ಬರ್ಬರವಾಗಿ ಯುವಕನ ಕೊಲೆ – ಬೆಚ್ಚಿ ಬಿದ್ದ ಎಸ್ ಎಮ್ ಕೃಷ್ಣಾ ನಗರ

Suddi Sante Desk

ಹುಬ್ಬಳ್ಳಿ –

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೇ ನೆತ್ತರು ಹರಿದಿದಿ. ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ನಗರದ ಕಸಬಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಎಸ್ ಎಮ್ ಕೃಷ್ಣಾ ನಗರದಲ್ಲಿ ಕೊಲೆಯಾಗಿದೆ.

ಶಾರುಖ್ ಸೌದಾಗರ್ ಎಂಬ ಯುವಕನೇ ಕೊಲೆಯಾದ ಯುವಕನಾಗಿದ್ದಾರೆ. ಸಲೀಂ ಬಳ್ಳಾರಿ ಮತ್ತು ಗ್ಯಾಂಗ್ ನವರು ಶಾರುಖ್ ನನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಸಂಶಯವನ್ನು ವ್ಯಕ್ತಪಡಿಸಿದ್ದಾರೆ. ಎಸ್ ಎಮ್ ಕೃಷ್ಣಾ ನಗರದಲ್ಲಿ ಶಾರುಖ್ ಸೌದಾಗರ್ ನಿಂತುಕೊಂಡಿದ್ದ ಮಾಹಿತಿ ತಿಳಿದ ಸಲೀಂ ಬಳ್ಳಾರಿ ಮತ್ತು ಗ್ಯಾಂಗ್ ಮೊದಲು ಕೈಯಿಂದ ಹಲ್ಲೆಯನ್ನು ಮಾಡಿದ್ದಾರೆ. ನಂತರ ಮಾರಕಾಸ್ತ್ರಗಳಿಂದ ಹೊಡೆದಿದ್ದಾರೆ. ತೀವ್ರವಾಗಿ ಗಾಯಗೊಂಡ ಶಾರುಖ್ ಸೌದಾಗರ್ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ.

ಇನ್ನೂ ಕೊಲೆಯ ವಿಷಯ ತಿಳಿದ ಕಸಬಾ ಪೊಲೀಸ್ ಠಾಣೆ ಪೊಲೀಸ್ ಇನಸ್ಪೇಕ್ಟರ್ ರತನಕುಮಾರ್ ಜೀರಗ್ಯಾಳ ಮತ್ತು ಸಿಬ್ಬಂದಿಗಳು ಸ್ಥಳಕ್ಕೇ ಆಗಮಿಸಿ ಪರಿಶೀಲನೆ ಮಾಡಿದರು. ಸಧ್ಯ ಕೊಲೆಯಾದ ಯುವಕ ಶಾರುಖ್ ಸೌದಾಗರ್ ಮೃತ ದೇಹ ಕಿಮ್ಸ್ ಶವಾಗಾರದಲ್ಲಿದ್ದು ಇನ್ನೂ ಇತ್ತ ಕಸಬಾ ಪೊಲೀಸ್ ಠಾಣಾ ಸಿಬ್ಬಂದಿಗಳು ಕೊಲೆ ಮಾಡಿದ ಎಸ್ಕೇಫ್ ಆಗಿರುವ ಆರೋಪಿಗಳ ಬಂಧನಕ್ಕೇ ಜಾಲ ಬೀಸಿದ್ದು ಕೊಲೆಗೆ ನಿಖರವಾದ ಕಾರಣವನ್ನು ಹುಡುಕುತ್ತಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.