ಧಾರವಾಡ ದಲ್ಲಿ ಬಿಜೆಪಿ ಯುವ ಮೋರ್ಚಾ ದಿಂದ ಮೆಚ್ಚುಗೆಯ ಕೆಲಸ – ನಿರ್ಗತಿಕ ಜನರಿಗೆ ಬೆಡ್ ಶೀಟ್,ಚಾದರ್ ವಿತರಣೆ…..

Suddi Sante Desk

ಧಾರವಾಡ –

ಬಿಜೆಪಿ ಯುವ ಮೋರ್ಚಾ ಧಾರವಾಡ ನಗರ ಘಟಕ-71ರ ವತಿಯಿಂದ ‘ಸೇವೆ ಮತ್ತು ಸಮರ್ಪಣೆ ಅಭಿಯಾನದ’ ಅಂಗವಾಗಿ ಧಾರವಾಡದ ವಿವಿಧ ಬೀದಿಗಳಲ್ಲಿ ಇರುವ ಜನರಿಗೆ ಬೆಡ್ ಶೀಟ್,ಚಾದರ್ ವಿತರಣೆ ಹಾಗೂ ಪ್ರಾಣಿ ಗಳಿಗೆ ಆಹಾರ,ಹಾಲು ವಿತರಣೆ ಮಾಡಲಾಯಿತು.

ಯುವ ಮೋರ್ಚಾ ಮಂಡಲ ಅಧ್ಯಕ್ಷರಾದ ಶಕ್ತಿ ಹಿರೇಮಠ ಅವರ ನೇತೃತ್ವದಲ್ಲಿ ಈ ಒಂದು ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ಯುವ ಮೋರ್ಚಾ ಪ್ರಧಾನ ಕಾರ್ಯ ದರ್ಶಿ ವಿನಯ ಗೊಂದಳಿ ಮುತ್ತು ಬನ್ನುರ,ಸುರಂಜನ ಗುಂಡೆ,ಸಚಿನ ಚವ್ನನ,ಸಾಗರ ಜೋಷಿ,ರಾಜೇಶ್ ನಾಯ್ಕ, ವಿನಾಯಕ ಬೋಳೆ,ಹಾಗೂ ಪ್ರಮುಖ ಪದಾಧಿಕಾರಿ ಗಳು,ಕಾರ್ಯಕರ್ತರು ಉಪಸ್ಥಿತರಿದ್ದರು

ಸಾಮಾನ್ಯವಾಗಿ ಹಾಗೇ ಹೀಗೆ ಅಂತಾ ವೇದಿಕೆಯ ಕಾರ್ಯಕ್ರಮ ವನ್ನು ಮಾಡದೇ ಹೀಗೆ ವಿಶೇಷವಾಗಿ ಕಾರ್ಯಕ್ರಮ ಮಾಡುವ ಮೂಲಕ ಜನ ಮೆಚ್ಚುಗೆ ಪಡೆದುಕೊಂಡರು. ಇದರೊಂದಿಗೆ ಕೇವಲ ರಾಜಕೀಯ ಅಷ್ಟೇ ಅಲ್ಲದೇ ಅದರೊಂದಿಗೆ ಸಾಮಾಜಿಕ ಜವಾಬ್ದಾರಿ ಯನ್ನು ತೋರಿಸಿಕೊಟ್ಟರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.