ಶಿಕ್ಷಕಿಯರಾಗಲಿದ್ದಾರೆ ಅಂಗನವಾಡಿ ಕಾರ್ಯಕರ್ತೆಯರು NEP ಸಮಿತಿ ಯಿಂದ ಮತ್ತೊಂದು ಎಡವಟ್ಟು ಸಲಹೆ ಈಗಲಾಗದರೂ ಎಚ್ಚೇತ್ತುಕೊಳ್ಳಿ ಶಿಕ್ಷಕರೇ ಸಂಘಟನೆಯ ನಾಯಕರೇ…..

Suddi Sante Desk

ಬೆಂಗಳೂರು –

ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ ಹೌದು ಅಂಗನವಾಡಿಗಳ ಜೊತೆಗೆ ಒಂದು ಮತ್ತು ಎರಡನೇ ತರಗತಿಗಳನ್ನು ಸಂಯೋಜಿಸಿ ಶಾಲೆಗಳ ಸ್ವರೂಪ ನೀಡಲು ಹಾಗೂ ಅಂಗನವಾಡಿ ಕಾರ್ಯಕರ್ತೆ ಯರನ್ನು ಶಿಕ್ಷಕಿಯರೆಂದು ಪರಿಗಣಿಸಲು ರಾಷ್ಟ್ರೀಯ ಶಿಕ್ಷಣ ನೀತಿ ಶಿಫಾರಸ್ಸು ಮಾಡಿದೆ.ಅಂಗನವಾಡಿ ಕಾರ್ಯ ಕರ್ತೆಯರನ್ನು ಈವರೆಗೆ 3 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ಕಲಿಸುವ ಜೊತೆಗೆ ಬಾಣಂತಿಯರು, ಗರ್ಭಿಣಿಯರ ಆರೋಗ್ಯದ ಮೇಲೆ ನಿಗಾ ಇರಿಸಲು ಪೌಷ್ಟಿಕ ಆಹಾರ ವಿತರಣೆ ಸೇರಿದಂತೆ ಸರ್ಕಾರದ ಹಲವು ಯೋಜನೆಗಳ ಅನುಷ್ಠಾನಕ್ಕಾಗಿ ಬಳಸಿಕೊಳ್ಳಲಾಗುತ್ತಿತ್ತು ಹೀಗಾಗಿ ಇವರಿಗೆ ಈಗ ಹೊಸದೊಂದು ಅವಕಾಶಗಳನ್ನು ನೀಡಲು ಮುಂದಾಗಿದೆ

ಇದೀಗ ಅವರನ್ನು ಶಿಕ್ಷಕಿಯರೆಂದು ಪರಿಗಣಿಸಲು ರಾಷ್ಟ್ರೀಯ ಶಿಕ್ಷಣ ನೀತಿ ಶಿಫಾರಸ್ಸು ಮಾಡಿರುವುದರಿಂದ ಅವರು ಪಡೆಯುತ್ತಿರುವ ಗೌರವ ಧನ,ವೇತನವಾಗಿ ಪರಿವರ್ತನೆಯಾಗಲಿದೆ.

ಜೊತೆಗೆ ಸೇವಾ ಭದ್ರತೆಯೂ ದೊರೆಯಲಿದೆ. ಉತ್ತರ ಕಾಂಡ ರಾಜ್ಯವು ಇದನ್ನು ಈಗಾಗಲೇ ಅನುಷ್ಠಾನಗೊಳಿ ಸಿದ್ದು ಕರ್ನಾಟಕದಲ್ಲೂ ಇದನ್ನು ಜಾರಿಗೊಳಿಸಲು ನಿರ್ಧರಿ ಸಲಾಗಿದ್ದು ಸಾಕಷ್ಟು ಪ್ರಮಾಣದಲ್ಲಿ ಕಷ್ಟ ಪಟ್ಟು ಹತ್ತು ಹಲವಾರು ಪದವಿ ಪಡೆದು ಪ್ರವೇಶ ಪರೀಕ್ಷೆ ಬರೆದು ಶಿಕ್ಷಕ ರಾಗಿ ಸಧ್ಯ ಎಲ್ಲವನ್ನೂ ಬಿಟ್ಟು ನೂರಾರು ಕಿಲೋಮೀಟರ್ ದೂರದಲ್ಲಿದ್ದುಕೊಂಡು ಶಿಕ್ಷಕ ರಾಗಿ ಕರ್ತವ್ಯ ಮಾಡುತ್ತಿದ್ದು ಈಗ ಇದ್ಯಾವುದು ಇಲ್ಲದೆ ಅಂಗನವಾಡಿ ಕಾರ್ಯಕರ್ತೆರಿಗೆ ಶಿಕ್ಷಕಿಯರಾಗಲು ಅವಕಾಶ ನೀಡಲಾಗುತ್ತಿದ್ದು ಇದರಿಂದ ಶಿಕ್ಷಕಿಯರಿಗೆ ಸಾಕಷ್ಟು ಅನ್ಯಾಯವಾಗುತ್ತಿದ್ದು ಮುಂದೇ ನಾಗುತ್ತದೆ ಎಂಬುದನ್ನು ಕಾದು ನೋಡಬೇಕು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.