ಕ್ರಿಯಾಶೀಲ ಶಿಕ್ಷಕ ನಿಧನ – ಶಿಕ್ಷಕನ ಅಗಲಿಕೆಗೆ ಕಣ್ಣೀರಿಡುತ್ತಿರುವ ವೆಂಕಟಾಪೂರ ಗ್ರಾಮಸ್ಥರು ಶಿಕ್ಷಕರು…..

Suddi Sante Desk

ಧಾರವಾಡ –

ಧಾರವಾಡ ತಾಲ್ಲೂಕು ಆದರ್ಶ ಒಳ್ಳೇಯ ಶಿಕ್ಷಕ ನನ್ನು ಕಳೆದುಕೊಂಡು ಅನಾಥವಾಗಿದೆ.ಹೌದು ಜಿಲ್ಲೆಯಲ್ಲಿ ಮತ್ತು ತಾಲ್ಲೂಕಿನಲ್ಲಿ ಮಾದರಿ ಶಿಕ್ಷಕರಲ್ಲಿ ಒಬ್ಬರಾಗಿದ್ದ ಶಿಕ್ಷಕ ಪಿ ಬಿ ಕಾಳೇನವರ ನಿಧನರಾಗಿ ದ್ದಾರೆ.

ಕಳೆದ ವಾರ ಇವರಿಗೆ ಕರೋನಾ ಸೋಂಕು ಕಾಣಿಸಿ ಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದ ಇವರು ನಿನ್ನೇ ರಾತ್ರಿ ಹತ್ತು ಗಂಟೆ ಗೆ ನಿಧನರಾಗಿದ್ದಾರೆ.

ಇನ್ನೂ ಇವರ ನಿಧನದಿಂದಾಗಿ ಧಾರವಾಡದ ವೆಂಕ ಟಾಪೂರ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಆದರ್ಶ ಶಿಕ್ಷಕರನ್ನು ಕಳೆದುಕೊಂಡಿರುವ ಗ್ರಾಮವೇ ಕಂಬನಿ ಮೀಡಿಯುತ್ತಿದೆ.ಶಾಲೆಯಲ್ಲಿ ಮತ್ತು ಗ್ರಾಮ ದ ಮಕ್ಕಳಿಗೆ ಆದರ್ಶ ಶಿಕ್ಷಕರಾಗಿದ್ದ ಇವರನ್ನು ಕಳೆ ದುಕೊಂಡು ಗ್ರಾಮ ದೊಡ್ಡ ಆಸ್ತಿಯನ್ನು ಕಳೆದು ಕೊಂಡಂತಾಗಿದೆ ಎಂದು ಗ್ರಾಮದ ಮುಖಂಡ ಬಸ ವರಾಜ ಹವಾಲ್ದಾರ್ ಹೇಳುತ್ತಾ ಮೃತರಾದ ಗುರುವಿ ನ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾ ರೆ.

ಇವರೊಂದಿಗೆ ಗ್ರಾಮಸ್ಥರಾದ ಬಸನಗೌಡ ಪಾಟೀ ಲ,ಮಹಾಂತೇಶ ಹವಾಲ್ದಾರ.ದಾದಾಪೀರ ಇಂಚಲ ಹನಮಂತ ಡೊಕ್ಕನ್ನವರ,ಭೀಮಣ್ಣ ಅವರಾದಿ, ನಿಂಗನಗೌಡ ಪಾಟೀಲ,ಫಕೀರಪ್ಪ ಹವಾಲ್ದಾರ, ಗೌಡಪ್ಪಗೌಡ ಪಾಟೀಲ,ಬಾಬಾಜಾನ ನಗಾಚಿ, ರುದ್ರಪ್ಪ ಜೋಗನ್ನವರ,ಪ್ರಕಾಶ ಹವಾಲ್ದಾರ, ಯಲ್ಲಪ್ಪ ಮಲ್ಲನಾಯ್ಕರ,ಭೀಮನಗೌಡ ಪಾಟೀಲ, ಸೇರಿದಂತೆ ಎಲ್ಲರೂ ವಿಷಾದವನ್ನು ವ್ಯಕ್ತಪಡಿಸಿ ದ್ದಾರೆ.ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಹಾಗು ಅವರ ಕುಟುಂಬದ ಎಲ್ಲಾ ಬಂಧುಗ ಳಿಗೆ ದುಖಃವನ್ನು ಸಹಿಸುವ ಶಕ್ತಿ ಯನ್ನು ದೇವರು ದಯಪಾಲಿಸಲೆಂದು ವೆಂಕಟಾಪೂರ ಗ್ರಾಮಸ್ಥರು ಪ್ರಾರ್ಥಿಸಿದ್ದಾರೆ ಅಲ್ಲದೇ ಮತ್ತೆ ಹುಟ್ಟಿ ಬನ್ನಿ ಸರ್ ಎಂದಿದ್ದಾರೆ.

ಇನ್ನೂ ಇವರೊಂದಿಗೆ ಇತ್ತ ಹನಮಂತ ಬೂದಿಹಾಳ, ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸರ್ವ ಸದಸ್ಯರಾದ, ಎಲ್ ಐ ಲಕ್ಕ ಮ್ಮನವರ,ಶರಣಬಸವ ಬನ್ನಿಗೊಳ, ಸಂಗಮೇಶ ಕನ್ನಿನಾಯ್ಕರ್,ಎಸ್ ಎಫ್ ಪಾಟೀಲ, ರವಿ ಬಂಗೇನ ವರ,ಅಕ್ಬರಅಲಿ ಸೋಲಾಪೂರ, ರಾಜುಸಿಂಗ್ ಹಲ ವಾಯಿ,ಚಂದ್ರಶೇಖರ ಶೆಟ್ರು, ನಾರಾಯಣಸ್ವಾಮಿ, ಕೆ ಎಮ್ ಮುನವಳ್ಳಿ, ಎಸ್ ಎ ಜಾಧವ, ಎಸ್ ಎಫ್ ಧನಿಗೊಂಡ, ರುಸ್ತಂ ಕನವಾಡೆ,ಬಿ ವಿ ಪ್ರೇಮಾವತಿ, ಕೀರ್ತಿವತಿ ವಿ ಎನ್, ಜೆ ಟಿ ಮಂಜುಳಾ,.ಸೀಮಾ ನಾಯಕ, ಭಾರತಿ ಭಂಡಾರಿ, ಮಂಜುಳಾ ಬಾಗಲೂ ರು,

ನಾಗವೇಣಿ,ಇಂದಿರಾ.ಮುಕಾಂಬಿಕಾ ಭಟ್. ನಾಗರ ತ್ನ,ಲಕ್ಷ್ಮೀದೇವಮ್ಮ, ಎಂ ವಿ,ಕುಸುಮಾ ಎಸ್ ಹೊಳೆ ಯಣ್ಣನವರ,ಬಿ ವಿ ಅಂಗಡಿ ,ಜಗದೀಶ್ ಬೋಳಸೂ ರ, ಅಶೋಕ ಸಜ್ಜನ, ಸೇರಿದಂತೆ ಹಲವರು ಸಂತಾಪ ವನ್ನು ಸೂಚಿಸಿದ್ದಾರೆ

ಅಲ್ಲದೇ ಮೃತ ಕುಟುಂಬಕ್ಕೆ ಕೂಡಲೇ ರಾಜ್ಯ ಸರ್ಕಾ ರ ಕರೋನಾ ವಾರಿಯರ್ಸ್ ಅಂತಾ ಸೂಕ್ತ ಘೋಷ ಣೆ ಮಾಡಿ ಪರಿಹಾರವನ್ನು ಘೋಷಣೆ ಮಾಡಿ ಪರಿ ಹಾರವನ್ನು ನೀಡುವಂತೆ ಒತ್ತಾಯವನ್ನು ಶಿಕ್ಷಕರು ಮಾಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.