ಹುಬ್ಬಳ್ಳಿ ಧಾರವಾಡ –
ಚಲಿಸುತ್ತಿರುವ ರೈಲಿನಲ್ಲಿ ಪ್ರಾಣದ ಹಂಗು ತೊರೆದು ಯುವಕನೋರ್ವ ಹುಚ್ಚಾಟ ಮೆರೆಸಿರುವ ಘಟನೆ ಹುಬ್ಬಳ್ಳಿ ವ್ಯಾಪ್ತಿಯಲ್ಲಿ ನಡೆದಿದೆ.ಹೌದು ಮಂಗಳೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ವಿಜಯಪುರಕ್ಕೆ ತೆರಳುತ್ತಿದ್ದ ವಿಜಯಪುರ ವಿಶೇಷ ಎಕ್ಸ್ಪ್ರೆಸ್ನ ಟ್ರೈನಿನಲ್ಲಿ ಈ ಒಂದು ಘಟನೆ ನಡೆದಿದೆ.

ಇನ್ನು ವೇಗವಾಗಿ ಚಲಿಸುತ್ತಿದ್ದ ರೈಲಿನ ಬಾಗಿಲಿನಿಂದ ಮುಂದೆ ಭಾಗಿ ಕೈಗೆ ಸಿಕ್ಕ ಸಿಕ್ಕ ಗಿಡಗಳ ಎಲೆಗಳನ್ನು ಹರಿ ಯುವದು ಕಾಲಿನಿಂದ ಒದೆಯುವ ಯತ್ನ ಜೊತೆಹೆ ರೈಲಿನ ಬಾಗಿಲು ಹಿಡಿದು ಜೋಕಾಲಿ ಆಡುವ ಮೂಲಕ ಹುಚ್ಚಾಟ ಮೆರೆದ್ದಾನೆ.ಯುವಕ ಹುಚ್ಚಾಟ ಪ್ರದರ್ಶನವನ್ನ ಅದೇ ಟ್ರೈನಿನಲ್ಲಿ ಪ್ರಯಾಣಿಸುತ್ತಿದ್ದ ಮತ್ತೋರ್ವ ಯುವಕ ವಿಡಿಯೋ ಮಾಡಿದ್ದಾನೆ.ಈ ಹಿಂದೆ ಹಲವು ಬಾರಿ ರೈಲು ವೇಗವಾಗಿ ಚಲಿಸುವ ವೇಳೆ ಈ ರೀತಿಯ ಹುಚ್ಚಾಟ ಮೆರೆದು ಜೀವಹಾನಿ ಆದ ಅನೇಕ ಉದಾಹರಣೆಯನ್ನು ನಾವು ನೆನಪಿಸಿಕೊಳ್ಳಬಹುದು

ರೈಲ್ವೆ ಇಲಾಖೆ ಇಂತಹ ದುಸ್ಸಾಹಸಕ್ಕೆ ಮುಂದಾಗುವವರ ವಿರುದ್ಧ ಸಾಕಷ್ಟು ಬಾರಿ ಜಾಗೃತಿ ಮೂಡಿಸುತ್ತಿದದು ಆದ್ರೂ ಕೆಲವರು ಇಂತಹ ಹುಚ್ಚು ಪ್ರದರ್ಶನಕ್ಕೆ ಮುಂದಾಗಿದ್ದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ
ಇನ್ನು ಯುವಕನೋರ್ವ ಹುಚ್ಚಾಟ ಪ್ರದರ್ಶಿಸಿರುವ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ಯುವಕನ ಹುಚ್ಚಾಟದ ವಿರುದ್ಧ ಅಸಮಾಧಾನ ಕೇಳಿ ಬರುತ್ತಿದ್ದು ಸೂಕ್ತ ಕ್ರಮಕ್ಕೆ ಒತ್ತಾಯ ಮಾಡಿದ್ದಾರೆ.