ಹುಬ್ಬಳ್ಳಿಯಲ್ಲಿ ಯುವತಿ ಆತ್ಮಹತ್ಯೆ ತಾಳಿ ಕಟ್ಟುವ ಮುನ್ನವೇ ಬಾವಿಯ ಪತಿಯ ಕಾಟಕ್ಕೆ ಬೇಸತ್ತ ಪವಿತ್ರ ಆತ್ಮಹತ್ಯೆ…..

Suddi Sante Desk

ಹುಬ್ಬಳ್ಳಿ –

ಭಾವಿ ಪತಿಯ ಕಿರುಕುಳದಿಂದ ಮನನೊಂದು ಯುವತಿ ಯೊಬ್ಬಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹೌದು ನಿಶ್ಚಿತಾರ್ಥ ಆದಾಗಿನಿಂದಲೂ ಕಿರುಕುಳ ನೀಡುತ್ತಿದ್ದನಂತೆ.ಇದರಿಂದ ಮನನೊಂದು ಪವಿತ್ರ (೨೫) ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ.

ಸೆಪ್ಟೆಂಬರ್ 1 ರಂದು ಹಾವೇರಿಯ ಅಭಿನಂದನ್ ಜೊತೆ ನಿಶ್ಚಿತಾರ್ಥ ಆಗಿತ್ತು‌.ಇನ್ನೇನು ಮದುವೆಗೆ ಸಿದ್ದತೆ ನಡೆದಿತ್ತು ಪದೇ ಪದೇ ಭಾವಿ ಪತ್ನಿಯ ಮೇಲೆ ಸಂಶಯ ಪಡುತ್ತಿದ್ದ ಅಭಿನಂದನ್.ಕಳೆದವಾರ ದಾಂಡೇಲಿಯಲ್ಲಿ ಫ್ರಿ ವೆಡ್ಡಿಂಗ್ ಶೂಟಿಂಗ್ ಕರೆದುಕೊಂಡು ಹೋಗಿದ್ದ ಅಭಿನಂದನ್.

ಅಲ್ಲಿಂದ ಬಂದ ವಿಪರಿತ ಕಿರುಕುಳ ನೀಡಿದ್ದನಂತೆ.
ಹೀಗಾಗೇ ಇಂದು ಮನೆಯಲ್ಲೆ ನೇಣಿಗೆ ಶರಣಾಗಿದ್ದಾಳೆ ಪವಿತ್ರ.ಭಾವಿ ಪತಿ ಅಭಿನಂದನ್ ವಿರುದ್ದ ಕುಟುಂಬಸ್ಥರ ಆಕ್ರೋಶವನ್ನು ವ್ಯಕ್ತಪಡಿಸಿದರು.

ಹುಬ್ಬಳ್ಳಿಯ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ

ವೆಂಕಟೇಶ್ ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.