ಕಬ್ಬಿನ ಟ್ಯಾಕ್ಟರ್ ಸಾರಿಗೆ ಬಸ್ ಡಿಕ್ಕಿ ತಪ್ಪಿತು ಅವಘಡ

Suddi Sante Desk

ಧಾರವಾಡ –

ಕಬ್ಬನ್ನು ತುಂಬಿಕೊಂಡು ಹೊರಟಿದ್ದ ಟ್ಯಾಕ್ಟರ್ ಮತ್ತು ಸಾರಿಗೆ ಬಸ್ ಅಪಘಾತವಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡದ ಹಳೇ ಎಸ್ಪಿ ವೃತ್ತದಲ್ಲಿ ಈ ಒಂದು ಅಪಘಾತವಾಗಿದ್ದು ಅದೃಷ್ಟವಶಾತ್ ಯಾರಿಗೂ ಯಾವುದೇ ಗಾಯಗಳಾಗಿಲ್ಲ.

ಕಬ್ಬನ್ನು ತುಂಬಿಕೊಂಡು ಹೊರಟಿದ್ದ ಟ್ಯಾಕ್ಟರ್ ಏಕಾಎಕಿಯಾಗಿ ತಿರುವಿನಲ್ಲಿ ತಗೆದುಕೊಂಡಿದ್ದೇ ಅವಘಡಕ್ಕೆ ಕಾರಣವಾಗಿದ್ದು ಇನ್ನೂ ಟ್ಯಕ್ಟರ್ ಹಿಂದೆ ಬರುತ್ತಿದ್ದ ಬಸ್ ಬಂದು ಹಿಂದೆ ಡಿಕ್ಕಿಯಾಗಿದ್ದು ಸ್ವಲ್ಪದರಲ್ಲಿಯೇ ಅವಘಡವೊಂದು ನಗರದಲ್ಲಿ ತಪ್ಪಿದಂತಾಗಿದೆ.

ಇನ್ನೂ ವಿಷಯ ತಿಳಿದ ಧಾರವಾಡ ಸಂಚಾರಿ ಪೊಲೀಸರು ಕಬ್ಬಿನ ಟ್ಯಾಕ್ಟರ್ ನ್ನು ಮುಂದೆ ನಿಧಾನವಾಗಿ ಕಳಿಸಿ ನಂತರ ಬಸ್ ನ್ನು ಕಳಿಸಿ ಸಮಸ್ಯೆಯನ್ನು ಸರಿ ಮಾಡಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.