ಹಿರಿಯ ಅಧಿಕಾರಿಗಳ ಕಿರುಕುಳ ದಿಂದ ಆತ್ಮಹತ್ಯೆಗೆ ಶರಣಾದ ಸರ್ಕಾರಿ ನೌಕರ ನೇಣಿಗೆ ಶರಣು ಹುಟ್ಟು ಹಾಕಿದೆ ಹಲವು ಅನುಮಾನಳನ್ನು

Suddi Sante Desk
ಹಿರಿಯ ಅಧಿಕಾರಿಗಳ ಕಿರುಕುಳ ದಿಂದ ಆತ್ಮಹತ್ಯೆಗೆ ಶರಣಾದ ಸರ್ಕಾರಿ ನೌಕರ ನೇಣಿಗೆ ಶರಣು ಹುಟ್ಟು ಹಾಕಿದೆ ಹಲವು ಅನುಮಾನಳನ್ನು

ಕಲಬುರಗಿ

ಹೌದು ಕಲಬುರಗಿಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ತಾಲೂಕು ವಿಸ್ತರಣಾಧಿಕಾರಿ ಶರಣ ಬಸಪ್ಪ ಪಾಟೀಲ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ ತಾಲೂಕಿನ ಖಂಡಾಳ ಗ್ರಾಮದ ಶರಣಬಸಪ್ಪ ಪಾಟೀಲ (32) ಆತ್ಮಹತ್ಯೆಗೆ ಶರ ಣಾದವರಾಗಿದ್ದು ಆತ್ಮಹತ್ಯೆಗೆ ಹಿರಿಯ ಅಧಿಕಾ ರಿಯ ಕಿರುಕುಳವೇ ಕಾರಣ ಎಂಬ ಆರೋಪ‌ ಕೇಳಿ ಬಂದಿದೆ.

ಕಲಬುರಗಿ ಕೋರ್ಟ್ ಬಳಿಯ ಗ್ರೀನ್ ಪಾರ್ಕ್‌ ಬಡಾವಣೆಯಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ.ಈ‌ ಹಿಂದೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಯ ಕಿರು ಕುಳವೇ ಆತ್ಮಹತ್ಯೆಗೆ ಕಾರಣ ಎಂದು ಆರೋಪಿಸಿ ಮೃತ ಅಧಿಕಾರಿಯ ಸಹೋದರ ಪಂಡಿತರಾವ್ ಪಾಟೀಲ್ ಅವರು ಆರ್​ಜಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಥಮ ದರ್ಜೆ ಸಹಾಯಕರಾಗಿದ್ದ ಶರಣಬಸಪ್ಪ ಪಾಟೀಲ ಇತ್ತೀಚೆಗೆ ತಾಲೂಕು ವಿಸ್ತೀರ್ಣಾಧಿಕಾರಿ ಯಾಗಿ ನೇಮಕಗೊಂಡಿದ್ದರು.ಅಲ್ಲದೇ ಇದೇ ಡಿಸೆಂಬರ್ 2ರಂದು ಅವರ ಮದುವೆ ಕೂಡಾ ನಿಶ್ಚಯವಾಗಿತ್ತು.ಮದುವೆ ಸಿದ್ಧತೆಯಲ್ಲಿ ಇರುವಾ ಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರಸ್ತುತ ಕಲಬುರಗಿ ಬಿಸಿಎಂ ಇಲಾಖೆ ಜಿಲ್ಲಾ ಅಧಿಕಾರಿಯಾದ ಮೆಹಮೂದ್ ಈ ಹಿಂದೆ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಯಾ ಗಿದ್ದರು ಆಗ ತಮ್ಮ ಸಹೋದರನ ಮೇಲೆ ವೈಯಕ್ತಿಕ ಹಗೆತನ ಸಾಧಿಸಿದ್ದಾರೆ.ಹುಡುಗರನ್ನು ಕಳುಹಿಸಿ ಜೀವ ಬೆದರಿಕೆ ಹಾಕಿದ್ದಾರೆ.ಈ ಬಗ್ಗೆ ನಮ್ಮ ಸಹೋದರ ಮನೆಯಲ್ಲಿ ಹೇಳಿಕೊಂಡಿ ದ್ದರು.ವೈಯಕ್ತಿಕ ದ್ವೇಷ ಸಾಧಿಸಿ ಬಡ್ತಿಯನ್ನು ಸಹ ತಡೆ ಹಿಡಿದು ಒಂದು ವರ್ಷದ ಸಂಬಳವನ್ನೂ ಬಿಡುಗಡೆ ಮಾಡಿರಲಿಲ್ಲ ಆಗಾಗ ವಿನಾಕಾರಣ ಕರೆ ಮಾಡಿ ತೊಂದರೆ ಕೊಡುತ್ತಿದ್ದರು ಹೀಗಾಗಿ, ಮಾನಸಿಕ ವೇದನೆಯಿಂದ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ ಎಂದು ಮೃತರ ಸಹೋದರ ಪಂಡಿತರಾವ್‌ ಪಾಟೀಲ್ ದೂರಿನಲ್ಲಿ ಉಲ್ಲೇಖಿ ಸಿದ್ದಾರೆ. ಸದ್ಯ ಪ್ರಕರಣದ ದಾಖಲಿಕೊಂಡ ಆರ್​ಜಿ ನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿ ದ್ದಾರೆ.

ಚಕ್ರವರ್ತಿ ಜೊತೆಗೆ   ಸುದ್ದಿ ಸಂತೆ ನ್ಯೂಸ್ ಹಿರಿಯ ವರದಿಗಾರರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.