ತಲ್ವಾರ್ ನಿಂದ ಕೇಕ್ ಕತ್ತರಿಸಿದ್ದವ ಬಂಧನ – ಧಾರವಾಡ ಗ್ರಾಮೀಣ ಪೊಲೀಸರಿಂದ ಬಂಧನ ಸುದ್ದಿ ಸಂತೆ ಫಲಶೃತಿ…..

Suddi Sante Desk

ಧಾರವಾಡ –

ಧಾರವಾಡದಲ್ಲಿ ತಲ್ವಾರ್ ನಿಂದ ಕೇಕ್ ಕಟ್ ಮಾಡಿಕೊಂಡು ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಂಡಿದ್ದ ಪ್ರವೀಣ ಸಂಧೀಮನಿ ಅವನನ್ನು ಧಾರವಾಡದ ಗ್ರಾಮೀಣ ಪೊಲೀಸರು ಬಂಧನ ಮಾಡಿದ್ದಾರೆ.

ಹೌದು ನಿನ್ನೆ ಹುಟ್ಟು ಹಬ್ಬದ ಹಿನ್ನಲೆ ಯಲ್ಲಿ ಹಳಿಯಾಳ ರಸ್ತೆಯಲ್ಲಿನ ಸಾಯಿ ದಾಬಾ ದಲ್ಲಿ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಂಡಿದ್ದ ಈ ಒಂದು ಸಮಯದಲ್ಲಿ ತಲ್ವಾರ್ ನಿಂದ ಕೇಕ್ ಕಟ್ ಮಾಡಿ ನಂತರ ಆ ಒಂದು ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು.

ಇನ್ನೂ ಈ ಕುರಿತಂತೆ ಸುದ್ದಿ ಸಂತೆ ಕೂಡಾ ಸುದ್ದಿಯನ್ನು ಪ್ರಸಾರ ಮಾಡಿತ್ತು.ವರದಿ ಪ್ರಸಾರಗೊಂಡ ಬೆನ್ನಲ್ಲೇ ಅತ್ತ ಧಾರವಾಡದ ಗ್ರಾಮೀಣ ಪೊಲೀಸರು ಪ್ರವೀಣ ಸಂದೀಮನಿ ಎಂಬುವನನ್ನು ಬಂಧನ ಮಾಡಿದ್ದಾರೆ.

ಇನ್ಸ್ಪೇಕ್ಟರ್ ಶ್ರೀಧರ ಸತಾರೆ ಮತ್ತು ಟೀಮ್ ಬಂಧನ ಮಾಡಿ ನ್ಯಾಯಾಧೀಶರ ಮುಂದೆ ಹಾಜರು ಮಾಡಿದ್ದಾರೆ. ಸಧ್ಯ ಪ್ರವೀಣನಿಗೆ ಪೊಲೀಸರು ಕಾನೂನಿನ ಕ್ರಮವನ್ನು ಕೈಗೊಂಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.