ಧಾರವಾಡ ದ ನವಲಗುಂದ ದಲ್ಲಿ ಮುಳ್ಳಿನ ಕಂಟೆಯಲ್ಲಿ ಪತ್ತೆಯಾದ ಗಂಡು ಮಗು – ಆಗಷ್ಟೇ ಜನಿಸಿದ ಮಗುವನ್ನು ಎಸೆದು ಹೋದ ಪೋಷಕರ ಪತ್ತೆಗೆ ಪೊಲೀಸರ ಸೂಚನೆ…..

Suddi Sante Desk

ಧಾರವಾಡ –

ಧಾರವಾಡದ ನವಲಗುಂದ ದ ಬಸ್ ಡಿಪೋ ಬಳಿ ಮುಳ್ಳಿನ ಕಂಟೆಯಲ್ಲಿ ಹಸುಗೂಸನ್ನು ಹೋಗೆಯ ಲಾಗಿದೆ ಹೌದು ಸಲೀಂ ಚಿಕ್ಕೋಡಿ ಎಂಬುವವರಿಗೆ 14-09-2021 ರಂದು ರಾತ್ರಿ 10.00 ಗಂಟೆಯ ಸುಮಾರಿಗೆ ನವಲಗುಂ ದದ ಕೆ.ಎಸ್.ಆರ್.ಟಿ.ಸಿ ಬಸ್ ಡೀಪೋ ಬಳಿ ಇರುವ ಅಪ್ಪಾಜಿ ಡಾಬಾದ ಬಳಿ ಮುಳ್ಳಿನ ಕಂಟಿಯಲ್ಲಿ ಅಂದೇ ಜನಿಸಿದ ಗಂಡು ಮಗು ದೊರೆತಿದೆ.ಮಗುವಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಮತ್ತು ವೈದ್ಯಕೀಯ ಚಿಕಿತ್ಸೆಯನ್ನು ಕೊಡಿಸಿರುತ್ತಾರೆ.

ದಿನಾಂಕ:08-12-2021 ರಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಈ ರೀತಿಯಾಗಿ ಸಿಕ್ಕ ಮಗುವನ್ನು ಸಾಕುವುದು ಅಪರಾಧವೆಂದು ತಿಳಿಸಿ, ನವಲಗುಂದ ಪೊಲೀಸ ಠಾಣೆಯಲ್ಲಿ ಐ.ಪಿ.ಸಿ ಕಲಂ 317 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ದಿನಾಂಕ:09-12-2021 ರಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರ ಆದೇಶದ ನ್ವಯ ಮಗುವನ್ನು ಅಮೂಲ್ಯ (ಜಿ) ಶಿಶುಗೃಹ ಸಂಸ್ಥೆಗೆ ತಾತ್ಕಾಲಿಕ ಪಾಲನೆ-ಪೋಷಣೆಗಾಗಿ ದಾಖಲಿಸಿ ಮಗುವಿಗೆ ಅಥರ್ವ ಎಂದು ಸಂಸ್ಥೆಯಿಂದ ನಾಮಕರಣ ಮಾಡಲಾ ಗಿದೆ.

ಇನ್ನೂ ಈ ಮಗುವಿನ ಪಾಲಕರು,ಪೋಷಕರ ಕುರಿತು ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ.ಆದ್ದರಿಂದ ಮಗುವಿನ ಪಾಲಕರು,ಪೋಷಕರ ಕಾನೂನು ರೀತಿ ಹಕ್ಕುಳ್ಳವರು ಎಲ್ಲಿದ್ದರೂ 02 ತಿಂಗಳ ಅವಧಿ ಮುಗಿಯು ವದರ ಒಳಗಾಗಿ ಅಮೂಲ್ಯ(ಜಿ) ಶಿಶುಗೃಹ ಹುಬ್ಬಳ್ಳಿ ಅಧೀಕ್ಷಕರನ್ನು ಅಥವಾ ನವಲಗುಂದ ಪೊಲೀಸ ಠಾಣೆ ಯನ್ನು ಸಂಪರ್ಕಿಸಬೇಕು.ಒಂದು ವೇಳೆ ಯಾರೂ ವಾರಸದಾರರು ಬಾರದ ಪಕ್ಷದಲ್ಲಿ ಕಾನೂನು ರಿತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.