ಕಣ್ಣೂರು(ಕೇರಳ) –
ಕೇರಳ ರಾಜ್ಯದಲ್ಲಿ ಸಂಭವಿಸಿರುವ ಅಪಘಾತವೊಂದು ನೋಡುಗರ ಎದೆ ಝಲ್ ಎನಿಸುವಂತಿದೆ.ಈ ಅಪಘಾತ ದಲ್ಲಿ ಸಿಲುಕಿದ ಎಂಟು ವರ್ಷದ ಬಾಲಕ ಪವಾಡ ಸದೃಶ್ಯ ರೀತಿಯಲ್ಲಿ ಬಚಾವ್ ಆಗಿದ್ದಾನೆ.ಅಡ್ಡರಸ್ತೆಯಿಂದ ಸೈಕಲ್ ತುಳಿದುಕೊಂಡು ಬರುತ್ತಿದ್ದ ಬಾಲಕ ರಸ್ತೆ ಮೇಲೆ ವೇಗವಾ ಗಿ ಚಲಿಸುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದು ರಸ್ತೆಗೆ ಬಿದ್ದಿ ದ್ದಾನೆ.ಈ ವೇಳೆ ದಿಢೀರ್ ಆಗಿ ಬಸ್ ವೊಂದು ಆಗಮಿಸಿದೆ. ಆಗ ಬಾಲಕನು ತೂರಿಕೊಂಡು ರಸ್ತೆಯ ಮತ್ತೊಂದು ಬದಿಗೆ ಬಿದ್ದರೆ ಸೈಕಲ್ ಮೇಲೆ ಬಸ್ ಹರಿದಿದೆ.ಆದರೆ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಅಪಘಾತದಲ್ಲಿ ನ್ಯಾರೋ ಎಸ್ಕೇಪ್ ಆದ ಬಾಲಕ ಹೌದು, 8 ವರ್ಷದ ಶಾಧುರಹ್ಮಾನ್ ತನ್ನ ಮನೆಯ ಕಾಂಪೌಂಡ್ನಲ್ಲಿ ಹೊಸ ಸೈಕಲ್ನಲ್ಲಿ ಆಟವಾಡುತ್ತಿದ್ದ.ಅಡ್ಡರಸ್ತೆ ಮೂಲಕ ಸೈಕಲ್ ತುಳಿದುಕೊಂಡು ತಳಿಪರಂಬ-ಇರಿಟ್ಟಿ ರಾಜ್ಯ ಹೆದ್ದಾರಿಗೆ ಬಂದಿದ್ದಾನೆ.ಇಳಿಜಾರು ಇರುವುದರಿಂದ ಸೈಕಲ್ ವೇಗವಾಗಿಯೇ ಮುಖ್ಯರಸ್ತೆಗೆ ಬಂದಿದೆ.ಇದೇ ವೇಳೆ ಮುಖ್ಯರಸ್ತೆಯಲ್ಲಿ ವೇಗವಾಗಿ ಬೈಕ್ ವೊಂದು ಸಾಗುತ್ತಿತ್ತು. ತನ್ನ ಸೈಕಲ್ ವೇಗವನ್ನು ನಿಯಂತ್ರಿಸಲು ಸಾಧ್ಯವಾಗದ ಹಿನ್ನೆಲೆ ಬಾಲಕ ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ.
ಡಿಕ್ಕಿ ರಭಸಕ್ಕೆ ಬಾಲಕ ರಸ್ತೆಯ ಇನ್ನೊಂದು ಬದಿಗೆ ತೂರಿ ಕೊಂಡು ಬಿದ್ದಿದ್ದಾನೆ.ಇದೇ ಸಮಯದಲ್ಲಿ ಬೈಕ್ ಹಿಂಬದಿ ಯಲ್ಲೇ ವೇಗವಾಗಿ ಬಂದ ಬಸ್ ಹೊಸ ಸೈಕಲ್ ಮೇಲೆ ಹರಿದಿದೆ.ಬಾಲಕ ರಸ್ತೆಯ ಇನ್ನೊಂದು ಬದಿಗೆ ಬಿದ್ದ ಪರಿಣಾ ಮ ಈ ಅಪಘಾತದಿಂದ ಪಾರಾಗಿದ್ದಾನೆ.ಇಲ್ಲವಾದಲ್ಲಿ ದುರಂತವೇ ನಡೆದು ಹೋಗುತ್ತಿತ್ತು.ಈ ಘಟನೆಯಲ್ಲಿ ಬೈಕ್ ಸವಾರನಿಗೂ ಸಣ್ಣ-ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.ಈ ಅಪಘಾತದ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಭಯಾನಕವಾಗಿದೆ.