ಕೆರೆಯಲ್ಲಿ ಬಿದ್ದು ಮಹಿಳೆ ಸಾವು – ಸಾಲಕ್ಕೇ ಹೆದರಿ ಜೀವ ಬಿಟ್ಟ ಮಹಿಳೆ

Suddi Sante Desk

ಹುಬ್ಬಳ್ಳಿ –

ಸಾಲಗಾರರ ಕಾಟದಿಂದ ಬೇಸತ್ತ ಮಹಿಳೆಯೊಬ್ಬಳು ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರು ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.ಹುಬ್ಬಳ್ಳಿಯ ಅಂಚಟಗೇರಿ ಗ್ರಾಮದ ಸರಹದ್ದಿನ ವ್ಯಾಪ್ತಿಯಲ್ಲಿನ ಬುಡ್ನಾಳ ಕೆರೆಯಲ್ಲಿ ಈ ಒಂದು ಘಟನೆ ನಡೆದಿದೆ. ಮಲ್ಲವ್ವ ಶಂಕರ ಸುಣಗಾರ 48 ವರ್ಷದ ಮಹಿಳೆಯೇ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ.

ವಯಕ್ತಿಕ ಕೆಲಸ ಕಾರ್ಯಗಳಿಗಾಗಿ ಮಲ್ಲವ್ವ ಅವರು ಸಿಕ್ಕಾಪಟ್ಟಿಯಾಗಿ ಕೈಗಡ ಸಾಲವನ್ನು ಮಾಡಿಕೊಂಡಿದ್ದರಂತೆ . ಇವರ ಕಿರಿಕಿರಿ ಹೆಚ್ಚಾಗಿತ್ತು. ಇದರಿಂದ ಬೇಸತ್ತ ಮಲ್ಲವ್ವ ಇಂದು ಅಂಚಟಗೇರಿ ಗ್ರಾಮದ ಸರಹದ್ದಿನ ಬುಡ್ನಾಳ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇನ್ನೂ ವಿಷಯ ತಿಳಿದ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ಸ್ಥಳಕ್ಕೇ ಆಗಮಿಸಿ ಕೆರೆಯಲ್ಲಿನ ಶವವನ್ನು ಹೊರತಗೆದರು. ಸಧ್ಯ ಈ ಕುರಿತಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಮಾಡ್ತಾ ಇದ್ದಾರೆ.

ಇನ್ನೂ ಸ್ಥಳಕ್ಕೇ ಹುಬ್ಬಳ್ಳಿ ಗ್ರಾಮೀಣ ಇನಸ್ಪೇಕ್ಟರ್ ರಮೇಶ ಗೋಕಾಕ , ಪಿಎಸೈ ಚಾಮುಂಡೇಶ್ವರಿ, ಪೊಲೀಸ್ ಸಿಬ್ಬಂದ್ದಿಗಳಾದ ನಾರಾಯಣ ಹಿರೇಹೋಳಿ, ಡೇವಿಡ್ ಸೇರಿದಂತೆ ಹಲವು ಸಿಬ್ಬಂದಿಗಳು ಪರಿಶೀಲನೆ ಮಾಡಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.