ಬೆಂಗಳೂರು –
ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳ ಶಾಲೆಗಳಲ್ಲಿ ಬಿಸಿಯೂಟದೊಂದಿಗೆ ಮೊಟ್ಟೆ ವಿತರಿಸುವ ಯೋಜನೆ ಯನ್ನು ಈಗಾಗಲೇ ರಾಜ್ಯದ ಎಲ್ಲಾ ಶಾಲೆಗಳಿಗೆ ವಿಸ್ತರಿಸು ವ ಪ್ರಸ್ತಾವನೆಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದ್ದು ಆರಂಭ ಕೂಡಾ ಮಾಡಲಾಗಿದ್ದು ಇನ್ನೂ ಬಿಸಿಯೂಟ ದಲ್ಲಿ ಮೊಟ್ಟೆ ಯನ್ನು ತಿನ್ನಲಾರದವರಿಗೆ ಬೇರೆಬೇರೆ ರೀತಿಯ ಅಹಾರ ಪದಾರ್ಥಗಳನ್ನು ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
ಹೌದು ಒಂದರಿಂದ ಎಂಟನೇ ತರಗತಿ ಮಕ್ಕಳಿಗೆ ಊಟದ ಜೊತೆಗೆ ಮೊಟ್ಟೆ ನೀಡಲಿದ್ದು ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ಶೇಂಗಾ ಚಿಕ್ಕಿ ಕೊಡಲಾಗುತ್ತದೆ.ರಾಜ್ಯದ ಎಲ್ಲಾ ಶಾಲೆಗಳಲ್ಲಿಯೂ ಮಕ್ಕಳಿಗೆ ವರ್ಷದಲ್ಲಿ 100 ದಿನ ಬಿಸಿ ಊಟದೊಂದಿಗೆ ಬೇಯಿಸಿದ ಮೊಟ್ಟೆ ವಿತರಿಸಲು ಮತ್ತು ಮೊಟ್ಟೆ ಸೇವಿಸದ ಮಕ್ಕಳಿಗೆ ಶೇಂಗಾ ಚಿಕ್ಕಿ ಅಥವಾ ಬಾಳೆ ಹಣ್ಣು ನೀಡಲು ಶಿಕ್ಷಣ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಿದ್ದು ಸಿದ್ದತೆ ನಡೆಸಿದೆ
ಈಗಾಗಲೇ ಆರ್ಥಿಕ ಇಲಾಖೆ 46 ದಿನಗಳಿಗೆ ಮೊಟ್ಟೆ ವಿತರಿ ಸಲು ಒಪ್ಪಿಗೆ ನೀಡಿದೆ.
ಪಿ ಹೆಚ್ ಚಕ್ರವರ್ತಿ ಜೊತೆ ಮಂಜುನಾಥ್ ಬಡಿಗೇರ ಸುದ್ದಿ ಸಂತೆ ನ್ಯೂಸ್ ಬೆಂಗಳೂರು