This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

ಅಪಘಾತದಲ್ಲಿ ಸಾವಿಗೀಡಾದ ಧಾರವಾಡದ ಕೃಷಿ ವಿ ವಿ ಇಬ್ಬರು ಯುವತಿಯರ ಸಾವಿನ ತನಿಖೆಯಾಗಲಿ – ಬಸವರಾಜ ಕೊರವರ ಒತ್ತಾಯ

WhatsApp Group Join Now
Telegram Group Join Now

ಧಾರವಾಡ –

ಜನವರಿ 31 ರಂದು ಅಂಕೋಲಾ ತಾಲೂಕಿನ ಮಾಸ್ತಿಕಟ್ಟಿ‌ ಬಳಿ ನಡೆದಿದ್ದ ಅಪಘಾತದಲ್ಲಿ ಸಾವಿಗೀಡಾದ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ನೌಕರರಾದ ರೇಖಾ ಮತ್ತು ಮೇಘನಾ ಇಬ್ಬರು ಯುವತಿಯರ ಸಾವಿನ ತನಿಖೆಯನ್ನು ಮಾಡುವಂತೆ ಧಾರವಾಡದಲ್ಲಿ ಜನಜಾಗೃತಿ ಸಂಘಟನೆಯ ಮುಖಂಡ ಬಸವರಾಜ ಕೊರವರ ಒತ್ತಾಯ ಮಾಡಿದ್ದಾರೆ. ಧಾರವಾಡದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಯುವತಿಯರು, ಬಾಗಲಕೋಟೆ ಕೃಷಿ ವಿಶ್ವವಿದ್ಯಾಲಯಕ್ಕೆ ಹೋಗುವುದಾಗಿ ಮನೆಯಲ್ಲಿ ಹೇಳಿ, ಕೃಷಿ ವಿಶ್ವವಿದ್ಯಾಲಯದ ಕುಲಪತಿ ಆಪ್ತ ಕಾರ್ಯದರ್ಶಿ ಮುಲ್ಲಾ ಜೊತೆ ಗೋವಾಗೆ ತೆರಳಿದ್ದರು.ವಾಪಸ್ ಬರುವಾಗ ಅಪಘಾತ ಸಂಭವಿಸಿ ಇಬ್ಬರೂ ಯುವತಿಯರು ಮರಣ ಹೊಂದಿರುವ ವಿಚಾರ ಕುರಿತು ಗಂಭೀರವಾಗಿ ತಗೆದುಕೊಳ್ಳುವಂತೆ ಒತ್ತಾಯವನ್ನು ಮಾಡಿದರು.

ಕೃಷಿ ವಿಶ್ವವಿದ್ಯಾಲಯದ ಕುಲಪತಿ ಆಪ್ತ ಕಾರ್ಯದರ್ಶಿ ಮುಲ್ಲಾ ಯುವತಿಯರಿಗೆ ಕಿರುಕುಳ ನೀಡುತ್ತಿದ್ದರು ಎಂದರು.ಇನ್ನೂ ಮುಲ್ಲಾ ಕಿರುಕುಳ ನೀಡುತ್ತಿದ್ದ ವಿಷಯವನ್ನು ಮೇಘನಾ ತನ್ನ ಗೆಳೆತಿಯೊಂದಿಗೆ ಹಂಚಿಕೊಂಡಿದ್ದಳು ಎಂದು ಕೊರವರ ಅವರು ಹೇಳಿದರು

ಇದೀಗ ಈ ವಿಷಯ ಬಹಿರಂಗವಾಗಿದೆ. ಡಿಸೆಂಬರ್ ತಿಂಗಳೇ ನಿನ್ನ ಕೆಲಸ ಕೊನೆ ಎಂದು ಮುನ್ನ ಹೇಳುತ್ತಿದ್ದರಂತೆ. ಇದರಿಂದ ನನಗೆ ತುಂಬಾ ಆತಂಕವಾಗುತ್ತಿದೆ ಎಂದು ಮೇಘನಾ ನೋವು ತೋಡಿಕೊಂಡಿದ್ದರು. ಆತಂಕವನ್ನೇ ವೈಯಕ್ತಿಕ ಲಾಭಕ್ಕೆ ಮುಲ್ಲಾ ಬಳಸಿಕೊಂಡಿದ್ದರು ಎಂಬ ಶಂಕೆ ಇದೀಗ ಮೂಡಿದ್ದು ಇದನ್ನು ತನಿಖೆ ಮಾಡುವಂತೆ ಬಸವರಾಜ ಕೊರವರ ಒತ್ತಾಯ ಮಾಡಿದರು.

ಪ್ರಕರಣದ ತನಿಖೆಯ ಜೊತೆಯಲ್ಲಿ ಇನ್ನೂ ಕೃಷಿ ವಿಶ್ವವಿದ್ಯಾಲಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅವ್ಯವಹಾರ ಆಗಿದ್ದು ಇದನ್ನು ತನಿಖೆ ಮಾಡುವಂತೆ ಜನಜಾಗೃತಿ ಸಂಘಟನೆ ಆಗ್ರಹಿಸಿದೆ.


Google News

 

 

WhatsApp Group Join Now
Telegram Group Join Now
Suddi Sante Desk