದಹೊನ್ನ ಳ್ಳಿ ಗ್ರಾಮದಲ್ಲಿ ನಡೆದಿದೆ‌.ಗ್ರಾಮದಲ್ಲಿ ಹಸಿ ಕಬ್ಬಿನ ತೋಟಕ್ಕೆ ಬೆಂಕಿ ತಗುಲಿದೆ. ರೈತರ ಗದ್ದೆಗೆ ಭಾನುವಾ ರ ಬೆಳಿಗ್ಗೆ ಬೆಂಕಿ ತಗುಲಿದ್ದು ಗ್ರಾಮದ ಮಣ್ಣಪ್ಪ ನಿಂಗಪ್ಪ ಬನವಣ್ಣನವರ ಎಂಬ ರೈತರ ಸುಮಾರು 4 ಎಕರೆ ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಪೂರ್ತಿ ಬೆಳೆ ನಾಶವಾಗಿದೆ.

ಬೆಂಕಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ ಇನ್ನೂ ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ಅಧಿಕಾರಿಗಳು ಭೇಟಿ ನೀಡಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ


4 ಎಕರೆಯಲ್ಲಿ ಬೆಳೆದ ಕಬ್ಬಿಗೆ ಬೆಂಕಿ ತಗುಲಿದ ಪರಿ ಣಾಮ ಲಕ್ಷಾಂತರ ಹಾನಿಯಾಗಿದೆ ಪರಿಹಾರ ನೀಡ ಬೇಕೆಂದು ರೈತರು ಮನವಿ ಮಾಡಿದ್ದು ಇನ್ನೂ ಈ ಕುರಿತು ಪೊಲೀಸರು ಕೂಡಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.