BEO ಅವರಿಂದ ಶಿಕ್ಷಕ ಬಂಧುಗಳಿಗೆ ಮಹತ್ವದ ಸಂದೇಶ ಜುಲೈ 9 ರ ಒಳಗಾಗಿ ತಪ್ಪದೆ ಈ ಕೆಲಸ ಮಾಡಲು ಸೂಚನೆ…..

Suddi Sante Desk

ರಾಯಬಾಗ –

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಶಿಕ್ಷಕರಿಗೆ ಮಹತ್ವದ ಸಂದೇಶ ವೊಂದನ್ನು ರವಾನೆ ಮಾಡಿದೆ ಹೌದು ಕಚೇರಿ ಯಲ್ಲಿ ಈಗಾಗಲೇ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾ ಗಿದ್ದು ರಾಯಬಾಗ ಜೇಷ್ಠತಾ ಪಟ್ಟಿಗೆ ಆಕ್ಷೇಪಣೆ ಸಲ್ಲಿಸುವ ಹಾಗೂ EEDS ತಂತ್ರಾಂಶದಲ್ಲಿ ಸೇವಾ ಮಾಹಿತಿ ಇಂದೀಕ ರಿಸುವಂತೆ ಸೂಚನೆ ನೀಡಲಾಗಿದೆ

ಹಿರಿಯ ಮುಖ್ಯ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ಪ್ರಕ್ರಿಯೆ ನಡೆಸಲು ಈಗಾಗಲೇ ಪ್ರಕಟಿಸಿರುವ ಜ್ಯೇಷ್ಠ ತಾ ಪಟ್ಟಿಯಲ್ಲಿ ಇರುವ ಶಿಕ್ಷಕರು ಆಕ್ಷೇಪಣೆ ಇದ್ದಲ್ಲಿ ಅಥವಾ ಹೆಸರು ಸೇರ್ಪಡೆ ಇದ್ದಲ್ಲಿ ಸಂಬಂಧಿಸಿದ ಶಿಕ್ಷಕರು ದಿನಾಂಕ 09/07/2022 ರ ಒಳಗಾಗಿ ನಿಗದಿತ ನಮೂನೆಯಲ್ಲಿ ದ್ವಿ ಪ್ರತಿ ಯಲ್ಲಿ ಈ ಕಚೇರಿಯ ವಿಷಯ ನಿರ್ವಾಹಕರಾದ ಎಲ್.ಬಿ.ಬೆಂಡಿಗೇರಿ ಮತ್ತು ಎಮ್.ಎಸ್.ಪಾಟೀಲ ಇವರನ್ನು ಖುದ್ದು ಭೇಟಿ ಮಾಡಿ ಆಕ್ಷೇಪಣೆ ಸಲ್ಲಿಸಲು ತಿಳಿಸಿದೆ.

EEDS ತಂತ್ರಾಂಶ ಸೇವಾ ಮಾಹಿತಿ ಇಂದೀಕರಣ

ಶಿಕ್ಷಕರು ತಮ್ಮ ಶಿಕ್ಷಕ ಮಿತ್ರ app ನಲ್ಲಿ ಸೇವಾ ವಿವರಗ ಳನ್ನು ಪರಿಶೀಲಿಸಿ ತಿದ್ದುಪಡಿ ಇದ್ದಲ್ಲಿ ಎಸ್ ಆರ್ ಕಂಬಾರ ಶಿಕ್ಷಣ ಸಂಯೋಜಕರು ಇವರನ್ನು ಸಂಪರ್ಕಿಸಿ EEDS ತಂತ್ರಾಂಶದಲ್ಲಿ ಸೇವಾ ವಿವರಗಳನ್ನು ಸರಿಪಡಿಸಿಕೊಳ್ಳಲು ಬಿಇಓ ಅವರು ತಿಳಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.