ಶಿಕ್ಷಕರೊಬ್ಬರ ಕೊರಳಪಟ್ಟಿ ಹಿಡಿದು ನಡುರಸ್ತೆಯಲ್ಲೇ ಎಳೆದೊಯ್ಯದ ಪೊಲೀಸರು ಸಾಮಾಜಿಕ ಜಾಲ ತಾಣದಲ್ಲಿ ಪೊಟೊ ವೈರಲ್…..

Suddi Sante Desk

ಚಿಕ್ಕೋಡಿ –

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಯ ಮುಗಳಖೋಡ ಪಟ್ಟಣದ ನಿವಾಸಿ ಸರ್ಕಾರಿ ಶಾಲೆಯ ಶಿಕ್ಷಕ ಚಂದ್ರು ಲಮಾಣಿ ಎಂಬುವವರ ಮೇಲೆ ಪೊಲೀಸರು ದರ್ಪ ತೋರಿಸಿದ್ದಾರೆ.ಹೌದು ಇಲ್ಲಿನ ಪೊಲೀಸ್ ಇನ್ಸ್ಪೆಕ್ಟರ್ ಅವರೇ ಶಿಕ್ಷಕರ ಮೇಲೆ ದಬ್ಬಾಳಿಕೆಯನ್ನು ಮಾಡಿದ ಆರೋಪ ಕೇಳಿಬಂದಿದೆ.ಪಟ್ಟಣದ ನಿವಾಸಿ ಸರ್ಕಾರಿ ಶಾಲೆಯ ಶಿಕ್ಷಕ ಚಂದ್ರು ಲಮಾಣಿ ಎಂಬುವವರ ಮೇಲೆ ಪೊಲೀಸರು ದರ್ಪತೋರಿದ್ದು ಹಾರೋಗೇರಿಯ ಇನ್ಸ್ ಪೆಕ್ಟರ್ ರಾಘವೇಂದ್ರ ಖೋತ ಎಂಬುವವರು ಶಿಕ್ಷಕನ ಶರ್ಟ್ ಪಟ್ಟಿ ಹಿಡಿದು ರಸ್ತೆಯಲ್ಲೇ ಎಳೆದುಕೊಂಡು ಹೋಗಿ ದ್ದಾರೆ.ಶಿಕ್ಷಕನನ್ನು ಎಳೆದೊಯ್ಯುವಾಗ ಜನರು ಮತ್ತು ಮಹಿಳೆಯರು ಪೊಲೀಸ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮುಗಳ ಖೋಡ ಪಟ್ಟಣದಲ್ಲಿ ಈ ಒಂದು ಘಟನೆ ನಡೆದಿದ್ದು ಮುಗಳಖೋಡ ಪಟ್ಟಣದಲ್ಲಿ ದೇವಸ್ಥಾನದ ಖಾಲಿ ಜಾಗ ದಲ್ಲಿ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತಿದೆ. ದೇವಸ್ಥಾ ನಕ್ಕೆ ಕಾಂಪೌಂಡ್ ಮಾಡುತ್ತಿರುವ ಜಾಗ ತಮಗೆ ಸೇರಿದ್ದು ಸೂಕ್ತ ತನಿಖೆ ನಡೆಸಿ ಕಾಮಗಾರಿ ಆರಂಭಿಸುವಂತೆ ಚಂದ್ರು ಲಮಾನಿ ಈಗಾಗಲೇ ಪಿಡಬ್ಲೂಡಿ ಇಲಾಖೆ ಸಹಾಯಕ ಇಂಜಿನಿಯರ್ ಗೆ ಪತ್ರ ಬರೆದಿದ್ದು ಆದಾಗ್ಯೂ ಪೊಲೀಸರ ಸಮ್ಮುಖದಲ್ಲಿ ಕಾಮಗಾರಿ ಪ್ರಾರಂಭ ಮಾಡಿದ್ದಕ್ಕೆ ಪೊಲೀ ಸರು ಹಾಗೂ ಚಂದ್ರು ಕುಟುಂಬಸ್ಥರ ನಡುವೆ ವಾಗ್ವಾದ ನಡೆದಿದ್ದು ಈ ವೇಳೆ ಪಿಎಸ್‌ಐ ಶಿಕ್ಷಕನ ಮೇಲೆ ದರ್ಪ ತೋರಿದ್ದಾರೆ ಎಂದು ತಿಳಿದುಬಂದಿದ್ದು ಸಧ್ಯ ಪರಿಸ್ಥಿತಿ ಶಾಂತವಾಗಿದ್ದು ಈ ಒಂದು ಕುರಿತು ಶಿಕ್ಷಕರ ಪರ ಸಂಘಟನೆ ಯ ನಾಯಕರು ಧ್ವನಿ ಎತ್ತಬೇಕಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.