ಮತಾಂತರ ನಿಷೇಧ ಕಾಯ್ದೆ ಜಾರಿ‌ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಮತಾಂತರ – ಮತಾಂತರಕ್ಕೆ‌ ಮುಂದಾದ್ರಾ ಕ್ರೈಸ್ತ ಮಿಶನರಿಗಳು

Suddi Sante Desk

ಹುಬ್ಬಳ್ಳಿ –

ಮತಾಂತರ ನಿಷೇಧ ಕಾಯ್ದೆ ಜಾರಿ‌ ಬೆನ್ನಲ್ಲೇ ಮತ್ತೆ ಮತಾಂತರಕ್ಕೆ‌ ಮುಂದಾದ ಕ್ರೈಸ್ತ ಮಿಶನರಿಗಳು ಎಂಬ ಒಂದು ಆರೋಪ ಹುಬ್ಬಳ್ಳಿಯಲ್ಲಿ ಕಂಡು ಬಂದಿದೆ. ಹೌದು ಹುಬ್ಬಳ್ಳಿ ತಾಲೂಕಿನ ಕೋಳಿವಾಡದ ಗ್ರಾಮದ ಮನೆಯೊಂ ದರಲ್ಲಿ ಧರ್ಮಪ್ರಚಾರ ಮಾಡಲು ತೆರಳಿದ್ದರಂತೆ ಕ್ರೈಸ್ತ ಸಮುದಾಯದ ಮುಖಂಡರು

30 ಕ್ಕೂ ಅಧಿಕ ಜನರನ್ನ ಮನೆಯೊಂದರಲ್ಲಿ ಸೇರಿಸಿ ಧರ್ಮಪ್ರಚಾರಕ್ಕೆ ಮುಂದಾದ ಕ್ರೈಸ್ತ ಸಮುದಾಯದ ಮುಖಂಡರು.ವಿಷಯ ತಿಳಿಯುತ್ತಿದ್ದಂತೆಯೇ ಹಿಂದೂಪರ ಸಂಘಟನೆಗಳ ಕಾರ್ಯಕರ್ತರಿಂದ ದಾಳಿಯನ್ನು ಮಾಡ ಲಾಗಿದೆ.

ನಿನ್ನೆ ಸಂಜೆ ವೇಳೆ ಗ್ರಾಮದ ಮನೆಯೊಂದರಲ್ಲಿ ಧರ್ಮ ಪ್ರಚಾರಕ್ಕೆ ಮುಂದಾಗಿದ್ದರಂತೆ ಮುಖಂಡರು.15 ಕ್ಕೂ ಹೆಚ್ಚು ಕುಟುಂಬಗಳನ್ನ ಮತಾಂತರ ಮಾಡಲು ಹೊರಟಿದ್ದ ಸಮುದಾಯದವರು.ಧರ್ಮಪ್ರಚಾರದ ಮೂಲಕ ಮತಾಂ ತರಕ್ಕೆ ಮುಂದಾಗಿದ್ದರು ಎಂದು ಆರೋಪಿಸಿ ಕ್ರೈಸ್ತ ಸಮಾಜದ ಮುಖಂಡರನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು.

ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಆರೋಪದ ಮೇಲೆ ಕ್ರೈಸ್ಥ ಸಮುದಾಯದ ಮುಖಂಡರನ್ನು ವಿಚಾರಣೆ ಗೊಳಪಡಿಸಿದ್ದಾರೆ ಹುಬ್ಬಳ್ಳಿ ಗ್ರಾಮೀಣ ಪೊಲೀಸರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.