ಆ ಸಂಘದ ಸದಸ್ಯತ್ವಕ್ಕೆ ಅಸಮ್ಮತಿ ಪತ್ರ ಬರೆದ ಮತ್ತೊರ್ವ ಶಿಕ್ಷಕ ಶಿಕ್ಷಕರ ಪತ್ರಕ್ಕೆ ಮೌನ…..

Suddi Sante Desk

ಧಾರವಾಡ –

ಬೆಂಗಳೂರು –

KSPSTA ಶಿಕ್ಷಕರ ಸಂಘಕ್ಕೆ ವಾರ್ಷಿಕ ಎರಡು ನೂರು ರೂಪಾಯಿ ಸದಸ್ಯತ್ವ ನೀಡಲು ರಾಜ್ಯದಲ್ಲಿ ಶಿಕ್ಷಕರ ವಿರೋಧ ಮುಂದುವರೆದಿದೆ.ಮೊನ್ನೆ ಮೊನ್ನೆ ಯಷ್ಟೇ ಇಬ್ಬರು ಶಿಕ್ಷಕರು ಸದಸ್ಯತ್ವ ಹಣದ ಕುರಿ ತಂತೆ ಧ್ವನಿ ಎತ್ತಿದ್ದ ಬೆನ್ನಲ್ಲೇ ಗ್ರಾಮೀಣ ಪ್ರಾಥಮಿಕ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರು ಕೂಡಾ ಪತ್ರ ಬರೆದು ಸದಸ್ಯತ್ವ ಹಣವನ್ನು ವೇತನದಲ್ಲಿ ಕಟಾವಣೆ ಮಾಡಬೇಡಿ ಎಂದು ಪತ್ರವನ್ನು ಬರೆದು ವಿರೋಧ ವನ್ನು ಮಾಡಿದ್ದರು ಇವರಿಬ್ಬರ ಬೆನ್ನಲ್ಲೇ ಈಗ ಮತ್ತೊರ್ವ ಶಿಕ್ಷಕರೊಬ್ಬರು ಸದಸ್ಯತ್ವ ಹಣದ ವಿಚಾರ ಕುರಿತಂತೆ ಧ್ವನಿ ಎತ್ತಿದ್ದಾರೆ.ಹೌದು ಅಲ್ಲದೇ ಹಣವನ್ನು ವೇತನದಲ್ಲಿ ಕಟಾವಣೆ ಮಾಡಬೇಡಿ ಎಂದು ಪತ್ರವನ್ನು ಬರೆದಿದ್ದಾರೆ.

ಹೌದು L I ಲಕ್ಕಮ್ಮನವರ ಧಾರವಾಡ ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದ ಉರ್ದು ಶಾಲೆಯ ಶಿಕ್ಷಕರು ಗ್ರಾಮೀಣ ಪ್ರಾಥಮಿಕ ಶಾಲೆಯ ಸದಸ್ಯರು ಹಾಗೂ ಗೌರವಾಧ್ಯಕ್ಷರಾಗಿದ್ದಾರೆ.ಹೀಗಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಪ್ರತಿವರ್ಷ ಶಿಕ್ಷಕರ ವೇತನದಲ್ಲಿ ಪ್ರತಿಯೊಬ್ಬ ಶಿಕ್ಷಕರ ವೇತನ ದಲ್ಲಿ ಕಟಾವಣೆ ಮಾಡುತ್ತಿದ್ದು ನಾನು ಗ್ರಾಮೀಣ ಸಂಘದಲ್ಲಿ ರಾಜ್ಯ ಹಿರಿಯ ಸ್ಥಾನದಲ್ಲಿದ್ದು ಹೀಗಿರು ವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿ.ರಾಜ್ಯ ಘಟಕ ಬೆಂಗಳೂರ ಇದರ ವಾರ್ಷಿಕ ಸದಸ್ಯತ್ವ ಶುಲ್ಕ ರೂ.ಎರಡನೂರುನ್ನು ನನ್ನ ವೇತನದಲ್ಲಿ ಕಟಾವಣೆ ಮಾಡಬಾರದೆಂದು ಅಸಮ್ಮತಿ ಪತ್ರವನ್ನು ಧಾರವಾಡ ಗ್ರಾಮೀಣ ವಲಯದ ವೇತನ ಸೆಳೆಯುವ ಅಧಿಕಾರಿಗಳಾಗಿ ರುವ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಂಬಂಧಿಸಿದ ವಿಳಾಸಕ್ಕೆ ಪತ್ರ ತಲುಪಿಸಿ ಕೋರಿಕೊಂಡಿದ್ದಾರೆ.ಈ ದಿಸೆಯಲ್ಲಿ ನಮ್ಮ ಕ.ಸ.ಗ್ರಾ.ಪ್ರಾ.ಶಾ.ಶಿ.ಸಂಘದ ಸರ್ವ ಸದಸ್ಯರುಗಳು ರಾಜ್ಯಾದ್ಯಂತ ತಮ್ಮ ತಮ್ಮ ಬಿ.ಇ.ಓ.ರವರಿಗೆ ವೈಯಕ್ತಿವಾಗಿ ಲಿಖಿತ ಅಸಮ್ಮತಿ ಪತ್ರ ಸಲ್ಲಿಸಲು ನನ್ನ ವೈಯಕ್ತಿಕ ವಿನಯ ವಿನಂತಿ ಯಾಗಿರುತ್ತದೆ ಎಂದಿದ್ದಾರೆ.ಇದರೊಂದಿಗೆ ಆ ಸಂಘ ದ ವಿರುದ್ದ ಮತ್ತೊರ್ವ ಶಿಕ್ಷಕರು ಸಿಡಿದೆದ್ದಿದ್ದು ನಿಜ ವಾದ ಕಾರಣ ಏನು ಯಾತಕ್ಕಾಗಿ ಧ್ವನಿ ಎತ್ತಿದ್ದಾರೆ ಈ ಕುರಿತಂತೆ ಆ ಸಂಘದವರು ಆತ್ಮಾವಲೋಕನ ಮಾಡಿಕೊಳ್ಳೊದು ಅವಶ್ಯಕವಿದೆ ಇಲ್ಲವಾದರೆ ಬರು ವ ದಿನಗಳಲ್ಲಿ ಈ ಒಂದು ಸಮಸ್ಯೆ ಗಂಭೀರವಾಗ ಲಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.