ಜಲ ಮಂಡಳಿಯ ಕಾರ್ಮಿಕರ ಹೋರಾಟಕ್ಕೆ ಬಂಗಾರೇಶ ಹಿರೇಮಠ ಬೆಂಬಲ ಜಿಲ್ಲಾ INTUS ಸಂಘಟನೆ ಯಿಂದ ಬೆಂಬಲ…..

Suddi Sante Desk

ಧಾರವಾಡ –

ಕೆಲವೊಂದಿಷ್ಟು ಬೇಡಿಕೆ ಗಳನ್ನು ಮುಂದಿಟ್ಟುಕೊಂಡು ಧಾರವಾಡ ದ ಜಲ ಮಂಡಳಿ ಯಲ್ಲಿ ನಡೆಯುತ್ತಿರುವ ಕಾರ್ಮಿಕರ ಹೋರಾಟ ಮುಂದುವರೆದಿದೆ.ಇನ್ನೂ ಈ ಒಂದು ಕಾರ್ಮಿಕರ ಹೋರಾಟಕ್ಕೆ ಜಿಲ್ಲಾ INTUS ಸಂಘಟನೆ ಯಿಂದ ಬೆಂಬಲವನ್ನು ನೀಡಲಾಗಿದ್ದು ಬಂಗಾರೇಶ ಹಿರೇಮಠ ನೇತೃತ್ವದಲ್ಲಿ ಕಾರ್ಮಿಕರ ಧರಣಿ ಗೆ ಬೆಂಬಲವನ್ನು ನೀಡಲಾಯಿತು

ಹೌದು ಧಾರವಾಡದ ಜಲ ಮಂಡಳಿ ಕಾರ್ಮಿಕರ ಹೋರಾ ಟಕ್ಕೆ ಜಿಲ್ಲಾ INTUC ಸಂಪೂರ್ಣ ಬೆಂಬಲವನ್ನು ನೀಡಲಾ ಯಿತು.ಜಲಮಂಡಳಿ ನಿರ್ವಹಣೆಯನ್ನು ಖಾಸಗಿ ಕಂಪನಿಗೆ (ಎಲ್ ಅಂಡ್ ಟಿ)ಗೆ ಹಸ್ತಾಂತರಿಸಿದ್ದನ್ನು ಖಂಡಿಸಿ ನಗರದ ಜಲಮಂಡಳಿ ಕಚೇರಿ ಆವರಣದಲ್ಲಿ ಈ ಒಂದು ಹೋರಾಟ ವನ್ನು ಕಾರ್ಮಿಕರು ಮಾಡತಾ ಇದ್ದಾರೆ.

ಧರಣಿಗೆ ಧಾರವಾಡ ಜಿಲ್ಲಾ INTUC ಅಧ್ಯಕ್ಷ ಬಂಗಾರೇಶ ಹಿರೇಮಠ ಬೆಂಬಲಿಸಿ ಪಾಲ್ಗೊಂಡು ಜಲ ಮಂಡಳಿ ಕಾರ್ಮಿಕರಿಗೆ ನಿಮ್ಮ ಹೋರಾಟದಲ್ಲಿ ನಾವು ನ್ಯಾಯ ಸಿಗುವವರೆಗೂ ಜೊತೆಗೆ ಇರುತ್ತೇವೆ ಎಂದು ಸಂಪೂರ್ಣ ಬೆಂಬಲ ವ್ಯಕ್ತ ಪಡಿಸಿದರು. ಈ ಒಂದು ಸಂದರ್ಭದಲ್ಲಿ INTUC ಪದಾಧಿಕಾರಿಗಳಾದ ಯಲ್ಲಪ್ಪ ಮೇಹರವಾಡೆ, ರಾಜೀವ ಲದ್ವಾ,ಬಸವರಾಜ ಮೇಣಸಗಿ,ರಿಚರ್ಡ್ ನಿಲಗಾರ್ ಮುಂತಾದವರು ಉಪಸ್ಥಿತರಿದ್ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.