ಧಾರವಾಡ –
ಕಲಘಟಗಿಯ ಅಕ್ರಮ ಕಲ್ಲುಕ್ವಾರಿ ಮೇಲೆ ದಾಳಿ ಮಾಡಲಾಗಿದೆ.ಖಚಿತ ಮಾಹಿತಿಯ ಮೇರೆದೆ ದಾಳಿ ನಡೆಸಿದ್ದಾರೆ ಅಧಿಕಾರಿಗಳು.ಕಲಘಟಗಿ ತಾಲೂಕಿನ ಮುತ್ತಗಿ ಗ್ರಾಮದ ಶಿವಚಂದ್ರನ್ ಸ್ಟೋನ್ ಕ್ರಷರ್ ಯೂನಿಟ್ ಮೇಲೆ ದಾಳಿ ಮಾಡಲಾಗಿದೆ.Dy SP ಅನಿಲ್ ಕುಮಾರ ಮತ್ತು ಇಂಟರ್ನಲ್ ಸೆಕ್ಯೂರಿಟಿ ದಿವಿಜನ್ ಬೆಳಗಾವಿ ವಿಭಾಗದ ಪಿಐ ಜಯಶ್ರೀ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.
234 ಜಿಲೆಟಿನ್ ಕಡ್ಡಿ, ಮಗ್ ಬಾಕ್ಸ್ ಹಾಗೂ ಸ್ಫೋಟಕ ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.ಯೂನಿಟ್ ಮಾಲಿಕ ಶಿವಕುಮಾರ ಪಾಟೀಲ್ ವಿರುದ್ಧ ಕಲಘಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಸಧ್ಯ ಇವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡಲಾಗುತ್ತಿದೆ.