ಸರಕಾರಿ ಆಸ್ಪತ್ರೆಯಲ್ಲಿ ಆರ್.ಎಸ್. ಎಸ್ ಕೋರೋಣ ಸಹಾಯವಾಣಿ ಆರಂಭಿಸಿರಿವುದಕ್ಕೆ ಆಕ್ಷೇಪ‌ ಹುಬ್ಬಳ್ಳಿ ಧಾರವಾಡ ಮಹಾನಗರ ಕಾಂಗ್ರೆಸ್ ಪಕ್ಷದಿಂದ ಮನವಿ…..

Suddi Sante Desk

ಧಾರವಾಡ –

ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷದ ಪಿತೃ ಪಕ್ಷ ರಾಷ್ಟೀಯ ಸೇವಾ ಸಂಘಟನೆಯ ಸೇವಾ ಭಾರ ತೀಯ ಟ್ರಸ್ಟಿನ ಮುಖಾಂತರ ಹುಬ್ಬಳ್ಳಿಯ ಪ್ರತಿಷ್ಠಿತ ಆಸ್ಪತ್ರೆಯಾದ ಕಿಮ್ಸ್ ಆಸ್ಪತ್ರೆಯಲ್ಲಿ ಆರ್.ಎಸ್. ಎಸ್ ನ್ ಸೇವಾ ಭಾರತೀಯ ಟ್ರಸ್ಟ್, ಕೋರೋಣ ಸಹಾಯವಾಣಿ ಕೇಂದ್ರವನ್ನು ಸರಕಾರಿ ಅಸ್ತಿಯಲ್ಲಿ ತೆಗೆದಿರುವುದಕ್ಕೆ ನಾವು ಆಕ್ಷೇಪ ವ್ಯಕ್ತವಾಗಿದೆ.

ಈ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಸ್ವತಃ ಕಿಮ್ಸ್ ನಿರ್ದೇಶಕರಾದ ಡಾ. ರಾಮಲಿಂಗಪ್ಪ ಅಂಟರದಾನಿ ಅಥಿತಿಗಳಾಗಿ ಆಗಮಿಸಿದಕ್ಕೆ ನಮ್ಮ ವಿರೋಧವಿದೆ.
ತಾವು ಹಾಗು ಜಿಲ್ಲಾಧಿಕಾರಿ ಕಚೇರಿಯಿಂದ ಕೋವಿ ಡ್ ವಾರಿಯರ್ಸ್ ಅಧಿಕಾರಿಗಳ ಪಟ್ಟಿಯನ್ನು ಬಿಡು ಗಡೆ ಮಾಡಿ ಪತ್ರಿಕಾ ಪ್ರಕಟಣೆ ನೀಡಿದ್ರು ಕೂಡಾ ಒಂದು ಪಕ್ಷಕ್ಕೆ ಸೀಮಿತವಾದ ಸಂಘಟನೆಗೆ ಸರಕಾರಿ ಅಸ್ತಿಯಲ್ಲಿ ಕೋವಿಡ್ ಸಹಾಯವಾಣಿ ಕೇಂದ್ರ ತೆರೆ ಯಲು ಅನುಮತಿ ಕೊಟ್ಟಿದ್ದು ಅಕ್ಷಪಣೆಯ ವಿಚಾರ.

ಕೂಡಲೇ ತಾವು ಕಿಮ್ಸ್ ನಿರ್ದೇಶಕರ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೇನೇ ಆರ್.ಎಸ್.ಎಸ್ ನವರು ಸರಕಾರಿ ಅಸ್ತಿಯಲ್ಲಿ ಸ್ಥಾಪಿಸಿರುವ ಸಹಾಯವಾಣಿ ಕೇಂದ್ರವನ್ನು ತೆರವುಗೊಳಿಸಲು ಆದೇಶ ನೀಡಬೇ ಕು, ಇಲ್ಲದೆ ಹೋದರೆ ಇದರ ವಿರುದ್ಧ ನಾವು ನ್ಯಾಯಾಂಗ ಹೋರಾಟಕ್ಕೆ ಬದ್ಧರಾಗಿದ್ದಿವಿ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಒಂದು ಸಮಯ ದಲ್ಲಿ ಮಂಜುನಾಥ ಬೋವಿ,ಪ್ರಕಾಶ ಸೇರಿದಂತೆ ಹಲವರು ಉಪಸ್ಥಿತರಿದ್ದರು

ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಮನವಿ ನೀಡಲಾಯಿತು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.